ಜನಜಂಗುಳಿ ಪ್ರದೇಶದಲ್ಲಿ ಎರಡು ಗ್ಯಾಂಗ್ ಸ್ಟರ್ ತಂಡಗಳ ಶೂಟೌಟ್; ಇಬ್ಬರು ಬಲಿ
Team Udayavani, May 20, 2019, 10:08 AM IST
ನವದೆಹಲಿ:ಎರಡು ವಿರೋಧಿ ರೌಡಿ ಗ್ಯಾಂಗ್ ಗಳ ನಡುವೆ ನಡೆದ ಶೂಟೌಟ್ ನಲ್ಲಿ ಇಬ್ಬರು ಶಂಕಿತ ಕ್ರಿಮಿನಲ್ ಗಳು ಸಾವನ್ನಪ್ಪಿರುವ ಘಟನೆ ದೆಹಲಿಯ ದ್ವಾರಕಾ ಮೊರ್ ಮೆಟ್ರೋ ಸ್ಟೇಶನ್ ಸಮೀಪ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ, ದರೋಡೆ, ಹಣ ಸುಲಿಗೆ ಸೇರಿದಂತೆ ಹಲವು ಪ್ರಕರಣ ದಾಖಲಾಗಿದ್ದ ಗ್ಯಾಂಗ್ ಸ್ಟರ್, ನವಾಡಾ ಪ್ರದೇಶದ ನಿವಾಸಿ ಪ್ರವೀಣ್ ಗೆಹ್ಲೋಟ್ ಮತ್ತು ವಿಕಾಸ್ ದಲಾಲ್ ಶೂಟೌಟ್ ನಲ್ಲಿ ಬಲಿಯಾಗಿರುವುದಾಗಿ ವಿವರಿಸಿದ್ದಾರೆ.
ನಿವೇಶನದ ವಿಚಾರದಲ್ಲಿ ಎರಡೂ ಗ್ಯಾಂಗ್ ಗಳ ನಡುವೆ ಶೂಟೌಟ್ ನಡೆಯಲು ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಪ್ಪು ಕಾರಿನಲ್ಲಿದ್ದ ಗ್ಯಾಂಗ್ ನವರು ಬಿಳಿ ಕಾರಿನೊಳಗಿದ್ದವರ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರು. ಜನನಿಬಿಢ ಪ್ರದೇಶದಲ್ಲಿ ಈ ಶೂಟೌಟ್ ನಡೆದಿದ್ದರಿಂದ ಜನಸಾಮಾನ್ಯರು ಗಾಬರಿ, ಆತಂಕಕ್ಕೊಳಗುವಂತಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಿಸಿಆರ್ ಮೆಟ್ರೋ ಸ್ಟೇಶನ್ ಸಮೀಪ ಇದ್ದ ಪೊಲೀಸ್ ಅಧಿಕಾರಿಗಳು ಕೂಡಾ ಕ್ರಿಮಿನಲ್ಸ್ ಗಳ ಮೇಲೆ ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದು, ಒಬ್ಬ ಕ್ರಿಮಿನಲ್ ಸಾವನ್ನಪ್ಪಿರುವುದಾಗಿ ಹೇಳಿದರು. ಶೂಟೌಟ್ ನಲ್ಲಿ ಶಾಮೀಲಾಗಿದ್ದ ಮತ್ತಿಬ್ಬರು ಗ್ಯಾಂಗ್ ಸ್ಟರ್ ಗಳು ಪರಾರಿಯಾಗಿದ್ದಾರೆ. ಅವರನ್ನು ಗುರುತಿಸಲಾಗಿದ್ದು, ಶೀಘ್ರವೇ ಬಂಧಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ