ಮಗ ಶಾಸಕನಾದರೂ ಬಿಡದ ಕೃಷಿ ವ್ಯಾಮೋಹ
Team Udayavani, May 13, 2019, 3:04 AM IST
ಬೆಳ್ತಂಗಡಿ: ಮಗ ಶಾಸಕನಾದರೂ ತಂದೆ ಸೈಕಲ್ನಲ್ಲಿ ಹಾಲು ಹಿಡಿದು ಸಾಗುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ತಂದೆ ಮುತ್ತಣ್ಣ ಪೂಂಜ (74) ತಮ್ಮ ಗರ್ಡಾಡಿ ಮನೆಯಲ್ಲಿ 30 ವರ್ಷಗಳಿಂದ ಕೃಷಿಯಲ್ಲಿ ತೊಡಗಿದ್ದಾರೆ.
1981ರಲ್ಲಿ ನಳಿನಿ ಎಂ.ಪೂಂಜ ಅವರನ್ನು ವಿವಾಹವಾಗಿ 1982ರಲ್ಲಿ ಸುಮಾರು 3 ಎಕರೆ ಜಾಗದಲ್ಲಿ 2 ಸಾವಿರ ಅಡಿಕೆ ಮತ್ತು ತೆಂಗಿನ ಕೃಷಿಯಲ್ಲಿ ತೊಡಗಿದ ಮುತ್ತಣ್ಣ ಅವರ ಕೃಷಿ ಪ್ರೀತಿ ಇಂದಿಗೂ ಮಾಸಿಲ್ಲ. ಕಳೆದ ಬಾರಿ ಮಗ ಬೆಳ್ತಂಗಡಿ ಶಾಸಕರಾಗಿ ಆಯ್ಕೆ ಆಗುವ ಸಂದರ್ಭದಲ್ಲೂ ಮುತ್ತಣ್ಣ ಅವರ ಸರಳ ಬದುಕಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು.
ಈಗ ಮಗ ಶಾಸಕನಾಗಿ ವರ್ಷ ಕಳೆದರೂ ಕೃಷಿ ಮತ್ತು ಹೈನುಗಾರಿಕೆಯನ್ನು ಮರೆಯದ ಅವರ ಜೀವನ ಪ್ರೀತಿ ಎಲ್ಲರಿಗೂ ಪ್ರೇರಣೆಯಾಗುವಂತಿದೆ. ಎರಡು ಹಸು ಸಾಕುತ್ತಿರುವ ಮುತ್ತಣ್ಣ ಬೆಳಗ್ಗೆ 8 ಲೀಟರ್, ಸಂಜೆ 4 ಲೀಟರ್ ಹಾಲನ್ನು ಸ್ಥಳೀಯ ಹಾಲಿನ ಡೇರಿಗೆ ಹಾಕುತ್ತಾರೆ.
ವಯಸ್ಸಾಗಿದ್ದರಿಂದ ಕೆಲಸದವರ ಮೂಲಕ ಹಾಲು ಕಳುಹಿಸುತ್ತೇನೆ. ಅವರು ತಡವಾದರೆ ನಾನೇ ಸೈಕಲ್ನಲ್ಲಿ ಹಾಲು ಹಾಕಿ ಬರುತ್ತೇನೆ ಎನ್ನುತ್ತಾರೆ ಮುತ್ತಣ್ಣ. ಮಗ ನಮ್ಮನ್ನು ಕೆಲಸ ಮಾಡದಂತೆ ಹೇಳುತ್ತಾನೆ, ಅದರೆ ಪತಿಯ ಖುಷಿಯಂತೆ ಕೃಷಿಯಲ್ಲಿ ತೊಡಗಿದ್ದೇವೆ ಎನ್ನುತ್ತಾರೆ ನಳಿನಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ