ಪರಿಸರ ದಿನವೂ ಕುಶಾಲನಗರದ ಸಂತೆಯೂ


Team Udayavani, Jun 9, 2019, 6:00 AM IST

c-2

ಸಾಂದರ್ಭಿಕ ಚಿತ್ರ

ಅಮ್ಮ ಇವತ್ತು ಬೆಂಡೆಕಾಯಿ ಪಲ್ಯ ಎಷ್ಟು ರುಚಿಯಾಗಿದೆ ಯಾಕೆ?” ಎಂದು ಕೇಳಿದ.
“”ನಮ್ಮ ತೋಟದ್ದು ಕಣೋ. ಏನೂ ತರಕಾರಿ ಮನೆಯಲ್ಲಿ ಇಲ್ಲ ಅಂತ ಇದ್ದ ಬಂಡೆಕಾಯಿಯನ್ನು ಕಿತ್ತು ಪಲ್ಯ ಮಾಡಿದೆ, ಬೆಂಡೆಕಾಯಿ ತಾಜಾ ಆಗಿತ್ತಲ್ಲ ಅದಕ್ಕೆ ಅಷ್ಟು ರುಚಿ.”
“”ಅಮ್ಮ, ನಾವು ತುಂಬಾ ಬೆಂಡೆಕಾಯಿ ಗಿಡ ಹಾಕೋಣ” ಅಂದ ಮಗ.

ನಾವು ಕೊಡಗಿನ ಕುಶಾಲನಗರದಲ್ಲಿ ಇದ್ದಾಗ ಮನೆ ಹಿಂದೆ ಸ್ನಾನದ ನೀರಿಗೆ ಬಾಳೆಗಿಡ, ಸೊಪ್ಪು , ಪಪ್ಪಾಯಿ ಗಿಡ ಬೆಳೆದಿದ್ದೆವು. ಸೊಪ್ಪಿನ ಪಲ್ಯ ಎಷ್ಟು ರುಚಿ ಇರುತ್ತಿತ್ತು! ಅಮ್ಮ ಇವತ್ತು ಪಲ್ಯ ತುಂಬಾ ಚೆನ್ನಾಗಿದೆ ಎಂದು ಕೈ ನೆಕ್ಕಿದರೆ, ಅಮ್ಮ ಹೇಳುತ್ತಿದ್ದಳು, “”ಇದು ಇದು ಧರ್ಮರಾಯನ ತೋಟದ್ದು , ಹಾಲಕ್ಕಿ ಬೆಳೆಸಿದ್ದು” ಅಂತ ಹೇಳುತ್ತಿದ್ದಳು. “ಪಪ್ಪಾಯಿ’ ಅಂತ ಮುಖ ಸಿಂಡರಿಸುತ್ತಿದ್ದ ನಾವು ನಮ್ಮನೆ ಪಪ್ಪಾಯಿ ಹಣ್ಣನ್ನು ತಿಂದು ಊಟ ಬಿಡುತ್ತಿದ್ದೆವು. ಆ ಪಪ್ಪಾಯಿ ಹಣ್ಣಿಗೆ ಅಂತಹ‌ ಚಂದದ ಪರಿಮಳ ಇರುತ್ತಿತ್ತು.

ಅದು ಯಾವಾಗಲೂ ಅಷ್ಟೇ, ನಮ್ಮ ತೋಟದಲ್ಲಿ ಬೆಳೆದ ತಾಜಾ ತರಕಾರಿ, ಹಣ್ಣಿನ ರುಚಿ ಬೇರೆನೇ. ಅದರೊಂದಿಗೆ ಭಾವನಾತ್ಮಕ ಸಂಬಂಧ ಇರುವುದರಿಂದ ನಾವು ಬೆಳೆದದ್ದು ತಿನ್ನುವ ಸುಖವೇ ಬೇರೆ. ಅರ್ಜೆಂಟಿಗೆ ತರಕಾರಿ ಇಲ್ಲದಾಗ ಮಾಡುವ ಕರಿಬೇವಿನ, ದೊಡ್ಡಿಪತ್ರೆ ಎಲೆಯ ಚಟ್ನಿ, ಹಾಗಲಕಾಯಿ ಗೊಜ್ಜು, ಪಡವಲಕಾಯಿ, ಅವರೇಕಾಯಿ ಪಲ್ಯದ ರುಚಿ ಬಣ್ಣಿಸಲು ಅಸಾಧ್ಯ. ಮನೆಯಲ್ಲಿ ಬಳಸುವ ನಿರುಪಯುಕ್ತ ನೀರಿನ ಸದ್ಬಳಕೆ ಕೂಡ ಚೆನ್ನಾಗಿ ಆಗುತ್ತದೆ.

ನಾನು ಮೂವತ್ತು ವರ್ಷದ ಹಿಂದಿನ ಕುಶಾಲನಗರದ ಸಂತೆ ವಿಷಯ ಹೇಳುತ್ತಿದ್ದೇನೆ. ಅಲ್ಲಿ ಬುಧವಾರ ಸಂತೆ. ಏನು ಸಂತೆ, ಅದು ಒಂದು ಎಕರೆ ಜಾಗದಲ್ಲಿ ! ಎಷ್ಟು ವಿವಿಧ ತಾಜಾ ಸೊಪ್ಪು! ದಂಟಿನ ಸೊಪ್ಪು , ಮೆಂತೆ ಸೊಪ್ಪು, ಸಬ್ಸಿಗೆ ಸೊಪ್ಪು, ಸೌತೆಕಾಯಿಯಲ್ಲಿ ವೆರೈಟಿ, ಮರಗೆಣಸಿನಲ್ಲಿ ಬೇರೆ ಬೇರೆ ಆಕಾರ, ಕೆಂಪು-ಬಿಳಿ ಗೆಣಸು, ಬದನೆಕಾಯಿಯಲ್ಲಿ ನೀಲಿ, ಬಿಳಿ, ಉದ್ದನೆಯದು, ಗುಂಡದು, ಅವರೆಕಾಯಿ, ಬೀನ್ಸ್‌ನಲ್ಲಿ ವೈವಿಧ್ಯ ಬೇಕಾ? ಬಣ್ಣಬಣ್ಣದ ಕಾಳು. ವಿವಿಧ ಬಾಳೆಹಣ್ಣು , ಕಿತ್ತಲೆ ಹಣ್ಣು , ಹಲಸಿನ ಹಣ್ಣು, ಮಾವಿನ ಹಣ್ಣು , ಅದೇನು ಸಂತೆ. ತರಕಾರಿ ಆರಿಸಲು ಒಳ್ಳೆಯ ಅನುಭವ ಬೇಕು. ನಾನು ಮತ್ತು ನನ್ನ ತಂಗಿ ಅಷ್ಟು ಇಷ್ಟಪಟ್ಟು ಅಮ್ಮನ ಸೆರಗು ಹಿಡಿದುಕೊಂಡು ಸಂತೆಗೆ ಹೋಗುತ್ತಿದ್ದೆವು.

ಮದುವೆಯಾಗಿ ರಾಯಚೂರಿನ ಮಾನ್ವಿಗೆ ಬಂದ ಮೇಲೆ ಅದೇ ಸಂತೆಗೆ ಹೋಗುವ ಚಟ ಆರಂಭವಾಯಿತು. ಮಾನ್ವಿಯಲ್ಲಿ ಬುಧವಾರ ಸಂತೆ ಇರುತ್ತದೆ. ಇಲ್ಲಿನ ಸಂತೆ ನೋಡಿ ಹೌಹಾರಿದೆ. ಸಂತೆ ಒಂದೇ ಲೈನ್‌! ಅದೇ ಬದನೆಕಾಯಿ, ಮೆಣಸಿನಕಾಯಿ, ಚೌಳೆಕಾಯಿ ಮತ್ತು ಪುಂಡೆಪಲ್ಯ. ತಲೆ ಕೆಟ್ಟು ಹೋಗುತ್ತಿತ್ತು. ಇಲ್ಲಿಯ ಜನಗಳು ಇದನ್ನೇ ತಿನ್ನುವುದರಿಂದ ಅವರಿಗೆ ಇಷ್ಟೇ ಸಾಕು. ಇತ್ತೀಚೆಗೆ ಮಾನ್ವಿಯ ಸಂತೆ ಹಿಗ್ಗಿಕೊಂಡಿದೆ. ವಿವಿಧ ಸೊಪ್ಪು-ಹಣ್ಣು ದೊರೆಯುತ್ತದೆ. ಆದರೂ ಕುಶಾಲನಗರದ ಸಂತೆಯ ಚೆಂದ ಬೇರೆನೇ!

ಮೊನ್ನೆ ಜೂನ್‌ 5ರಂದು ಪರಿಸರ ದಿನ ಆಚರಿಸಿದೆವು. ಕಾಡು ಬೆಳೆಸದಿದ್ದರೂ ಪರವಾಗಿಲ್ಲ , ನಾವು ತಿನ್ನುವ ಹಣ್ಣು , ತರಕಾರಿ, ಹೂವನ್ನು ಸಾಧ್ಯವಾದಷ್ಟು ನಾವೇ ಮನೆ ಸುತ್ತ ಬೆಳೆಸುವುದು ಅತೀ ಅವಶ್ಯ. ಮನೆಬಳಕೆ ಆದ ನಿರುಪಯುಕ್ತ ನೀರನ್ನು ಚರಂಡಿಗೆ ಬಿಡದೆ, ಸುತ್ತಲಿನ ಗಿಡಗಳಿಗೆ ಹರಿಸೋಣ. ಮನೆಯ ಸುತ್ತಲೂ ಪರಿಸರ ಜೀವಂತವಾಗಿಡುವುದು ಒಂದು ಬಗೆಯ ಜೀವನಪ್ರೀತಿಯೇ.

ಎಸ್‌. ಬಿ. ಅನುರಾಧಾ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.