ಶ್ರೀ ಕಾಶೀ ಮಠಾಧೀಶರು ಮುಂಬಯಿಗೆ ಆಗಮನ
Team Udayavani, Jun 11, 2019, 4:26 PM IST
ಮುಂಬಯಿ: ಜಿಎಸ್ಬಿ ಸಮಾಜದ ಗುರುವರ್ಯರಾದ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯ್ಯಮೀಂದ್ರ ತೀರ್ಥ ಸ್ವಾಮೀಜಿಯವರು ಜೂ. 11 ರಂದು ಜಿಎಸ್ಬಿ ಸಮಾಜ ಸಾರಸ್ವತ ಸಂಸ್ಕೃತಿ ಭವನ ನವ ದೆಹಲಿಯಿಂದ ವಾಲ್ಕೇಶ್ವರದ ಶ್ರೀ ಕಾಶೀ ಮಠಕ್ಕೆ ಆಗಮಿಸಿ ಮೊಕ್ಕಾಂ ಹೂಡಲಿದ್ದಾರೆ.
ಜೂ. 14ರ ವರೆಗೆ ಗುರುವರ್ಯರು ಮೊಕ್ಕಾಂ ಹೂಡಲಿದ್ದು, ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ. ಸಮಾಜ ಬಾಂಧವರು ಪೂಜ್ಯ ಗುರುವರ್ಯರ ಮೊಕ್ಕಾಂ ಕಾರ್ಯಕ್ರಮದಲ್ಲಿ ಉದಯಾಸ್ತಮಾನ, ಪವಮಾನ, ಭಿಕ್ಷಾ ಸೇವೆಯನ್ನು ಸಲ್ಲಿಸಬಹುದು. ಜೂ. 14ರಂದು ಗುರುವರ್ಯರು ಶ್ರೀ ವಾಲ್ಕೇಶ್ವರ ಶ್ರೀ ಕಾಶೀ ಮಠದಿಂದ ನವಿಮುಂಬಯಿಯ ವಾಶಿಯ ಸೆಕ್ಟರ್ 10ಎ ಇಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ತೆರಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವಾಲ್ಕೇಶ್ವರದ ಶ್ರೀ ಕಾಶೀ ಮಠವನ್ನು ಸಂಪರ್ಕಿಸಬಹುದು ಎಂದು ಮಠದ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.