ಮುಂದುವರೆದ ಭೂಕುಸಿತ
Team Udayavani, Jun 10, 2019, 2:33 PM IST
ನರಗುಂದ: ಪಟ್ಟಣದ ಕಸಬಾ ಓಣಿಯ ಮನೆಯೊಂದರಲ್ಲಿ ಅಂತರ್ಜಲ ಹೆಚ್ಚಳದಿಂದ ಮತ್ತೂಂದೆಡೆ ಭೂಕುಸಿತ ಉಂಟಾಗಿದೆ.
ನರಗುಂದ: ಪಟ್ಟಣದ ನಾಲ್ಕು ಬಡಾವಣೆ ನಿವಾಸಿಗಳ ನಿದ್ದೆಗೆಡಿಸಿದ ಭೂಕುಸಿತ ಮತ್ತೇ ಮುಂದುವರೆದಿದೆ. ರವಿವಾರ ಸ್ಥಳೀಯ ಕಸಬಾ ಬಡಾವಣೆಯಲ್ಲಿ ಎರಡು ಮನೆಗಳ ನಡುವಿನ ಗೋಡೆಯ ಅಡಿಯಲ್ಲೇ ಭೂಕುಸಿತ ಉಂಟಾಗಿದೆ.
ಚನ್ನಬಸಪ್ಪ ಹಾದಿಮನಿ ಎಂಬುವರ ಮನೆ ಮತ್ತು ಯಲ್ಲವ್ವ ಮಟಗೇರ ಅವರ ಮನೆಗಳ ನಡುವಿನ ಗೋಡೆಯ ತಳಭಾಗದಲ್ಲಿ ಭೂಮಿ ಕುಸಿದಿದೆ. ಶನಿವಾರ ಮಧ್ಯರಾತ್ರಿ ಸಂಭವಿಸಿದೆ ಎನ್ನಲಾಗಿದೆ. ಎರಡೂ ಮನೆಗಳ ಗೋಡೆಯ ತಳದಲ್ಲಿ ಭೂಕುಸಿತ ಉಂಟಾಗಿ ಆಳವಾದ ಗುಂಡಿ ಬಿದ್ದಿದೆ. ವಿಚಿತ್ರವೆಂದರೆ ಭೂಕುಸಿತ ಉಂಟಾದ ಗುಂಡಿಯ ತಳದಲ್ಲಿ ಸಣ್ಣಗೆ ನೀರು ಹರಿಯುತ್ತಿರುವುದು ಕಂಡುಬಂದಿದೆ.
ಹೀಗಾಗಿ ಈ ಬಡಾವಣೆಗಳಲ್ಲಿ ಅಂತರ್ಜಲ ಹೆಚ್ಚಳದ ಭೀತಿ ಸಾರ್ವಜನಿಕರನ್ನು ನಿದ್ದೆಗೆಡಿಸಿದೆ.ಬೆಳಗ್ಗೆ ಪುರಸಭೆಯಿಂದ ಮುರಂ ಹಾಕಲಾಗಿದೆ. ಪಟ್ಟಣದ ಬಡಾವಣೆಗಳಲ್ಲಿ ಅಂತರ್ಜಲ ಹೆಚ್ಚಳದಿಂದ ಉಂಟಾಗುತ್ತಿರುವ ಭೂಕುಸಿತ ಜನರ ನಿದ್ದೆಗೆಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ