ಜೂನ್‌ 14ಕ್ಕೆ “ರುಸ್ತುಂ’ ತೆರೆಗೆ

ಭರ್ಜರಿ ಆ್ಯಕ್ಷನ್‌ನಲ್ಲಿ ಸೆಂಚುರಿ ಸ್ಟಾರ್‌ ಶಿವಣ್ಣ

Team Udayavani, May 9, 2019, 3:00 AM IST

Rustom

ಶಿವರಾಜಕುಮಾರ್‌ ಅಭಿನಯದ “ರುಸ್ತುಂ’ ಚಿತ್ರದ ಸ್ಟಿಲ್‌ಗ‌ಳನ್ನು ನೋಡಿದವರಿಗೆ ಇದೊಂದು ಪಕ್ಕಾ ಆ್ಯಕ್ಷನ್‌ ಸಿನಿಮಾ ಎಂಬುದು ಗೊತ್ತಿರುತ್ತದೆ. ಆ ಮಟ್ಟಿಗೆ ಸಖತ್‌ ರಗಡ್‌ ಆಗಿ “ರುಸ್ತುಂ’ನಲ್ಲಿ ಶಿವರಾಜಕುಮಾರ್‌ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಅವರ ಮಾಸ್‌ಪ್ರಿಯ ಅಭಿಮಾನಿಗಳು ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

ಹಾಗಾದರೆ ಚಿತ್ರ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಅದು ಜೂನ್‌ 14. ಹೌದು, “ರುಸ್ತುಂ’ ಚಿತ್ರ ಜೂನ್‌ 14 ರಂದು ತೆರೆಕಾಣಲಿದೆ. ಈ ಮೂಲಕ ಮಾಸ್‌ಪ್ರಿಯರ ಕುತೂಹಲವನ್ನು ತಣಿಸಲಿದೆ. ಜಯಣ್ಣ ನಿರ್ಮಾಣದ ಈ ಚಿತ್ರವನ್ನು ರವಿವರ್ಮ ನಿರ್ದೇಶಿಸಿದ್ದಾರೆ.

ಸಾಹಸ ನಿರ್ದೇಶಕರಾಗಿ ಬೇಡಿಕೆಯಲ್ಲಿರುವ ರವಿವರ್ಮ ನಿರ್ದೇಶನದ ಚೊಚ್ಚಲ ಸಿನಿಮಾ “ರುಸ್ತುಂ’. ಚಿತ್ರದಲ್ಲಿ ಶಿವರಾಜಕುಮಾರ್‌ ಖಡಕ್‌ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಹಿಟ್‌ ಆಗಿರುವ ಜೊತೆಗೆ, ಸಿನಿಮಾದ ಬಗೆಗಿನ ಕುತೂಹಲವನ್ನು ಹೆಚ್ಚಿಸಿದೆ.

ಚಿತ್ರದಲ್ಲಿ ಶಿವಣ್ಣ ಸಖತ್‌ ಸ್ಟೆಪ್‌ ಹಾಕಿದ್ದು, ಆ್ಯಕ್ಷನ್‌ ಜೊತೆಗೆ ಅವರ ಡ್ಯಾನ್ಸ್‌ ಕೂಡಾ ಹೈಲೈಟ್ಸ್‌ ಎಂಬುದು ಚಿತ್ರತಂಡದ ಮಾತು. ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್‌, ವಿವೇಕ್‌ ಒಬೆರಾಯ್‌, ಮಯೂರಿ ಸೇರಿದಂತೆ ಅನೇಕರು ನಟಿಸಿದ್ದಾರೆ. ರವಿವರ್ಮ ಅವರು ಸ್ಟಂಟ್‌ ಮಾಸ್ಟರ್‌ ಆಗಿದ್ದವರು. “ರುಸ್ತುಂ’ ಅವರ ಮೊದಲ ಸಿನಿಮಾ.

ಚಿತ್ರವಿಡೀ ಆ್ಯಕ್ಷನ್‌ಮಯ ಆಗಿರುತ್ತಾ ಎಂಬ ಅನುಮಾನ ಸಹಜ. ಆ ಕುರಿತು ಹೇಳುವ ರವಿವರ್ಮ, “ಎಲ್ಲರಿಗೂ ಅಂಥದ್ದೊಂದು ಅನುಮಾನ ಇದ್ದೇ ಇರುತ್ತೆ. ಸ್ಟಂಟ್‌ ಮಾಸ್ಟರ್‌ ಸಿನಿಮಾದಲ್ಲಿ ಸ್ಟಂಟ್‌ ಹೆಚ್ಚಾಗಿರುತ್ತೆ. ಡ್ಯಾನ್ಸ್‌ ಮಾಸ್ಟರ್‌ ಚಿತ್ರದಲ್ಲಿ ಡ್ಯಾನ್ಸ್‌ಗೆ ಹೆಚ್ಚು ಒತ್ತು ಕೊಡಲಾಗಿರುತ್ತೆ ಎಂಬುದು. ಇಲ್ಲಿ ಒಳ್ಳೆಯ ಕಥೆ ಇದೆ. ಫ್ಯಾಮಿಲಿ ವಿಷಯವೂ ಇದೆ.

ಶಿವಣ್ಣ ಅಳ್ತಾರೆ, ಅಳಿಸುತ್ತಾರೆ, ತಂಗಿಯ ಸೆಂಟಿಮೆಂಟೂ ಇದೆ. ಭರ್ಜರಿ ಸ್ಟಂಟೂ ಇದೆ. ಎಮೋಷನ್ಸ್‌, ಅಲ್ಲಲ್ಲಿ ಹಾಸ್ಯ ಎಲ್ಲವೂ ಇದೆ. ಒಟ್ಟಾರೆ, “ರುಸ್ತುಂ’ ಒಂದು ಮನರಂಜನೆಯ ಸಿನಿಮಾ. ಈಗ ಹೊರಬಂದಿರುವ ಟ್ರೇಲರ್‌ನಲ್ಲಿ ಎಲ್ಲರಿಗೂ ಆ್ಯಕ್ಷನ್‌ ಸಿನಿಮಾ ಅನಿಸಬಹುದು. ಆದರೆ, ಅದರಾಚೆ ಹಲವು ಅಂಶಗಳಿದ್ದು, ಅದು ಸಿನಿಮಾ ನೋಡಿದಾಗ ಗೊತ್ತಾಗುತ್ತದೆ’ ಎನ್ನುತ್ತಾರೆ.

ಟಾಪ್ ನ್ಯೂಸ್

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.