ಗ್ರಾಮ ಸ್ವಚ್ಛತೆಗೆ ಎಲ್ಲರೂ ಕೈ ಜೋಡಿಸಿ: ಜಕ್ಕಪ್ಪಗೋಳ
Team Udayavani, Jun 17, 2019, 1:27 PM IST
ರಾಯಬಾಗ: ತಾಪಂ ಸಭಾಭವನ ಆವರಣದಲ್ಲಿ ಹಮ್ಮಿಕೊಂಡಿರುವ ಸ್ವಚ್ಛಮೇವ ಜಯತೆ ಆಂದೋಲನ ರಥಯಾತ್ರೆಗೆ ತಾಪಂ ಇಒ ಡಿ.ಎಂ. ಜಕ್ಕಪ್ಪಗೋಳ ಚಾಲನೆ ನೀಡಿದರು.
ರಾಯಬಾಗ: ಭಾರತವನ್ನು ಬಯಲು ಶೌಚ ಮುಕ್ತವನ್ನಾಗಿ ಮಾಡಿ ಸ್ವಚ್ಛ ಭಾರತ ಮಾಡುವ ಉದ್ದೇಶದಿಂದ ಸರ್ಕಾರ ರಾಜ್ಯದಲ್ಲಿ ಪ್ರಚಾರ ಆಂದೋಲನ ಹಮ್ಮಿಕೊಂಡಿದೆ ಎಂದು ತಾಪಂ ಇಒ ಡಿ.ಎಂ. ಜಕ್ಕಪ್ಪಗೋಳ ಹೇಳಿದರು.
ಪಟ್ಟಣದ ತಾಪಂ ಸಭಾಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛಮೇವ ಜಯತೇ ಆಂದೋಲನ ರಥ ಯಾತ್ರೆಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಈ ಪ್ರಚಾರ ರಥವು ತಾಲೂಕಿನಲ್ಲಿ ಜು.10ರವರೆಗೆ ಸಂಚರಿಸಿ, ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದರು.
ತಾಪಂ ಲೇಕ್ಕಾಧಿಕಾರಿ ಉಮೇಶ ಪೋಳ ಮಾತನಾಡಿ, ಸ್ವಚ್ಛ ಭಾರತ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ವೈಯಕ್ತಿ ಶೌಚಾಲಯ ನಿರ್ಮಿಸಲು, ನೀರಿನ ಮೀತ ಬಳಕೆ ಬಗ್ಗೆ ಜನರಲ್ಲಿ ತಿಳಿವಳಿಕೆ ನೀಡಲಾಗುತ್ತಿದೆ. ಸಾರ್ವಜನಿಕರು ಈ ಆಂದೋಲನಲ್ಲಿ ಕೈ ಜೋಡಿಸಿ, ಸ್ವಚ್ಛ ಭಾರತ ಮಿಷನ್ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಸ್ವಚ್ಛ ಮೇವ ಜಯತೇ ಆಂದೋಲನ ಪ್ರಯುಕ್ತ ತಾಪಂ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ತಾಪಂ ಸದಸ್ಯ ನಾಮದೇವ ಕಾಂಬಳೆ, ಐ.ಆರ್.ನದಾಫ್, ತೋಟಗಾರಿಕೆ ಅಧಿಕಾರಿ ಎಂ.ಆರ್. ಕಳ್ಳಿಮನಿ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್. ಪಾಟೀಲ, ಡಾ| ಎಸ್.ಎಂ. ಪಾಟೀಲ, ಬಸವರಾಜ ಕಾಂಬಳೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್
Belagavi; ಪ್ರಧಾನಿ ನರೇಂದ್ರ ಮೋದಿ ಬಜರಂಗದಳ ಕಾರ್ಯಕರ್ತರಂತೆ ಮಾತಾಡ್ತಾರೆ: ಸಿದ್ದರಾಮಯ್ಯ
Congress ಕಾರ್ಯಕರ್ತರು ಹಣ ಹಂಚುತ್ತಿದ್ದಾರೆ ಎಂದು ಠಾಣೆ ಎದುರು BJP ಶಾಸಕರ ಪ್ರತಿಭಟನೆ
Belagavi; ಶೆಟ್ಟರ್ ಅವರಿಗೆ ಆಶೀರ್ವಾದ ಮಾಡಿದ ವಿವಿಧ ಮಠಾಧೀಶರು
Belagavi; ಭಿಕ್ಷೆ ರೀತಿಯಲ್ಲಿ ಸಿಎಂ ಬರ ಪರಿಹಾರ ನೀಡಿದ್ದಾರೆ: ವಿಜಯೇಂದ್ರ ಆಕ್ರೋಶ