ಸದ್ಯಕ್ಕಿಲ್ಲ ತಾಲೂಕಿನಲ್ಲಿ ಮೇವಿನ ಕೊರತೆ

ಭತ್ತ , ರಾಗಿ ಒಕ್ಕಣೆ ಸಮಯದಲ್ಲಿ ಮೇವನ್ನು ಸಂಗ್ರಹಿಸಿಟ್ಟುಕೊಂಡಿರುವ ರೈತರು • 60 ದಿನಗಳಿಗಾಗುವಷ್ಟು ಮೇವು ದಾಸ್ತಾನು

Team Udayavani, May 19, 2019, 2:59 PM IST

hasan-tdy-3..

ಚನ್ನರಾಯಪಟ್ಟಣದಲ್ಲಿ ರೈತರು ಜಾನುವಾರಗಳ ಮೇವಿಗಾಗಿ ಜೋಳೆ ಬೆಳೆದಿದ್ದಾರೆ.

ಚನ್ನರಾಯಪಟ್ಟಣ: ಪೂರ್ವ ಮುಂಗಾರು ಕೈಕೊಟ್ಟರೂ ತಾಲೂಕಿನಲ್ಲಿ ರಾಸುಗಳ ಮೇವಿಗೆ ಕೊರತೆ ಉಂಟಾಗುವುದಿಲ್ಲ ಮುಂದಿನ 60 ದಿವಸದ ವರೆವಿಗೆ ಆಗುವಷ್ಟು ಮೇವಿನ ದಾಸ್ತಾನಿದೆ. ಹಾಗಾಗಿ ತಾಲೂಕಿನಲ್ಲಿ ಮೇವಿನ ಬ್ಯಾಂಕ್‌ ಮತ್ತು ಗೋಶಾಲೆ ತೆರೆಯುವ ಪ್ರಮೇಯವೇ ಒದಗಿ ಬರುವುದಿಲ್ಲ.

ಬರಪೀಡಿತ ತಾಲೂಕು ಎಂದು ಘೋಷಣೆಯಾಗಿ ರುವ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ಉಳಿದೆಲ್ಲ ತಾಲೂಕುಗಳಿಗಿಂತ ಮೇವು ಹೆಚ್ಚಾಗಿ ದೊರೆಯುತ್ತಿದೆ. ಈಗಾಗಲೇ ಹಲವು ಗ್ರಾಮದ ರೈತರು ಭತ್ತ ಹಾಗೂ ರಾಗಿ ಒಕ್ಕಣೆ ಸಮಯದಲ್ಲಿ ಮೇವನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ, ಹೈನುಗಾರಿಕೆ ಮಾಡುವ ರೈತರು ಹಾಗೂ ಕೊಳವೆ ಬಾವಿ ಹೊಂದಿರುವ ಕೃಷಿಕರು ಪಶು ಇಲಾಖೆಯಲ್ಲಿ ಮೇವಿನ ಬೀಜ ಪಡೆದು ಹಸಿರು ಮೇವು ಬೆಳೆದಿದ್ದಾರೆ.

ಗದ್ದೆಯಲ್ಲಿ ಹಸಿರು ಮೇವು ಬೆಳೆಯಲಾಗಿದೆ: ತಾಲೂಕಿನಲ್ಲಿ 1.13 ಲಕ್ಷ ರಾಸುಗಳಿಗೆ ನಿತ್ಯ ಒಣವೇವು ಐದು ಕೇಜಿಯಂತೆ ಸುಮಾರು 5. 68 ಲಕ್ಷ ಕೇಜಿ ಇಲ್ಲವೇ 17.05 ಲಕ್ಷ ಕೇಜಿ ಹಸಿಮೇವು ಬೇಕಿದೆ. ಮುಂದಿನ 60 ದಿವಸ‌ಕ್ಕೆ ಸಾಕಾಗುವಷ್ಟು ಮೇವು ಲಭ್ಯವಿದೆ. ಇದಲ್ಲದೇ ತಾಲೂಕಿನ ಜನಿವಾರ ಕೆರೆ ಪ್ರದೇಶ, ಪಟ್ಟಣದ ಅಮಾನಿಕೆರೆ, ಬಾಗೂರು, ಜಂಬೂರು, ಬೇಡಿಗನಹಳ್ಳಿ ಸೇರಿದಂತೆ ಹಲವು ಗ್ರಾಮದ ಗದ್ದೆ ಬಯಲಿನಲ್ಲಿ ಭತ್ತ ನಾಟಿ ಮಾಡಿರು ವುದರಿಂದ ಮೇವಿನ ಸಮಸ್ಯೆ ಉಂಟಾಗುವುದಿಲ್ಲ. ಈ ಭಾಗದ ಕೆಲ ಕೃಷಿಕರು ತಮ್ಮ ಗದ್ದೆಯಲ್ಲಿ ಮೆಕ್ಕೆಜೊಳೆ ಬೆಳೆದಿದ್ದು, ಹಸಿರು ಮೇವು ಮಾರಾಟ ಮಾಡುವ ಮೂಲಕ ತಾಲೂಕಿನಲ್ಲಿ ಉಂಟಾಗಲಿರುವ ಮೇವಿನ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಿದ್ದಾರೆ.

ಮೇವುಬ್ಯಾಂಕ್‌ ಅಗತ್ಯವಿಲ್ಲ: ಈಗ್ಗೆ ಒಂದು ವಾರ ದಿಂದ ಎರಡ್ಮೂರು ಸಲ ತುಂತುರು ಮಳೆಯಾಗಿರುವ ಕಾರಣ ಬಯಲುಗಳಲ್ಲಿ, ಗೋಮಾಳ ಹಾಗೂ ಬೋರೆಯಲ್ಲಿ ಹಸಿರು ಮೇವು ಚಿಗುರಿದೆ ಗ್ರಾಮೀಣ ಭಾಗದ ರೈತರು ತಮ್ಮ ರಾಸುಗಳನ್ನು ನಿತ್ಯ ಅಲ್ಲಿ ಮೇಯಿಸುವುದರಿಂದ ಮೇವಿನ ಸಮಸ್ಯೆ ಅಷ್ಟಾಗಿ ತಲೆದೂರಿಲ್ಲ, ಆದ್ದರಿಂದ ತಾಲೂಕಿನಲ್ಲಿ ಗೋಶಾಲೆ ಅಥವಾ ಮೇವು ಬ್ಯಾಂಕ್‌ ತೆರೆಯುವ ಪ್ರಮೇಯವೇ ಒದಗಿ ಬಂದಿಲ್ಲ.

ಮೇವಿನ ಕಿಟ್ ವಿತರಣೆ: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ತಾಲೂಕಿನ 6 ಹೋಬಳಿಗಳ 27 ಸಾವಿರ ರೈತರಿಗೆ 85.50 ಲಕ್ಷ ಮೌಲ್ಯದ 30 ಸಾವಿರ ಮೇವಿನ ಬೀಜದ ಕಿಟ್ ವಿತರಣೆ ಮಾಡಲಾಗಿದೆ.

ಹೈಬ್ರಿಡ್‌ ಜವಾರ್‌ ತಳಿಯ ಮೇವಿನ ಬೀಜದಲ್ಲಿ ಬೆಳೆಯುವ ಮೇವು ಮೂರರಿಂದ ನಾಲ್ಕು ಬಾರಿ ದೊರೆಯಲಿದೆ, ಮೈಜ್‌ ಮೇವು ಬೀಜ ಪಡೆದ ರೈತರಿಗೆ 40 ದಿವಸದ ಅಂತರದಲ್ಲಿ ಒಮ್ಮೆ ಮಾತ್ರ ಮೇವು ದೊರೆಯಲಿದೆ. ಹೆಚ್ಚು ನೀರಿನ ಸೌಲಭ್ಯ ಹೊಂದಿರುವ ರೈತರು ಹೈಬ್ರಿಡ್‌ ಜವಾರ್‌ ತಳಿ ಪಡೆದು ನಾಲ್ಕು ತಿಂಗಳು ಮೇವಿನ ಸಮಸ್ಯೆಯನ್ನು ಬಗೆ ಹರಿಸಿಕೊಂಡಿದ್ದಾರೆ. ಇದಲ್ಲದೇ ಹೈನುಗಾರಿಕೆ ಮಾಡುವವರಿಗೆ ಹಾಲು ಉತ್ಪಾದಕರ ಸಹಾರ ಸಂಘದಿಂದ ಮೇವುಬೀಜವನ್ನು ವಿತರಿಸಲಾಗಿದೆ.

ಹಸಿಮೇವು ಹೆಚ್ಚು ಪೌಷ್ಟಿಕಾಂಶ: ಮೇವಿನ ಬೀಜ ಪಡೆದ ರೈತರು ಈಗಾಗಲೇ ಬಿತ್ತನೆ ಮಾಡಿ ಮೇವು ಬೆಳೆದಿದ್ದಾರೆ. ಈ ರೀತಿ ಹಸಿ ಮೇವು ರಾಸುಗಳಿಗೆ ನೀಡುವುದರಿಂದ ಜಾನುವಾರಗಳಿಗೆ ಹೆಚ್ಚು ಪೌಷ್ಟಿಕಾಂಶ ದೊರೆಯುತ್ತಿದ್ದು ಹೈನುಗಾರಿಕೆ ಮಾಡುವವರಿಗೆ ಹೆಚ್ಚು ಉಪಯೋಗವಾಗುತ್ತಿದ್ದು ರಾಸುಗಳು ಹೆಚ್ಚು ಹಾಲು ನೀಡುತ್ತಿದ್ದು ಬೇಸಿಗೆ ಯಲ್ಲಿಯೂ ಹೈನುಗಾರಿಗೆ ತಾಲೂಕಿನಲ್ಲಿ ಉತ್ತಮವಾಗಿದೆ.

ಹೋಬಳಿವಾರು ವಿವಿರ: ಕಸಬಾ ಹೋಬಳಿಯಲ್ಲಿ 12,776 ಹಸುಗಳಿದ್ದು 7,310 ಎಮ್ಮೆಗಳಿವೆ. ನುಗ್ಗೇಹಳ್ಳಿಯಲ್ಲಿ 10,580 ಹಸು, 6.834 ಎಮ್ಮೆ, ಹಿರೀಸಾವೆ 9065 ಹಸು, 8129 ಎಮ್ಮೆ, ಶ್ರವಣ ಬೆಳಗೊಳ 12, 121 ಹಸು, 9, 318 ಎಮ್ಮೆ, ದಂಡಿಗನ ಹಳ್ಳಿ 11, 515 ಹಸು, 4,733 ಎಮ್ಮೆ, ಬಾಗೂರು ಹೋಬಳಿಯಲ್ಲಿ 13,105 ಹಸು, 8,040 ಎಮ್ಮೆಗಳಿದ್ದು ತಾಲೂಕಿನಲ್ಲಿ ಒಟ್ಟಾರೆಯಾಗಿ 1.13 ಲಕ್ಷ ರಾಸುಗಳಿವೆ, ಅವುಗಳಲ್ಲಿ ಒಂದು ಲಕ್ಷ ರಾಸುಗಳಿಗೆ ಈಗಾಗಲೆ ಕಲುಬಾಯಿ ಜ್ವರಕ್ಕೆ ಲಸಿಕೆ ಹಾಕಲಾಗಿದೆ. ಇವುಗಳಲ್ಲಿ ಎಸ್ಸಿ,ಎಸ್ಟಿ ಜನಾಂಗದ ರೈತರು 165 ರಾಸುಗಳಿಗೆ ಮಾತ್ರ ವಿಮೆ ಮಾಡಿಸಿದ್ದಾರೆ.

ಪರಿಹಾರ: ತಾಲೂಕಿನಲ್ಲಿ ಅಕಾಲಿಕವಾಗಿ ಮರಣ ಹೊಂದಿರುವ 60 ಜಾನುವಾರಗಳಿಗೆ ತಲಾ 10 ಸಾವಿರ ಪರಿಹಾರ ನೀಡಿದರೆ 112 ಕುರಿಗಳಿಗೆ ತಲಾ 5 ಸಾವಿರ ರೂ. ಪರಿಹಾರ ನೀಡಲಾಗಿದೆ.

● ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.