ಕರಗಿದ ಬದನವಾಳು ಕಾರ್ಮೋಡ: ಅರಳಿದ ಸೌಹಾರ್ದ

ಜಾತಿ ಸಂಘರ್ಷದ ಬದನವಾಳು ಉಮ್ಮತ್ತೂರು ಘಟನೆ • ಶ್ರೀನಿವಾಸಪ್ರಸಾದ್‌ರಿಗೆ ಶೇ.30-40 ದಲಿತ ಮತ

Team Udayavani, May 27, 2019, 7:48 AM IST

Udayavani Kannada Newspaper

ಚಾಮರಾಜನಗರ: ಬದನವಾಳು ಉಮ್ಮತ್ತೂರು ಘಟನೆ ಸಂದರ್ಭದಲ್ಲಿ ಉಂಟಾದ ರಾಜಕೀಯ ಪರಿಸ್ಥಿತಿಗಳಿಂದಾಗಿ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಅವರ ಬಗ್ಗೆ 25 ವರ್ಷಗಳಿಂದ ಇದ್ದ ಅಸಮಾಧಾನವೊಂದು ಚಾ.ನಗರ ಲೋಕಸಭಾ ಚುನಾವಣೆಯಲ್ಲಿ ಕರಗುವ ಮೂಲಕ ಲಿಂಗಾಯತ ಮತದಾರರು ಸೌಹಾರ್ದತೆ ಪ್ರದರ್ಶಿಸಿದ್ದಾರೆ.

ಅಸಮಾಧಾನವಿತ್ತು:ವರ್ಷಾನುಗಟ್ಟಲೆ ಈ ಘಟನೆ ಎರಡೂ ಸಮುದಾಯಗಳ ಮೇಲೆ ಕರಿನೆರಳಾಗಿತ್ತು. ದಶಕಗಳು ಕಳೆದಂತೆ ಘಟನೆ ಪರಿಣಾಮದ ತೀವ್ರತೆ ಕಡಿಮೆಯಾಯಿತು. ಆದರೂ ಎರಡೂ ಸಮುದಾಯಗಳಲ್ಲಿ ಪರಸ್ಪರ ನಾಯಕರ ಮೇಲೆ ತಣ್ಣನೆ ಅಸಮಾಧಾನ ಒಳಗೊಳಗೇ ಇತ್ತು.

ಶ್ರೀನಿವಾಸಪ್ರಸಾದ್‌ ಅವರು ಕಾಂಗ್ರೆಸ್‌ನಿಂದ ನಂಜನಗೂಡು ಶಾಸಕರಾಗಿ ಸಚಿವರಾದ ಬಳಿಕ ತಮ್ಮ ಕ್ಷೇತ್ರದಲ್ಲಿ ಒಂದೇ ಒಂದು ಜಾತಿ ಗಲಭೆಯಾಗದಂತೆ ಕಾಳಜಿ ವಹಿಸಿದ್ದರು. ಹಾಗೆಯೇ ಜಾತಿ ನಿಂದನೆ ಒಂದು ಪ್ರಕರಣವೂ ನಡೆಯದಂತೆ ಎಚ್ಚರ ವಹಿಸಿದರು. ಇದು ಲಿಂಗಾಯತ ಸಮುದಾಯದ ಮೆಚ್ಚುಗೆಗೆ ಪಾತ್ರವಾಯಿತು. ಇದು ಮೊದಲ ಹಂತ.

ಶ್ರೀನಿವಾಸಪ್ರಸಾದ್‌ ಅವರು ಬಿಜೆಪಿಗೆ ಸೇರ್ಪಡೆಯಾದಾಗಲೇ ವೀರಶೈವ ಲಿಂಗಾಯತ ಸಮಾಜಕ್ಕೆ ಅವರ ಮೇಲಿದ್ದ ಅಲ್ಪ ಸ್ವಲ್ಪ ಅಸಮಾಧಾನವೂ ಮರೆಯಾಗಿ ಹೋಯಿತು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಧ್ರುವನಾರಾಯಣ ಅವರನ್ನು ಸೋಲಿಸಬಲ್ಲ ಛಾತಿ ಇರುವುದು ಶ್ರೀನಿವಾಸಪ್ರಸಾದ್‌ರಿಗೆ ಮಾತ್ರ ಎಂಬುದು ತಿಳಿದಿದ್ದ ಲಿಂಗಾಯತ ಸಮಾಜ ಅವರಿಗೆ ಚುನಾವಣೆಯಲ್ಲಿ ಸಾರಾ ಸಗಟು ಬೆಂಬಲ ನೀಡಿತು. ಚುನಾವಣೆ ವೇಳೆ ತಮ್ಮ ರಾಜಕೀಯ ಎದುರಾಳಿ ಎಂ.ರಾಜಶೇಖರಮೂರ್ತಿ ಅವರ ಸಮಾಧಿಗೂ ಪ್ರಸಾದ್‌ ಭೇಟಿ ನೀಡಿದರು. ಬದನವಾಳು ಉಮ್ಮತ್ತೂರು ಗಲಾಟೆಯನ್ನು ಸಂಪೂರ್ಣವಾಗಿ ಮರೆತ ಲಿಂಗಾಯತ ಸಮುದಾಯ ಬಿ.ಎಸ್‌.ಯಡಿಯೂರಪ್ಪ ಅವರ ಕೈಬಲಪಡಿಸಲು ಶ್ರೀನಿವಾಸಪ್ರಸಾದ್‌ರಿಗೆ ಮತ ನೀಡಿತು. ಹೀಗೆ ಚುನಾವಣೆಯೊಂದು ಹೀಗೆ ವೈಮನಸ್ಯ ಮರೆಸಿ ಸೌಹಾರ್ದತೆ ಮೂಡಿಸಿರುವುದೇ ಒಂದು ಅಚ್ಚರಿಯ ಸಂಗತಿ. ಚುನಾವಣೆಗಳಲ್ಲಿ ಜಾತಿ ಜಾತಿಗಳ ನಡುವೆ ದ್ವೇಷ ಮೂಡುವ ಸಂಗತಿಗಳು ನಡೆಯುತ್ತವೆ. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಾತಿ ಸಂಘರ್ಷವೊಂದು ಅಂತ್ಯಗೊಂಡು ಸೌಹಾರ್ದತೆ ಮೂಡಿಸಿದ್ದು ವಿಶೇಷ.

ಯಾವ ಉಮ್ಮತ್ತೂರು ಗ್ರಾಮದಲ್ಲಿ ಸವರ್ಣೀಯರು: ಅಸಮಾಧಾನಗೊಂಡಿದ್ದರೋ ಅದೇ ಗ್ರಾಮದಲ್ಲಿ ಶ್ರೀನಿವಾಸಪ್ರಸಾದ್‌ ಅವರು ಪ್ರಚಾರಕ್ಕೆ ಹೋದಾಗ ಭಾರೀ ಜನಬೆಂಬಲ ದೊರಕಿತು.! ಇದಕ್ಕೆ ವಿರುದ್ಧವೆಂಬಂತೆ ಕಾಂಗ್ರೆಸ್‌ ಅಭ್ಯರ್ಥಿ ಧ್ರುವನಾರಾಯಣ ಅವರ ಭಾಷಣಕ್ಕೆ ಅಡ್ಡಿಯುಂಟುಮಾಡಿದ ಪ್ರಸಂಗವೂ ಅದೇ ಗ್ರಾಮದಲ್ಲಿ ನಡೆಯಿತು.

ಅಸಮಾಧಾನ ತೋರಿದ ಲಿಂಗಾಯತ ಸಮಾಜ: ಕಾಂಗ್ರೆಸ್‌ ಅಭ್ಯರ್ಥಿ ಧ್ರುವನಾರಾಯಣ ಅವರು ಲಿಂಗಾಯತ ಸಮುದಾಯದ ನಾಯಕರಾಗಿದ್ದ ದಿ.ಎಂ.ರಾಜಶೇಖರಮೂರ್ತಿ ಅವರ ಕಟ್ಟಾ ಶಿಷ್ಯ. ವಿಪ ರ್ಯಾಸದ ಸಂಗತಿಯೆಂದರೆ ಈ ಬಾರಿ ಲಿಂಗಾಯತ ಸಮುದಾಯ ಧ್ರುವನಾರಾಯಣ ಅವರ ವಿರುದ್ಧ ಮತ ನೀಡಿತು. ಧ್ರುವನಾರಾಯಣ 2 ಬಾರಿ ಸಂಸ ದರಾಗಿ ಲಿಂಗಾಯತ ಸಮಾಜವನ್ನು ಕಡೆಗಣಿಸಿದರು. ಚಾಮರಾಜನಗರದಲ್ಲಿ ನಿರ್ಮಾಣವಾಗಲಿರುವ ಬಸವ ಭವನಕ್ಕೆ ಸಹಾಯ ಮಾಡಲಿಲ್ಲ. ಈ ಅಸಮಾ ಧಾನ ಮತದಾನದಲ್ಲಿ ಪ್ರಕಟವಾಗಿದೆ ಎಂದು ಆ ಸಮುದಾಯದ ಮುಖಂಡರೊಬ್ಬರು ಹೇಳುತ್ತಾರೆ.

1993ರ ಮಾ.25ರಂದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬದನವಾಳಿ ನಲ್ಲಿ ಮೂವರು ದಲಿತರ ಕೊಲೆ ನಡೆದಿತ್ತು. ಅದಾದ ತಿಂಗಳ ಬಳಿಕ 1993ರ ಏ.26ರಂದು ಚಾಮ ರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಸವರ್ಣೀಯರ ಮನೆಗಳ ಮೇಲೆ ದಾಂಧಲೆ ನಡೆದಿತ್ತು. ಆ ಸಂದರ್ಭದಲ್ಲಿ ಉಂಟಾದ ಬೆಳವಣಿಗೆಗಳಲ್ಲಿ ಈ ಭಾಗದ ಪ್ರಬಲ ದಲಿತ ನಾಯಕರಾದ ಶ್ರೀನಿವಾಸಪ್ರಸಾದ್‌ ಹಾಗೂ ಲಿಂಗಾಯತ ಸಮುದಾಯ ನಾಯಕರಾದ ರಾಜಶೇಖರ ಮೂರ್ತಿ, ಬೆಂಕಿ ಮಹದೇವು ಅವರು ಪರಸ್ಪರ ಎದುರಾಳಿಗ ಳಾಗುವ ಸನ್ನಿವೇಶ ನಿರ್ಮಾಣವಾವಾಗಿತ್ತು. ಹೀಗಾಗಿ ಲಿಂಗಾಯತ ಸಮುದಾಯ ಶ್ರೀನಿವಾಸ ಪ್ರಸಾದ್‌ ಮೇಲೂ ದಲಿತ ಸಮುದಾಯದ ರಾಜಶೇಖರಮೂರ್ತಿ, ಬೆಂಕಿ ಮಹದೇವು ಅವರ ಮೇಲೂ ಅಸಮಾಧಾನಿತರಾಗಿದ್ದರು.

ತಮ್ಮ ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡಿದರು. ನಮ್ಮ ಸಮಾಜವನ್ನು ಕಡೆಗಣಿಸಿದರು ಎಂದು ಲಿಂಗಾಯತ ಸಮುದಾಯ ಹೇಳುತ್ತದೆ. ಆದರೆ ಇತ್ತ, ಬಿಜೆಪಿಗೆ ಯಾವತ್ತೂ ಹೋಗದ ದಲಿತ ಮತ ಗಳು ಶೇ.30 ರಿಂದ 40 ಬಿಜೆಪಿಗೆ ಹೋಗಿವೆ. ನನೆಗುದಿಗೆ ಬಿದ್ದಿದ್ದ ಬುದ್ಧ ವಿಹಾರವನ್ನು ಎಡಬೆಟ್ಟದ ಬಳಿಗೆ ತಂದು ಅದಕ್ಕೆ ಜಾಗ ಕೊಡಿಸಿ ಅನುದಾನ ಬಿಡುಗಡೆ ಮಾಡಿಸಿ ಶಂಕು ಸ್ಥಾಪನೆ ಮಾಡಲಾಗಿತ್ತು. ಸ್ನಾತಕೋತ್ತರ ಕೇಂದ್ರ ತಂದು ಅದಕ್ಕೆ ಡಾ.ಬಿ.ಆರ್‌.ಅಂಬೇ ಡ್ಕರ್‌ ಅವರ ಹೆಸರು ಇಡುವಲ್ಲಿ ಶ್ರಮಿಸಿದರು. ಜಿಲ್ಲೆಯ ಚಾಮರಾಜನಗರ, ಕೊಳ್ಳೇ ಗಾಲದಲ್ಲಿ ಬೃಹತ್‌ ಪ್ರಮಾಣದ ಅಂಬೇಡ್ಕರ್‌ ಭವನಗಳ ನಿರ್ಮಾಣಕ್ಕೆ ಆಸಕ್ತಿ ವಹಿಸಿ ಕೆಲಸ ಮಾಡಿದರೂ, ದಲಿತ ಸಮಾಜದ ಅನುಕೂಲಕ್ಕಾಗಿ ಅನೇಕ ಕೆಲಸ ಮಾಡಿದ್ದರೂ ಶೇ.30 ರಿಂದ 40 ದಲಿತ ಮತಗಳು ಧ್ರುವನಾರಾಯಣರನ್ನು ಕೈಬಿಟ್ಟವು. ಒಂದೆಡೆ, ಲಿಂಗಾಯತರ ಅಸಮಾಧಾನ, ಇನ್ನೊಂದೆಡೆ ತಮ್ಮದೇ ಸಮುದಾಯದ ನಿರ್ಲಕ್ಷ್ಯವನ್ನು ಅವರು ಎದುರಿಸಬೇಕಾಯಿತು.

ಧ್ರುವರಿಂದ ಅಭಿವೃದ್ಧಿ ಕಾರ್ಯ:

ತಮ್ಮ ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡಿದರು. ನಮ್ಮ ಸಮಾಜವನ್ನು ಕಡೆಗಣಿಸಿದರು ಎಂದು ಲಿಂಗಾಯತ ಸಮುದಾಯ ಹೇಳುತ್ತದೆ. ಆದರೆ ಇತ್ತ, ಬಿಜೆಪಿಗೆ ಯಾವತ್ತೂ ಹೋಗದ ದಲಿತ ಮತ ಗಳು ಶೇ.30 ರಿಂದ 40 ಬಿಜೆಪಿಗೆ ಹೋಗಿವೆ. ನನೆಗುದಿಗೆ ಬಿದ್ದಿದ್ದ ಬುದ್ಧ ವಿಹಾರವನ್ನು ಎಡಬೆಟ್ಟದ ಬಳಿಗೆ ತಂದು ಅದಕ್ಕೆ ಜಾಗ ಕೊಡಿಸಿ ಅನುದಾನ ಬಿಡುಗಡೆ ಮಾಡಿಸಿ ಶಂಕು ಸ್ಥಾಪನೆ ಮಾಡಲಾಗಿತ್ತು. ಸ್ನಾತಕೋತ್ತರ ಕೇಂದ್ರ ತಂದು ಅದಕ್ಕೆ ಡಾ.ಬಿ.ಆರ್‌.ಅಂಬೇ ಡ್ಕರ್‌ ಅವರ ಹೆಸರು ಇಡುವಲ್ಲಿ ಶ್ರಮಿಸಿದರು. ಜಿಲ್ಲೆಯ ಚಾಮರಾಜನಗರ, ಕೊಳ್ಳೇ ಗಾಲದಲ್ಲಿ ಬೃಹತ್‌ ಪ್ರಮಾಣದ ಅಂಬೇಡ್ಕರ್‌ ಭವನಗಳ ನಿರ್ಮಾಣಕ್ಕೆ ಆಸಕ್ತಿ ವಹಿಸಿ ಕೆಲಸ ಮಾಡಿದರೂ, ದಲಿತ ಸಮಾಜದ ಅನುಕೂಲಕ್ಕಾಗಿ ಅನೇಕ ಕೆಲಸ ಮಾಡಿದ್ದರೂ ಶೇ.30 ರಿಂದ 40 ದಲಿತ ಮತಗಳು ಧ್ರುವನಾರಾಯಣರನ್ನು ಕೈಬಿಟ್ಟವು. ಒಂದೆಡೆ, ಲಿಂಗಾಯತರ ಅಸಮಾಧಾನ, ಇನ್ನೊಂದೆಡೆ ತಮ್ಮದೇ ಸಮುದಾಯದ ನಿರ್ಲಕ್ಷ್ಯವನ್ನು ಅವರು ಎದುರಿಸಬೇಕಾಯಿತು.

ಏನಿದು ಬದನವಾಳು ಗಲಭೆ?:

1993ರ ಮಾ.25ರಂದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬದನವಾಳಿ ನಲ್ಲಿ ಮೂವರು ದಲಿತರ ಕೊಲೆ ನಡೆದಿತ್ತು. ಅದಾದ ತಿಂಗಳ ಬಳಿಕ 1993ರ ಏ.26ರಂದು ಚಾಮ ರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಸವರ್ಣೀಯರ ಮನೆಗಳ ಮೇಲೆ ದಾಂಧಲೆ ನಡೆದಿತ್ತು. ಆ ಸಂದರ್ಭದಲ್ಲಿ ಉಂಟಾದ ಬೆಳವಣಿಗೆಗಳಲ್ಲಿ ಈ ಭಾಗದ ಪ್ರಬಲ ದಲಿತ ನಾಯಕರಾದ ಶ್ರೀನಿವಾಸಪ್ರಸಾದ್‌ ಹಾಗೂ ಲಿಂಗಾಯತ ಸಮುದಾಯ ನಾಯಕರಾದ ರಾಜಶೇಖರ ಮೂರ್ತಿ, ಬೆಂಕಿ ಮಹದೇವು ಅವರು ಪರಸ್ಪರ ಎದುರಾಳಿಗ ಳಾಗುವ ಸನ್ನಿವೇಶ ನಿರ್ಮಾಣವಾವಾಗಿತ್ತು. ಹೀಗಾಗಿ ಲಿಂಗಾಯತ ಸಮುದಾಯ ಶ್ರೀನಿವಾಸ ಪ್ರಸಾದ್‌ ಮೇಲೂ ದಲಿತ ಸಮುದಾಯದ ರಾಜಶೇಖರಮೂರ್ತಿ, ಬೆಂಕಿ ಮಹದೇವು ಅವರ ಮೇಲೂ ಅಸಮಾಧಾನಿತರಾದ್ದರು.
● ಕೆ.ಎಸ್‌.ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

man hits his wife because he could not afford the treatment!

ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!

Teacher Recruitment Scam: Supreme Court Slams Bengal Govt

West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

Torture of husband by burning with cigarette: Wife arrested based on CCTV video

Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ

Afghan batsman Rahmanullah Gurbaz to return to KKR team

KKR ತಂಡಕ್ಕೆ ಮರಳಲಿರುವ ಅಫ್ಘಾನ್‌ ಬ್ಯಾಟರ್‌ ರಹ್ಮಾನುಲ್ಲ ಗುರ್ಬಾಝ್

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

H. D. Kumaraswamy ಸದ್ಯದಲ್ಲೇ ರಾಜ್ಯಪಾಲರ ಭೇಟಿ

Prajwal Revanna Case ಸದ್ಯದಲ್ಲೇ ರಾಜ್ಯಪಾಲರ ಭೇಟಿ: ಕುಮಾರಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

ಮತಗಟ್ಟೆ ಧ್ವಂಸ: ಕಾಡಲ್ಲಿ ಅವಿತಿದ್ದವರಿಗೆ ಧೈರ್ಯ ತುಂಬಿ ಗ್ರಾಮಕ್ಕೆ ಕರೆತಂದ ಅಧಿಕಾರಿಗಳು

ಮತಗಟ್ಟೆ ಧ್ವಂಸ: ಕಾಡಲ್ಲಿ ಅವಿತಿದ್ದವರಿಗೆ ಧೈರ್ಯ ತುಂಬಿ ಗ್ರಾಮಕ್ಕೆ ಕರೆತಂದ ಅಧಿಕಾರಿಗಳು

ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ

ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

man hits his wife because he could not afford the treatment!

ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!

CSIR: Opportunity to wear unironed clothes every Monday!

CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!

Teacher Recruitment Scam: Supreme Court Slams Bengal Govt

West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

Torture of husband by burning with cigarette: Wife arrested based on CCTV video

Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.