ವಿದ್ಯಾರ್ಥಿಗಳಿಗೆ ಅಗ್ನಿ ದುರಂತ ತರಬೇತಿ
Team Udayavani, Jun 13, 2019, 3:02 AM IST
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಅಗ್ನಿ ಅನಾಹುತ ನಡೆದಾಗ ಏನೇನು ಮಾಡಬೇಕು ಎಂಬುದರ ಬಗ್ಗೆ ಒಂದು ದಿನದ ತರಬೇತಿ ಬುಧವಾರ ನಡೆಯಿತು.
ಬೆಂವಿವಿ ಕ್ಯಾಂಪಸ್ ಹಾಗೂ ಹಾಸ್ಟೆಲ್ ಸಮೀಪದಲ್ಲಿ ಅಗ್ನಿ ಅವಘಡಗಳು ಸಂಭವಿಸಿದಾಗ ಯಾವ ರೀತಿಯಲ್ಲಿ ತುರ್ತು ಸ್ಪಂದನೆ ನೀಡಬೇಕು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಅಗ್ನಿಶಾಮಕ ದಳದಿಂದ ಜ್ಞಾನಭಾರತಿ ಆವರಣದಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ತೋರಿಸಲಾಯಿತು.
ತರಬೇತಿ ಕಾರ್ಯಕ್ರಮಕ್ಕೆ 158 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅಗ್ನಿ ಅವಘಡ ಸಂಭವಿಸಿದಾಗ ಯಾವ ರೀತಿಯಲ್ಲಿ ವರ್ತಿಸಬೇಕು ಮತ್ತು ತುರ್ತಾಗಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ದಿನಪೂರ್ತಿ ಮಾಹಿತಿ ನೀಡಲಾಯಿತು.
ಬೆಂವಿವಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್, ವಲಯ ಶಾಮಕ ಅಧಿಕಾರಿ ರಾಮಕೃಷ್ಣ, ಬಯೋಪಾರ್ಕ್ ವಿಭಾಗದ ಮುಖ್ಯಸ್ಥೆ ಟಿ.ಜೆ.ರೇಣುಕಾ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.