ಸನಾತನ ಸಂಸ್ಕೃತಿಯ ಮಹತ್ವ ಅಪಾರ

ಉಪನ್ಯಾಸ ಮಾಲಿಕೆ

Team Udayavani, Jun 3, 2019, 5:18 PM IST

3-June-32

ಭದ್ರಾವತಿ: ತಂದೆ-ತಾಯಿ, ಗುರು- ಅತಿಥಿಗಳನ್ನು ದೇವರೆಂದು ಕಾಣಬೇಕು ಎಂದು ವಿಶ್ವದಲ್ಲಿ ಹೇಳುವ ಏಕೈಕ ಸಂಸ್ಕೃತಿ ಸನಾತನ ವೇದ ಸಂಸ್ಕೃತಿ ಎಂದು ಶ್ರೀ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಭಾನುವಾರ ಸಂಜೆ ಸಿದ್ಧಾರೂಢನಗರದ ಶೃಂಗೇರಿ ಶ್ರೀ ಶಂಕರ ಶಾರದಾಂಬಾ ಮಠದಲ್ಲಿ ವೇದಾಂತ ಭಾರತಿ ಭಾಷಾಮೃತವಾಹಿನಿಯಿಂದ ಏರ್ಪಡಿಸಿದ್ದ ತೈತ್ತರೀಯೋಪನಿಷತ್‌ ಶಾಂಕರಭಾಷ್ಯ ಉಪನ್ಯಾಸ ಮಾಲಿಕೆಯನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿ ಅವರು ಮಾತನಾಡಿದರು.

ಹತ್ತು ಉಪನಿಷತ್‌ಗಳ ಪೈಕಿ ತೈತ್ತರೀಯ ಉಪನಿಷತ್‌ ತನ್ನದೇ ಆದ ವಿಶಿಷ್ಟತೆ ಹೊಂದಿರುವುದರೊಂದಿಗೆ ಜೀವನದಲ್ಲಿ ಹೇಗೆ ಬದುಕಬೇಕು. ಯಾವುದನ್ನು ಮಾಡಬೇಕು. ಯಾವುದನ್ನು ಮಾಡಬಾರದು ಎಂದು ತಿಳಿಸುತ್ತದೆ. ಶಂಕರಾಚಾರ್ಯರು ತೈತ್ತರೀಯ ಉಪನಿಷತ್‌ ಮೇಲೆ ರಚಿಸಿರುವ ಭಾಷ್ಯ ಅದರಲ್ಲಿನ ಶ್ಲೋಕಗಳ ಯತಾರ್ಥವನ್ನು ತಿಳಿಸುತ್ತದೆ ಎಂದರು.

ಮಾತೃ ದೇವೋಭವ, ಪಿತೃ ದೇವೋಭವ ಎನ್ನುವ ತೈತ್ತರೀಯ ಉಪನಿಷತ್‌ ಮಂತ್ರ ಕೇವಲ ಅವರು ನಮ್ಮ ಜನ್ಮಕ್ಕೆ ಕಾರಣರಾದುದರಿಂದ ಆ ಕೃತಜ್ಞತೆಗಾಗಿ ಅವರನ್ನು ದೇವರೆಂದು ಕಾಣಬೇಕೆಂದು ಹೇಳಿಲ್ಲ. ನಮ್ಮ ಆತ್ಮೋನ್ನತಿಯಾಗಬೇಕಾದರೆ ನಿಜವಾದ ಬ್ರಹ್ಮಜ್ಞಾನ ಅಂದರೆ ಆನಂದ ಪ್ರಾಪ್ತಿಯಾಗಬೇಕಾದರೆ ಬದುಕಿನಲ್ಲಿ ಅವರನ್ನು ಸದಾ ದೇವರಂತೆ ಆದರದಿಂದ ಕಾಣಬೇಕು ಎಂದು ಹೇಳಿದೆ. ಆದರೆ ಇಂದು ಈ ಉಪನಿಷತ್‌ ಮಂತ್ರಗಳ ಅರ್ಥವನ್ನು ಅರಿಯುವ ಗೋಜಿಗೆ ಹೋಗದೆ ಮಂತ್ರಗಳನ್ನು ಕೇವಲ ಕೇಳುವ, ಹೇಳುವ ಪರಿಪಾಠ ಬೆಳೆಸಿಕೊಂಡಿರುವುದರಿಂದ ಮನೆ- ಮನಗಳಲ್ಲಿ ತಂದೆ-ತಾಯಿರನ್ನು ಮಕ್ಕಳು ಅನಾದರದಿಂದ ಕಾಣುವ ಪ್ರವೃತ್ತಿ ಹೆಚ್ಚಾಗಿದೆ ಎಂದರು.

ಮಠದ ಧರ್ಮಾಧಿಕಾರಿ ಸುಬ್ಬರಾವ್‌ ಮಾತನಾಡಿದರು. ವೇದಾಂತ ಭಾರತಿ ಸಂಚಾಲಕ ಕೃಷ್ಣಮೂರ್ತಿ ಸೋಮಯಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮ.ಸ. ನಂಜುಂಡಸ್ವಾಮಿ ನಿರೂಪಿಸಿದರು.

ಮಠದ ವತಿಯಿಂದ ನಾಗರಾಜ್‌ ದಂಪತಿಗಳು ಶ್ರೀಗಳಿಗೆ ಫಲ ಸಮರ್ಪಣೆ ಮಾಡಿದರು. ಪೂಜಾ ಪ್ರಾರ್ಥಿಸಿದರು.ಮಠದ ಅರ್ಚಕ ಗಣೇಶ್‌ ಭಟ್, ಅಬಸೆ ದಿನೇಶ್‌ಜೋ‚ಶಿ, ಜನಾರ್ಧನ ಐಯ್ಯಂಗಾರ್‌, ವೇ| ಬ್ರ| ರಂಗ‌ನಾಥ ಶರ್ಮ, ಕೆ. ನಾಗರಾಜ್‌ ಹಾಗೂ ಮತ್ತೂರಿನ ಪಂಡಿತರು ಮತ್ತಿತರರು ಇದ್ದರು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀಗಳನ್ನು ವೇದಪಠಣದೊಂದಿಗೆ ಪೂರ್ಣಕುಂಭ ಸ್ವಾಗತದ ಮೂಲಕ ದೇವಾಲಯಕ್ಕೆ ಕರೆ ತರಲಾಯಿತು. ಗಣಪತಿ, ಶಾರದೆ, ಶಂಕರಾಚಾರ್ಯರ ಮೂರ್ತಿಗೆ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಫಲಮಂತ್ರಾಕ್ಷತೆ ತೀರ್ಥಪ್ರಸಾದ ವಿತರಿಸಲಾಯಿತು.

ಟಾಪ್ ನ್ಯೂಸ್

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು

Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.