73ರ ಅಜ್ಜಿಗೆ ಈಗಲೂ ಯೋಗದ ನಂಟು

ಯೋಗದ ಬೀಜ ಬಿತ್ತುವ ನಿಸ್ವಾರ್ಥ ಸೇವೆ ; ಹದಿಹರೆಯದವರಂತೆ ಓಡಾಡುವ ಹಿರಿಯ ಜೀವ

Team Udayavani, Jun 21, 2019, 5:36 AM IST

YOGA-BEL

ಬೆಳಗಾವಿ: ವಯಸ್ಸು 73, ಆದರೂ ಮುಖ ಬಾಡಿಲ್ಲ, ಬೆನ್ನು ಬಾಗಿಲ್ಲ. ಮೊಣಕಾಲಿನ ನೋವಿಲ್ಲ. ಹದಿ ಹರೆಯದವರಂತೆ ಓಡಾಡುವ ಈ ಅಜ್ಜಿ ಯೋಗ ಶಿಕ್ಷಕಿ. ಬೆಳಗಾವಿ ನಗರದಲ್ಲಿ ಸುಮಾರು 40 ವರ್ಷಗಳಿಂದ ಉಚಿತ ಯೋಗ ಕಲಿಸುತ್ತ ಖ್ಯಾತರಾಗಿದ್ದಾರೆ.

ಇಲ್ಲಿಯ ಸದಾಶಿವ ನಗರದ ಗಣಪತಿ ದೇವಸ್ಥಾನದಲ್ಲಿ ಪ್ರತಿ ನಿತ್ಯ ಯೋಗ ಕಲಿಸಿ ಜನರಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸುತ್ತಿರುವ ಅಂಜಲಿತಾಯಿ ಗಾಡಗೀಳ ಯೋಗ ಶಿಕ್ಷಕಿ. ಪುರುಷ-ಮಹಿಳೆಯರೆನ್ನದೇ ಎಲ್ಲರಿಗೂ ಉಚಿತ ಯೋಗ ಕಲಿಸುವುದು ದಿನ ನಿತ್ಯದ ಕಾಯಕ. 31ನೇ ವಯಸ್ಸಿನಲ್ಲಿ ಯೋಗಕ್ಕೆ ಮನಸೋತು ಉಳಿದವರಿಗೂ ಅದರ ಲಾಭವನ್ನು ಮನದಟ್ಟು ಮಾಡಿಕೊಡುತ್ತಿದ್ದಾರೆ.

ಮೊಣಕಾಲು ನೋವು, ಪಾದಗಳಲ್ಲಿ ಜೀವ ಇಲ್ಲದಂತಾಗುವುದು, ಎದ್ದು ನಡೆಯಲೂ ಆಗದಂತಹ ವಿಪರೀತ ನೋವಿನಿಂದ ಅಂಜಲಿತಾಯಿ ಬಳಲುತ್ತಿದ್ದರು. ಆಗ ತುಮಕೂರಿನ ಕೃಷಿ ಅಧಿಕಾರಿಯಾಗಿದ್ದ ರಾಮಸ್ವಾಮಿ ಅವರು ಬೆಳಗಾವಿಗೆ ವರ್ಗವಾಗಿ ಬಂದಿದ್ದರು. ಆಗ ಅಲ್ಲಲ್ಲಿ ಯೋಗ ಕಲಿಸುತ್ತಿದ್ದರು. ಇದನ್ನು ಗಮನಿಸಿದ ಅಂಜಲಿತಾಯಿ ಅವರ ಬಳಿ ಯೋಗ ಅಭ್ಯಾಸ ಮಾಡಲು ಆರಂಭಿಸಿದ ನಂತರ ಕೆಲವೇ ದಿನಗಳಲ್ಲಿ ಅವರ ಆರೋಗ್ಯ ಸಮಸ್ಯೆಗಳು ದೂರವಾದವು.

ಯೋಗ ಕಲಿಸುವುದು ಹೇಗೆ, ಯೋಗದಿಂದ ಲಾಭವೇನು ಎಂಬುದರ ಬಗ್ಗೆಯೇ ರಾಮಸ್ವಾಮಿ ತರಬೇತಿ ನೀಡಿದ್ದರು. ಉಚಿತವಾಗಿ ಯೋಗ ಕಲಿಸಿ ತಾವೂ ಉಚಿತವಾಗಿ ತರಬೇತಿ ನೀಡುವಂತೆ ಹೇಳುತ್ತಿದ್ದರು. ಹೀಗಾಗಿ ಇವರ ಪ್ರೇರಣೆಯಂತೆ ಅಂಜಲಿತಾಯಿ ಈಗಲೂ ಉಚಿತವಾಗಿಯೇ ಯೋಗ ಕಲಿಸಿ ಸ್ಫೂರ್ತಿದಾಯಕರಾಗಿದ್ದಾರೆ. ಹರಿದ್ವಾರದ ರಾಮದೇವ ಬಾಬಾ ಅವರ ಬಳಿಯೂ ಹೋಗಿ ಬಂದಿದ್ದಾರೆ.

ಸುಮಾರು 40ಕ್ಕೂ ಹೆಚ್ಚು ಯೋಗಾಸನ ಹಾಗೂ ಪ್ರಾಣಾಯಾಮ ಕಲಿಸುತ್ತಿರುವ ಅಂಜಲಿತಾಯಿ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಾರೆ. ನಿಸ್ವಾರ್ಥ ಸೇವೆ ರೂಢಿಸಿಕೊಂಡಿರುವ ಇವರು ಯಾವುದೇ ಪ್ರಶಸ್ತಿಯ ಬೆನ್ನು ಹತ್ತಿದವರಲ್ಲ. ಪ್ರಚಾರದಿಂದ ದೂರವೇ ಉಳಿದಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಿಕಾದಲ್ಲಿ ಸೇವೆ ಸಲ್ಲಿಸುತ್ತಾರೆ. ಈಗ ಕೆಲ ವರ್ಷಗಳಿಂದ ಶಿರ್ಷಾಸಾನ ಮಾಡುವುದನ್ನು ನಿಲ್ಲಿಸಿ, ಇನ್ನುಳಿದ ಸರ್ವಾಂಗಾಸನಗಳನ್ನು ಮಾಡುತ್ತಿದ್ದಾರೆ.

ಉತ್ತಮ ಜೀವನ ಪದ್ಧತಿ,ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಲು ಯೋಗ ಸಂಜೀವಿನಿ. ನನ್ನ ಜೀವನದಲ್ಲಿ ಆದ ಪರಿವರ್ತನೆಯಿಂದಲೇ ಯೋಗ ಕಲಿತಿದ್ದೇನೆ. ಈವರೆಗೆ ನನಗೆ ಯಾವುದೇ ಅನಾರೋಗ್ಯವಿಲ್ಲ. ನನ್ನ ಪತಿ ಸಿವಿಲ್‌ ಎಂಜಿನಿಯರ್‌ ಆಗಿ ನಿವೃತ್ತರಾಗಿದ್ದಾರೆ. ಈಗ ಅವರಿಗೆ 81 ವಯಸ್ಸು. ನಿತ್ಯ ಪ್ರಾಣಾಯಾಮ ಮಾಡುತ್ತಾರೆ.
ಮಗ ಎಂಜಿನಿಯರ್‌, ಮಗಳು ದಂತ ವೈದ್ಯೆ. ಅವರೂ ಯೋಗಾಸನ ರೂಢಿಸಿಕೊಂಡಿದ್ದಾರೆ.
– ಅಂಜಲಿತಾಯಿ ಗಾಡಗೀಳ,
ಯೋಗ ಶಿಕ್ಷಕಿ

-ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

1-qweeqw

Kundapura; ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿಯೂ ವಿಧಿವಶ!

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

12-

Heat Weather: ಹಬೆಯಾಡುತ್ತಿರುವ ವಸುಂಧರೆ

11-candle

UV Fusion: ಆಯಸ್ಸು ಅಳಿಯುವ ಮುನ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

MUST WATCH

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

ಹೊಸ ಸೇರ್ಪಡೆ

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

1-qweeqw

Kundapura; ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿಯೂ ವಿಧಿವಶ!

1-aaa

Kaup: ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.