ಚೆಕ್‌ಪೋಸ್ಟ್‌ನಲ್ಲಿ ತುಳುನಾಡು ವೈಭವ

ಭೂತಾರಾಧನೆಯ ಹಿನ್ನೆಲೆ ಹಾಡು

Team Udayavani, May 31, 2019, 6:00 AM IST

v-29

ಕನ್ನಡದಲ್ಲಿ ತುಳುನಾಡ ಸಂಸ್ಕೃತಿ ಸಾರುವ ಅನೇಕ ಚಿತ್ರಗಳು ಬಂದಿವೆ. ಆದರೆ, ಸಂಪೂರ್ಣ ತುಳು ಭಾಷೆಯ ಹಾಡು ಮತ್ತು ಆ ಭಾಗದ ವಿಶೇಷವಾಗಿರುವ ಭೂತಾರಾಧನೆ ಆಚರಣೆಯ ದೃಶ್ಯಗಳನ್ನು ಸೆರೆಹಿಡಿದು ತೋರಿಸುವ ಪ್ರಯತ್ನ ಅಪರೂಪವಾಗಿತ್ತು. ಈಗ ಕನ್ನಡದ ಚಿತ್ರವೊಂದರಲ್ಲಿ ಪರಿಪೂರ್ಣವಾಗಿ ತುಳುನಾಡಿನ ಸಂಸ್ಕೃತಿಯನ್ನು ತೋರಿಸುವ ಪ್ರಯತ್ನವಾಗಿದೆ. ಹೌದು, ‘ಕಮರೊಟ್ಟು ಚೆಕ್‌ಪೊಸ್ಟ್‌’ ಚಿತ್ರದಲ್ಲಿ ತುಳು ಹಾಡು ಇದೆ. ಆ ಭಾಗದ ಭೂತಾರಾಧನೆಯ ವಿಶೇಷ ಅಂಶಗಳೂ ಇವೆ. ಅವೆಲ್ಲವೂ ಕಥೆಗೆ ಪೂರಕವಾಗಿವೆ ಎಂಬುದು ವಿಶೇಷ.

ಇದು ಸಂಪೂರ್ಣ ಹೊಸಬರ ಚಿತ್ರ. ‘ಕಮರೊಟ್ಟು ಚೆಕ್‌ಪೋಸ್ಟ್‌’ ಹೆಸರಲ್ಲೇ ನಿರೀಕ್ಷೆ ಹುಟ್ಟಿಸಿತ್ತು. ಆರಂಭದಲ್ಲಿ ಬಿಡುಗಡೆಯಾದ ಟೀಸರ್‌ ಕೂಡ ಕುತೂಹಲ ಮೂಡಿಸಿತ್ತು. ಈ ವಾರ ‘ಕಮರೊಟ್ಟು ಚೆಕ್‌ಪೋಸ್ಟ್‌’ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಹಲವು ವಿಶೇಷತೆಗಳು ತುಂಬಿವೆ. ಆ ಬಗ್ಗೆ ಹೇಳುವುದಾದರೆ, ಇದು ಭಾರತದ ಪ್ಯಾರನಾರ್ಮಲ್ ಚಿತ್ರ. ಅದು ಹೊರತುಪಡಿಸಿದರೆ, ಭಾರತದ ಪ್ರಥಮ ಮಹಿಳಾ ಪ್ಯಾರನಾರ್ಮಲ್ ಸಂಶೋಧಕಿ ನಿಶಾಶರ್ಮ ಅವರು ತೆರೆಯ ಮೇಲೆ ಕಾಣಿಸಿಕೊಂಡಿರುವುದು ಮತ್ತೂಂದು ವಿಶೇಷ. ಇದರೊಂದಿಗೆ ಇದೇ ಮೊದಲ ಸಲ ಕನ್ನಡದ ಈ ಚಿತ್ರದಲ್ಲಿ ತುಳುನಾಡಿನ ಆಚರಣೆ ಮತ್ತು ತುಳು ಭಾಷೆಯ ಹಾಡೊಂದನ್ನು ಬಳಸಿಕೊಳ್ಳಲಾಗಿದೆ. ತುಳು ಭಾಷೆಯ ಹಾಡನ್ನು ನಟ ನವೀನ್‌ಕೃಷ್ಣ ಹಾಡಿದ್ದಾರೆ. ಭೂತಾರಾಧನೆ ಆಚರಣೆ ವೇಳೆ ಅಲ್ಲಿ ಸೇರಿದ್ದ ಯಾರೊಬ್ಬರಿಗೂ ಅಲ್ಲಿ ಚಿತ್ರೀಕರಣ ನಡೆಯುತ್ತದೆ ಎಂಬ ವಿಷಯ ಗೊತ್ತಾಗದಂತೆ ಎಲ್ಲವನ್ನೂ ನೈಜವಾಗಿಯೇ ಸೆರೆ ಹಿಡಿದು ಚಿತ್ರೀಕರಿಸಲಾಗಿದೆ. ಅದು ಎಷ್ಟರಮಟ್ಟಿಗೆ ಮೂಡಿಬಂದಿದೆ ಎಂಬುದಕ್ಕೆ ಇಂದು ತೆರೆ ಕಂಡಿರುವ ಚಿತ್ರದಲ್ಲಿ ನೋಡಬೇಕು. ತುಳು ಭಾಗದ ಅಂಶಗಳು ಇಲ್ಲಿರುವುದರಿಂದ ಮಂಗಳೂರು, ಉಡುಪಿ ಸೇರಿದಂತೆ ದಕ್ಷಿಣ ಕನ್ನಡ ಭಾಗದ ಸುಮಾರು ಏಳೆಂಟು ಚಿತ್ರಮಂದಿರಗಳಲ್ಲೂ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

ಅಂದಹಾಗೆ, ಎ.ಪರಮೇಶ್‌ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಅವರು ಈ ಹಿಂದೆ ‘ಮಾಮು ಟೀ ಅಂಗಡಿ’ ಚಿತ್ರ ನಿರ್ದೇಶಿಸಿದ್ದರು. ಇದು ಅವರ ಎರಡನೇ ಸಿನಿಮಾ. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ. ಇಲ್ಲಿ ಹಾರರ್‌ ಅಂಶಗಳೂ ಇವೆ. ಆದರೆ, ಅವೆಲ್ಲಾ ಕಥೆಗೆ ಹೇಗೆ ಲಿಂಕ್‌ ಆಗಿವೆ ಎಂಬುದೇ ಸಿನಿಮಾದ ಹೈಲೈಟ್ ಎಂಬುದು ನಿರ್ದೇಶಕರ ಹೇಳಿಕೆ. ಇನ್ನು, ಈ ಚಿತ್ರವನ್ನು ಚೇತನ್‌ರಾಜ್‌ ನಿರ್ಮಿಸಿದ್ದಾರೆ. ಅವರಿಗೆ ಇದು ಮೊದಲ ಹೆಜ್ಜೆ. ಆರಂಭದಲ್ಲಿ ಸಿನಿಮಾ ಸೆಟ್ಟೇರಿದಾಗ, ಸಿನಿಮಾಗೆ ಸಾಥ್‌ ಕೊಟ್ಟವರು ಬೇರೆಯವರು. ಚಿತ್ರ ಪೂರ್ಣಗೊಂಡು, ಸಮಸ್ಯೆಗೆ ಸಿಲುಕಿದಾಗ, ಚಿತ್ರ ನೋಡಿ, ಇಷ್ಟಪಟ್ಟು ಚೇತನ್‌ರಾಜ್‌ ಆ ಚಿತ್ರವನ್ನು ಮುನ್ನೆಡೆಸಿ, ಈಗ ರಿಲೀಸ್‌ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿರುವ ನಟ ಶ್ರೀಮುರಳಿ, ಚಿತ್ರದ ಮೇಲಿರುವ ಕುತೂಹಲವನ್ನು ಹೇಳಿ ಕೊಂಡಿ ದ್ದಾರೆ. ಹೊಸ ಬರ ಪ್ರಯತ್ನಕ್ಕೆ ಎಲ್ಲರೂ ಬೆಂಬಲ ಕೊಡಬೇಕು ಎಂದು ಮನವಿ ಮಾಡುತ್ತಾರೆ.

ಈಗಾಗಲೇ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿರುವ ನಟ ಶ್ರೀಮುರಳಿ, ಹೊಸಬರ ಪ್ರಯತ್ನವನ್ನು ಮೆಚ್ಚಿಕೊಂಡು, ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದ್ದಾರೆ. ನಟ ಧ್ರುವಸರ್ಜಾ ಕೂಡ ಚಿತ್ರದ ಗೇಮ್‌ವೊಂದನ್ನು ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಇನ್ನು, ಹೊಸ ಪ್ರತಿಭೆ ಮಹೇಶ್‌ ಎರಡು ಹಾಡುಗಳನ್ನು ಬರೆದಿದ್ದಾರೆ. ಎ.ಟಿ.ರವೀಶ್‌ ಸಂಗೀತವಿದ್ದು, ಅವರ 25ನೇ ಚಿತ್ರವಿದು. ಚಿತ್ರದಲ್ಲಿ ಉತ್ಪಲ್, ಸನತ್‌ಕುಮಾರ್‌ ನಾಯಕರಾದರೆ, ಸ್ವಾತಿಕೊಂಡೆ, ಅಹಲ್ಯಾ ಸುರೇಶ್‌ ನಾಯಕಿಯರು. ‘ತಿಥಿ’ ಖ್ಯಾತಿಯ ಗಡ್ಡಪ್ಪ ಅವರಿಗಿಲ್ಲಿ ವಿಶೇಷ ಪಾತ್ರವಿದೆ. ಇವರ ಜೊತೆಗೆ ‘ಊಸರವಳ್ಳಿ’ ಪ್ರಾಣಿಯೊಂದು ಪ್ರಮುಖವಾಗಿ ಕಾಣಿಸಿಕೊಂಡಿದೆ. ಅದು ಯಾಕೆ ಅನ್ನುವುದಕ್ಕೆ ಸಿನಿಮಾ ನೋಡಬೇಕು ಎಂಬುದು ಚಿತ್ರತಂಡದ ಮಾತು.

ಟಾಪ್ ನ್ಯೂಸ್

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

IMD

IMD; ರಾಜ್ಯದ 19 ಜಿಲ್ಲೆಗಳಿಗೆ ಬಿಸಿ ಗಾಳಿ ಮುನ್ಸೂಚನೆ : ಬೆಂಗಳೂರಿನಲ್ಲಿ ಮಳೆ

Bommai BJP

Haveri; ಕಮಲ-ಕೈ ನಡುವೆ ನೇರ ಸ್ಪರ್ಧೆ: ಯಾರ ಕೊರಳಿಗೆ ಏಲಕ್ಕಿ ಹಾರ?

bjp-congress

Bagalkote: ಒಬ್ಬರಿಗೆ ಮೊದಲನೆಯದು, ಇನ್ನೊಬ್ಬರಿಗೆ ‘ಕಡೇ’ ಚುನಾವಣೆ!

vidhana-soudha

ಜೂ.3: ಶಿಕ್ಷಕ, ಪದವೀಧರ ಕ್ಷೇತ್ರಗಳಿಗೆ ಚುನಾವಣೆ : ಯಾವ ಕ್ಷೇತ್ರದಲ್ಲಿ ಯಾರಿದ್ದರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

19

Fraud: ಬೆಳಪು; ಹಣ ಪಡೆದು ಕಾಯಿಲ್‌ ನೀಡದೆ ವಂಚನೆ; ದೂರು ದಾಖಲು

CBI ಏಜೆನ್ಸಿ ನಮ್ಮ ನಿಯಂತ್ರಣದಲ್ಲಿಲ್ಲ: ಸುಪ್ರೀಂಗೆ ಕೇಂದ್ರ ಮಾಹಿತಿ

CBI ಏಜೆನ್ಸಿ ನಮ್ಮ ನಿಯಂತ್ರಣದಲ್ಲಿಲ್ಲ: ಸುಪ್ರೀಂಗೆ ಕೇಂದ್ರ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.