ಕಂಟೇನರ್ ಲಾರಿ ಹಾಯ್ದು ನಾಲ್ವರು ಯುವಕರು ಸಾವು
Team Udayavani, May 20, 2019, 3:04 AM IST
ಹುಮನಾಬಾದ: ಸ್ನೇಹಿತನೊಬ್ಬನ ಜನ್ಮದಿನ ಆಚರಣೆಗೆ ಹೋದ ನಾಲ್ವರು ಯುವಕರು ಕಂಟೇನರ್ ಲಾರಿ ಹಾಯ್ದು ಮೃತಪಟ್ಟ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-65ರ ಮಂಗಲಗಿ ಓವರ್ ಬ್ರಿಜ್ ಬಳಿ ಶನಿವಾರ ತಡರಾತ್ರಿ ಸಂಭವಿಸಿದೆ.
ಸಚಿನ್ ಹನುಮಂತ ಸಿರಕಟನಳ್ಳಿ (19), ಗುರುನಾಥ ವಿಠ್ಠಲ್ ಮಾಡ್ಗುಳ್ (18), ಅರುಣಕುಮಾರ ಕಾಶೀನಾಥ (17), ರಘುವೀರ ಭಿಮಣ್ಣ ಕೌನಳ್ಳಿ (17) ಮೃತ ಯುವಕರು. ಇವರೊಂದಿಗಿದ್ದ ಯುವಕ ಅರುಣಕುಮಾರ ಪ್ರಭುಸಾಗರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ನಂತರ ಕಂಟೇನರ್ ಲಾರಿ ಚಾಲಕ 800 ಮೀಟರ್ ದೂರದವರೆಗೆ ವಾಹನ ಚಲಾಯಿಸಿಕೊಂಡು ಹೋಗಿದ್ದರಿಂದ ಬೈಕ್ ಮತ್ತು ಕಂಟೇನರ್ಗೂ ಬೆಂಕಿ ತಗುಲಿದೆ. ಕಂಟೇನರ್ ಲಾರಿ ಚಾಲಕನ ನಿಷ್ಕಾಳಜಿಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
“ಏಕೈಕ ಪುತ್ರನಾಗಿದ್ದ ಸಚಿನ್, ಐಟಿಐ ಪೂರೈಸಿ ಬೀದರ್ನಲ್ಲಿ ಡಿಪ್ಲೊಮಾ ಓದುತ್ತಿದ್ದ. ರಜೆ ಇರುವುದರಿಂದ ಕಳೆದ ವಾರದ ಹಿಂದಷ್ಟೇ ಸ್ವಗ್ರಾಮ ಸಿರಕನಳ್ಳಿಗೆ ಬಂದಿದ್ದ. ಚೆನ್ನಾಗಿ ಓದಿ, ಐದು ಹೆಣ್ಣು ಮಕ್ಕಳ ತಂದೆಯಾದ ನನಗೆ ಎಲ್ಲ ಸಮಸ್ಯೆಗೂ ಪರಿಹಾರ ಒದಗಿಸುವಂತಿದ್ದ.
ನಾವು ಆತನನ್ನೇ ನಂಬಿದ್ದೆವು. ಈಗ ಅವನೇ ನಮ್ಮಿಂದ ಅಗಲಿರುವಾಗ ಭವಿಷ್ಯದ ಕುಟುಂಬ ನಿರ್ವಹಣೆ ದೊಡ್ಡ ಚಿಂತೆಯಾಗಿ ಕಾಡುತ್ತಿದೆ’ ಎಂದು ಮೃತ ಸಚಿನ್ ತಂದೆ ಹನುಮಂತ ನೋವು ತೋಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್