ಆಯುರ್ವೇದದ ಮೊರೆ ಹೋದ ಎಚ್.ಡಿ.ದೇವೇಗೌಡ
Team Udayavani, May 12, 2019, 3:00 AM IST
ಕಾಪು: ಪತ್ನಿ ಚೆನ್ನಮ್ಮ ಅವರೊಂದಿಗೆ ಪ್ರಕೃತಿ ಚಿಕಿತ್ಸೆಗಾಗಿ ಮೂಳೂರು ಸಾಯಿರಾಧಾ ಹೆರಿಟೇಜ್ಗೆ ಆಗಮಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ದೇಹದ ಚೈತನ್ಯವನ್ನು ವರ್ಧಿಸಿಕೊಳ್ಳುವ ಉದ್ದೇಶದಿಂದ ಆಯುರ್ವೇದ ವೈದ್ಯ ಡಾ| ತನ್ಮಯ್ ಗೋಸ್ವಾಮಿ ಅವರ ಸಲಹೆಯಂತೆ ವಿವಿಧ ಚಿಕಿತ್ಸೆಗಳನ್ನು ಪಡೆಯುತ್ತಿದ್ದಾರೆ.
ಒಂದು ವಾರದ ಅಂತರದಲ್ಲಿ ಎರಡನೇ ಬಾರಿಗೆ ಮೂಳೂರಿಗೆ ಆಗಮಿಸಿರುವ ಗೌಡರು, ಈ ಬಾರಿ ಪತ್ನಿ ಚೆನ್ನಮ್ಮ ಅವರನ್ನೂ ಕರೆದುಕೊಂಡು ಬಂದಿದ್ದಾರೆ. ಇಬ್ಬರೂ ತಮ್ಮ ವಯೋಸಹಜ ತೊಂದರೆಗಳಿಗೆ ಅನುಗುಣವಾಗಿ ವೈದ್ಯರ ಸಲಹೆಯಂತೆ ವಿವಿಧ ಚಿಕಿತ್ಸೆಗಳನ್ನು ಪಡೆಯುತ್ತಿದ್ದಾರೆ.
ಇಬ್ಬರೂ ಮೇ 16ರವರೆಗೂ ಮೂಳೂರು ರೆಸಾರ್ಟ್ನಲ್ಲಿ ತಂಗಿ, ಆಯುರ್ವೇದ ಚಿಕಿತ್ಸೆ ಪಡೆಯಲಿದ್ದಾರೆ. ಈ ಬಾರಿ, ಆಯುರ್ವೇದ ಪಂಚಕರ್ಮ ಚಿಕಿತ್ಸೆ ಮತ್ತು ರಸಾಯನ ಆಯುರ್ವೇದ ಚಿಕಿತ್ಸೆಗೆ ಒತ್ತು ನೀಡಿರುವ ಡಾ| ತನ್ಮಯ್ ಗೋಸ್ವಾಮಿ ನೇತೃತ್ವದ ವೈದ್ಯರ ತಂಡ, ದೇವೇಗೌಡ ಮತ್ತು ಅವರ ಪತ್ನಿ ಚೆನ್ನಮ್ಮ ಅವರ ಆರೋಗ್ಯದ ಬಗ್ಗೆ ವಿಶೇಷ ಮುತುವರ್ಜಿ ನೀಡಿ ಶುಶ್ರೂಷೆ ನೀಡುತ್ತಿದೆ.