ಅಕ್ಷತಾ ಹೆಸರಿನಲ್ಲಿ ವಿದ್ಯಾರ್ಥಿ ವೇತನ ಕೊಡುತ್ತಿರುವ ಅಣ್ಣಾಮಲೈ
Team Udayavani, Jun 1, 2019, 6:00 AM IST
ಉಡುಪಿ: ನಾಲ್ಕು ವರ್ಷಗಳ ಹಿಂದೆ ಬೈಂದೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ದೇವಾಡಿಗರ ಮೇಲೆ ನಡೆದ ಪೈಶಾಚಿಕ ಕೃತ್ಯ ನಡೆದು ಅಸುನೀಗಿದ್ದು ನೆನಪಿರಬಹುದು.
ಅಕ್ಷತಾ ದೇವಾಡಿಗ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ನ ಹೆಮ್ಮೆಯ ವಿದ್ಯಾರ್ಥಿನಿಯಾಗಿದ್ದಳು. ಆ ವರ್ಷ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಎಸ್ಪಿ ಅಣ್ಣಾಮಲೈ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಅಂದು ಅಕ್ಷತಾಳ ತಂದೆ, ತಾಯಿ, ತಂಗಿ ಪಾಲ್ಗೊಂಡಿದ್ದರು. ಅವರನ್ನು ಕಂಡ ಅಣ್ಣಾಮಲೈ ಪ್ರಕರಣದ ಬಗ್ಗೆ ಸಂತಾಪ ವ್ಯಕ್ತಪಡಿಸಿ ಅಕ್ಷತಾಳ ಹೆಸರನಲ್ಲಿ ತಾನು ಪ್ರತಿವರ್ಷ 10,000 ರೂ. ನೀಡುತ್ತೇನೆ. ಅದನ್ನು ಪ್ರತೀ ವರ್ಷ ಬೈಂದೂರು ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಸ್ಥಾನ ಗಳಿಸುವ ವಿದ್ಯಾರ್ಥಿನಿಗೆ ನೀಡಬೇಕೆಂದು ಸೂಚಿಸಿದರು. ತಾನು ಮುಂದೆ ವರ್ಗಾವಣೆಯಾದರೂ ಸಂಪರ್ಕಿಸಬೇಕೆಂದು ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ರಿಗೆ ನೀಡಿದರು.
ನಾಲ್ಕು ವರ್ಷಗಳಿಂದ ಅವರಿಗೆ ಫೋನ್ ಮಾಡಿ ನೆನಪಿಸುವ ಪ್ರಮೇಯವೇ ಬರಲಿಲ್ಲ. ಅವರೇ ಜುಲೈ ತಿಂಗಳಲ್ಲಿ ಪೋನ್ ಮಾಡಿ ಅಕ್ಷತಾಳ ಹೆಸರಿನ ವಿದ್ಯಾರ್ಥಿವೇತನದ ಹಣ ಕಳುಹಿಸಿಕೊಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ
Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ