ಕಾಂಗ್ರೆಸ್, ನ್ಯಾಶನಲ್ ಹೆರಾಲ್ಡ್ ವಿರುದ್ಧ ಮಾನಹಾನಿ ದಾವೆ ಹಿಂಪಡೆದ ಅನಿಲ್ ಅಂಬಾನಿ
Team Udayavani, May 21, 2019, 4:57 PM IST
ಅಹ್ಮದಾಬಾದ್ : ಕಾಂಗ್ರೆಸ್ ನಾಯಕರು ಮತ್ತು ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ವಿರುದ್ಧ ಅಹ್ಮದಾಬಾದ್ ನ್ಯಾಯಾಲಯದಲ್ಲಿ, ವಿವಾದಿತ ರಫೇಲ್ ಜೆಟ್ ವಿಷಯದಲ್ಲಿನ ಮಾನಿಹಾನಿಕರ ಹೇಳಿಕೆ ಮತ್ತು ಲೇಖನ ಪ್ರಕಟನೆ ವಿರುದ್ದ ಹೂಡಲಾಗಿದ್ದ 5,000 ಕೋಟಿ ರೂ.ಗಳ ಮಾನಹಾನಿ ದಾವೆಯನ್ನು ಹಿಂಪಡೆಯಲು ಅನಿಲ್ ಅಂಬಾನಿ ಅವರ ರಿಲಯನ್ಸ್ ಗ್ರೂಪ್ ನಿರ್ಧರಿಸಿದೆ.
ಮಾನಹಾನಿ ದಾವೆಯ ವಿಚಾರಣೆಯನ್ನು ಅಹ್ಮದಾಬಾದ್ ಸಿಟಿ ಸಿವಿಲ್ ಮತ್ತು ಸೆಶನ್ಸ್ ನ್ಯಾಯಾಧೀಶ ಪಿ ಜೆ ತಮಕುವಾಲಾ ನಡೆಸುತ್ತಿದ್ದರು.
ಪ್ರತಿವಾದಿಗಳಿಗೆ ನಾವು ಮಾನಹಾನಿ ದಾವೆಯನ್ನು ಹಿಂಪಡೆಯುತ್ತಿವುದಾಗಿ ತಿಳಿಸಿದ್ದೇವೆ ಎಂದು ದೂರದಾರರ ವಕೀಲ ರಸೇಶ್ ಪಾರಿಖ್ ಸುದ್ದಿಗಾರರಿಗೆ ಇಂದು ಮಂಗಳವಾರ ತಿಳಿಸಿದರು.