ಮದ್ವೆ ನಂತರವೂ ಸಿನ್ಮಾ ಬಿಡಲ್ಲ

ಒಳ್ಳೇ ಅವಕಾಶ ಎದುರು ನೋಡುತ್ತಿದ್ದೇನೆ- ನೇಹಾಪಾಟೀಲ್‌

Team Udayavani, Jun 17, 2019, 3:00 AM IST

neha-patil

ಕನ್ನಡದ ಅನೇಕ ನಟಿಯರು ತಮ್ಮ ಮದುವೆ ಬಳಿಕವೂ ಸಿನಿಮಾಗಳಲ್ಲಿ ತೊಡಗಿಕೊಳ್ಳುತ್ತಿರುವುದು ಹೊಸದೇನಲ್ಲ. ಈಗಾಗಲೇ ಮೇಘನಾರಾಜ್‌, ಸಿಂಧುಲೋಕನಾಥ್‌ ಸೇರಿದಂತೆ ಹಲವು ನಟಿಯರು ಚಿತ್ರಗಳಲ್ಲಿ ನಟಿಸುವ ಮೂಲಕ ಆ್ಯಕ್ಟೀವ್‌ ಆಗಿದ್ದಾರೆ. ಆ ಸಾಲಿಗೆ ಈಗ ಮತ್ತೊಬ್ಬ ನಟಿ ರೀ ಎಂಟ್ರಿಯಾಗಿದ್ದಾರೆ. ಹೌದು, ಅದು ಬೇರಾರೂ ಅಲ್ಲ, ನೇಹಾಪಾಟೀಲ್‌.

ಇತ್ತೀಚೆಗಷ್ಟೇ ಮದುವೆಯಾದ ನೇಹಾಪಾಟೀಲ್‌, ಕ್ರಮೇಣ ಚಿತ್ರರಂಗಕ್ಕೆ ಗುಡ್‌ಬೈ ಹೇಳುತ್ತಾರೆ ಅಂತಾನೇ ಎಲ್ಲರೂ ಭಾವಿಸಿದ್ದರು. ಆದರೆ, ನೇಹಾಪಾಟೀಲ್‌ ಮಾತ್ರ, ಮದುವೆ ನಂತರವೂ ನಾನು ಸಿನಿಮಾಗಳಲ್ಲಿ ನಟಿಸಲು ಸಿದ್ಧ ಎಂದು ಸಾರಿದ್ದಾರೆ. ಬಹುತೇಕ ನಟಿಯರು ಮದುವೆ ನಂತರ ಬಣ್ಣದ ಬದುಕಿನಿಂದ ದೂರ ಸರಿಯುವುದು ಸಾಮಾನ್ಯ.

ಆದರೆ, ಈಗಿನ ನಟಿಯರು ಪುನಃ ಬಣ್ಣ ಹಚ್ಚುವ ಮೂಲಕ ತಮ್ಮ ಕಲಾಪ್ರೀತಿ ಮೆರೆಯತ್ತಿದ್ದಾರೆ. ಆ ಕುರಿತು ಸಿನಿ ಜರ್ನಿ ಮುಂದುವರೆಸುವ ವಿಷಯಕ್ಕೆ ಸಂಬಂಧಿಸಿದಂತೆ ಸ್ವತಃ ನೇಹಾಪಾಟೀಲ್‌ ಅವರೇ “ಉದಯವಾಣಿ’ ಜೊತೆ ತಮ್ಮ ಮುಂದಿನ ಸಿನಿಕನಸಿನ ಬಗ್ಗೆ ಮಾತನಾಡಿದ್ದಾರೆ. “ನನ್ನ ಮದುವೆಯ ನಂತರ “ಗರ’ ಚಿತ್ರ ಬಿಡುಗಡೆಯಾಗಿತ್ತು.

ಅದಾದ ಮೇಲೆ ಈಗ “ನ್ಯೂರಾನ್‌’ ಚಿತ್ರ ಬಿಡುಗಡೆಗೆ ತಯಾರಾಗುತ್ತಿದೆ. ಅದಾದ ಮೇಲೆ ದರ್ಶನ್‌ ಅಭಿನಯದ “ಒಡೆಯ’ ಚಿತ್ರ ಬರಲಿದೆ. ನಾನು “ಒಡೆಯ’ ಚಿತ್ರದಲ್ಲಿ ಪಂಕಜ್‌ ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದೇನೆ. ದರ್ಶನ್‌ ಅವರ ನಾಲ್ವರು ಸಹೋದರರ ಪೈಕಿ ಪಂಕಜ್‌ ಕೂಡ ಒಬ್ಬರಾಗಿದ್ದು, ಅವರಿಗೆ ನಾನು ನಾಯಕಿಯಾಗಿದ್ದೇನೆ.

ಆ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದೇನೆ. ಇನ್ನು, ಸಾಮಾನ್ಯವಾಗಿ ಮದುವೆ ಬಳಿಕ ನಟಿಯರು ಕಾಣಿಸಿಕೊಳ್ಳುವುದಿಲ್ಲ ಎಂಬ ಮಾತಿದೆ. ಆದರೆ, ನಾನು ಮದುವೆಯ ಬಳಿಕವೂ ಸಿನಿಮಾಗಳಲ್ಲಿ ನಟಿಸುತ್ತೇನೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಮದುವೆ ನಂತರ ನನಗೆ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಾಕಷ್ಟು ಬಂದಿದ್ದು ನಿಜ.

ಆದರೆ, ನಾನೇ ಕೆಲ ಅವಕಾಶಗಳನ್ನು ಕೈ ಬಿಟ್ಟೆ. ಕಾರಣ, ಮದುವೆ ಆಗಿದ್ದರಿಂದ ಸ್ವಲ್ಪ ಬ್ರೇಕ್‌ ಬೇಕಿತ್ತು. ಹಾಗಾಗಿ ಆಮೇಲೆ ಅವಕಾಶ ಬಂದೇ ಬರುತ್ತವೆ. ಆಗ ನೋಡೋಣ ಅಂದುಕೊಂಡಿದ್ದೆ. ಈಗ ಸಿನಿಮಾ ಅವಕಾಶಗಳು ಬರುತ್ತಿವೆ. ಒಳ್ಳೆಯ ಅವಕಾಶ ಬಂದರೆ ಖಂಡಿತವಾಗಿಯೂ ನಾನು ನಟಿಸುತ್ತೇನೆ. ನಾನು ಈಗಾಗಲೇ ಮರುಸುತ್ತುವ ಪಾತ್ರಗಳನ್ನು ಮಾಡಿದ್ದಾಗಿದೆ. ಪುನಃ ಅದೇ ರೀತಿಯ ಪಾತ್ರಗಳು ನನಗೆ ಇಷ್ಟವಿಲ್ಲ.

ನಾನೀಗ ಚಾಲೆಂಜ್‌ ಎನಿಸುವ ಪಾತ್ರಗಳನ್ನು ಎದುರು ನೋಡುತ್ತಿದ್ದೇನೆ. ನಿತ್ಯಾಮೆನನ್‌ ಅವರು ಈ ಹಿಂದೆ “ಮೈನಾ’ ಚಿತ್ರದಲ್ಲಿ ಮಾಡಿದ್ದ ಪಾತ್ರಗಳು ನನಗಿಷ್ಟ. ವಿಕಲಚೇತನ ಪಾತ್ರಗಳಲ್ಲಿ ಮುಗ್ಧತೆ ಇರುತ್ತೆ. ಎಲ್ಲರಿಗೂ ಬಹುಬೇಗ ರೀಚ್‌ ಆಗುತ್ತೆ. ಅಷ್ಟೇ ಅಲ್ಲ, ಅಲ್ಲಿ ಸಾಕಷ್ಟು ಚಾಲೆಂಜಿಂಗ್‌ ಅಂಶಗಳೂ ಇರುತ್ತವೆ. ಹಾಗಾಗಿ, ನಾನು ಮುಂದಿನ ದಿನಗಳಲ್ಲಿ ಆ ರೀತಿಯ ಪಾತ್ರ ನಿರೀಕ್ಷಿಸುತ್ತಿದ್ದೇನೆ. ಸದ್ಯಕ್ಕೆ ಅಂತಹ ಕಥೆ, ಪಾತ್ರ ಬಂದಿಲ್ಲ.

ಬಂದರೆ ಖಂಡಿತವಾಗಿಯೂ ಮಾಡ್ತೀನಿ’ ಎನ್ನುತ್ತಾರೆ ನೇಹಾ. ಹಾಗಾದರೆ, ಮನೆಯಲ್ಲಿ ಪ್ರೋತ್ಸಾಹ, ಸಹಕಾರಕ್ಕೇನೂ ಕೊರತೆ ಇಲ್ಲವೆನ್ನಿ? ಈ ಪ್ರಶ್ನೆಗೆ ಉತ್ತರವಾಗುವ ನೇಹಾ, “ಖಂಡಿತವಾಗಿಯೂ ಮನೆಯಲ್ಲಿ ಸಹಕಾರ ಇದೆ. ಮದುವೆ ನಂತರವೂ ನಿನಗೆ ಯಾವಾಗ ಬೇಕಾದರೂ ಸಿನಿಮಾ ಮಾಡು, ನಿನಗೆ ಕಂಫ‌ರ್ಟ್‌ ಎನಿಸಿದರೆ ಬಿಡಬೇಡ ಎಂಬ ಸಪೋರ್ಟ್‌ ಇದೆ. ಹಾಗಾಗಿ ನಾನೀನ ಸ್ವಲ್ಪ ಡಿಫ‌ರೆಂಟ್‌ ಆಗಿರುವ ಪಾತ್ರಗಳನ್ನು ಎದುರುನೋಡುತ್ತಿದ್ದೇನೆ’ ಎಂದಷ್ಟೇ ಹೇಳುತ್ತಾರೆ ನೇಹಾ.

ಟಾಪ್ ನ್ಯೂಸ್

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.