ಕಾಟುಕುಕ್ಕೆ ಶಾಲಾ ಪ್ರಧಾನ ರಸ್ತೆ, ಕೆಸರು ನೀರಿನ ಗದ್ದೆ

ಕೆಸರು,ನೀರು ತುಂಬಿದ ರಸ್ತೆಯಲ್ಲಿ ಓಡಾಡಿದರೆ ಜಾರಿ ಬೀಳುವ ಪರಿಸ್ಥಿತಿ

Team Udayavani, Jun 23, 2019, 5:13 AM IST

2206PRL1AKASTAPADUVA-MAKKALU

ಪೆರ್ಲ:ಕಾಟುಕುಕ್ಕೆಯ ಪ್ರಧಾನ ಕೇಂದ್ರ ಭಾಗವಾದ ಶ್ರೀ ಸುಬ್ರಹ್ಮಣ್ಯೇಶ್ವರ ಶಿಕ್ಷಣ ಸಂಸ್ಥೆಗಳ ಸಮೀಪದಲ್ಲಿ ಹಾದು ಹೋಗುವ ಮುಖ್ಯ ರಸ್ತೆಯು ಕೆಸರು ನೀರು ತುಂಬಿ ನಡೆಯುವುದೇ ಕಷ್ಟಕರವಾಗಿದೆ. ಕಾಟುಕುಕ್ಕೆ ಶಾಲೆಗೆ ಬರುವ ಮಕ್ಕಳು ರಸ್ತೆದಾಟಿ ಹೋಗಿ ಬರಲು ತುಂಬ ಕಷ್ಟಪಡುತ್ತಾರೆ.

ಕೆಸರು,ನೀರು ತುಂಬಿ ಜಾರಿ ಬೀಳುವ ಪರಿಸ್ಥಿತಿ.ಜೋರು ಮಳೆ ಬಂದರಂತೂ ರಸ್ತೆ ಪೂರ್ತಿ ನೀರು.ಹಾದು ಹೋಗುವ ವಾಹನಗಳಿಂದಲೂ ಕೆಸರು ನೀರು ಎರಚುತ್ತದೆ.

ಅಡ್ಕಸ್ಥಳದಿಂದ ಆರಂಭವಾಗಿ ಖಂಡೇರಿ ಮೂಲಕ ಕರ್ನಾಟಕಕ್ಕೆ ಈ ರಸ್ತೆ ಸಂಪರ್ಕಿಸುತ್ತದೆ.ಪ್ರಸಿದ್ಧ ಪುಣ್ಯ ಕ್ಷೇತ್ರ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇಗುಲಕ್ಕೆ ಹೋಗಲು ಹಾಗೂ ಪೆರ್ಲ ಕಡೆಗೆ ತೆರಳಲು ಈ ರಸ್ತೆಯೇ ಆಗಬೇಕು.

ಇಲ್ಲಿ ಪ್ರಾಥಮಿಕ ಶಾಲೆಯಿಂದ ತೊಡಗಿ ಪ್ಲಸ್‌ಟು ವರೆಗೆ ಸುಮಾರು ಏಳುನೂರರಷ್ಟು ಮಕ್ಕಳು ವಿದ್ಯಾರ್ಜನೆಗೈಯುತ್ತಾರೆ.ಸಮೀಪದಲ್ಲಿ ಒಂದು ಅಂಗನವಾಡಿಯು ಇದೆ.ಹಲವಾರು ವ್ಯಾಪಾರ ಸಂಸ್ಥೆಗಳು,ಬ್ಯಾಂಕ್‌ಗಳು ಕಾರ್ಯಾಚರಿಸುತ್ತಿರುವ ಇಲ್ಲಿ ನೂರಾರು ಜನ ತಮ್ಮ ಅಗತ್ಯ ಕಾರ್ಯಗಳಿಗೆ ಆಗಮಿಸುತ್ತಾರೆ.

ರಸ್ತೆಯ ಒಂದು ಪಾರ್ಶ್ವ ಎತ್ತರದ ಪ್ರದೇಶವಾಗಿದ್ದು ಮೇಲಿನ ನೀರು ಹರಿದು ಬಂದು ಇಲ್ಲಿ ಕಟ್ಟಿ ನಿಲ್ಲುತ್ತದೆ.ಗ್ರಾಮೀಣ ಪ್ರದೇಶವಾದ ಇಲ್ಲಿ ಬಸ್ಸು ವ್ಯವಸ್ಥೆಯು ಇಲ್ಲ .ಮಾರ್ಗದ ಬದಿಯಲ್ಲಿ ನೀರು ಹರಿದು ಹೋಗಲು ಚರಂಡಿ ಇದ್ದರೂ ಅಲ್ಲಿ ಮಣ್ಣು ತುಂಬಿ ನೀರು ಹರಿದು ಹೋಗುವುದಿಲ್ಲ.

ಮಣ್ಣು ಸರಿಸಿ ದುರಸ್ತಿಗೊಳಿಸಿದರೆ ನೀರು ಹರಿದು ಹೋಗಬಹುದು ಕಾಟುಕುಕ್ಕೆ ದೇವಸ್ಥಾನ ರಸ್ತೆಯಂತೂ ತುಂಬಾ ಅಗಲ ಕಿರಿದಾಗಿ ಘನ ವಾಹಗಳ ಚಾಲಕರು ತುಂಬ ಕಷ್ಟಪಡುವ ಸ್ಥಿತಿ.ಉ,ಟಾಗುತ್ತಿದೆ.ಮುಂದಿನಿಂದ ವಾಹನ ಬರುತ್ತಿದ್ದರೆ ಬದಿಗೆ ಸರಿಯಲು ಸಾಧ್ಯವಾಗದಷ್ಟು ರಸ್ತೆಯು ಕಿರಿದಾಗಿದೆ ಎಂದು ಚಾಲಕರಾದ ವಸಂತ ಕುಮಾರ್‌ ಹೇಳುತ್ತಾರೆ.ಈ ರಸ್ತೆಯನ್ನು ಅಗಲಗೊಳಿಸಿ ಸಂಚಾರಯೋಗ್ಯ ಗೊಳಿಸುವುದು ಅತೀ ಆಗತ್ಯವಾಗಿದೆ.

ಬಸ್‌ವ್ಯವಸ್ಥೆಯೂ ಇಲ್ಲ
ಮೊದಲು ಒಡ್ಯ ಕಡೆಗೆ ಹೋಗುವ ಬಸ್ಸು ಇಲ್ಲಿಯವರೆಗೆ ಬಂದು ಹೋಗುತಿತ್ತು.ಆದರೆ ಇದೀಗ ಕೆಲ ತಿಂಗಳುಗಳಿಂದ ಆ ಬಸ್ಸು ರಸ್ತೆ ಹದಗೆಟ್ಟ ಕಾರಣ ತನ್ನ ಯಾನವನ್ನು ಮೊಟಕುಗೊಳಿಸಿದೆ.

ಹೊಂಡಗಳಿಂದ ಕೂಡಿದ ಅಗಲಕಿರಿದಾದ ರಸ್ತೆಗಳಿಂದಾಗಿ ಶಾಲಾ ವಹನಗಳಿಗೂ ಸಂಚರಿಸಲು ಕಷ್ಟವಾಗುತ್ತದೆ.ವಾಹನಗಳು ಆಗಾಗ ಕೆಟ್ಟು ನಿಲ್ಲುವ ಪರಿಸ್ಥಿತಿ.ಸುಮಾರು ಐದು ಬಸ್ಸು ಗಳಿಗೆ ಪರ್ಮಿಟ್‌ ಇದ್ದರೂ ಇಲ್ಲಿ ಒಂದು ಸಾರಿಗೆ ಬಸ್ಸಿನ ವ್ಯವಸ್ಥೆಯು ಇಲ್ಲ
-ಸುಧೀರ್‌ ಕುಮಾರ್‌
ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಪ್ರೌಢ ಶಾಲಾ ಪ್ರಧಾನ ಶಿಕ್ಷಕ

ಪಂಚಾಯತ್‌ ಅನುದಾನ ಇಲ್ಲ
ಚರಂಡಿ ದುರಸ್ತಿಗೆ ಪಂಚಾಯತಿನ ಅನುದಾನ ಇಲ್ಲ .ಸ್ಥಳೀಯರನ್ನು ಸೇರಿದುರಸ್ತಿಗೊಳಿಸಲಾಗುವುದು
-ಮಲ್ಲಿಕಾ ರೈ
ವಾರ್ಡ್‌ ಸದಸ್ಯೆ

- ಬಾಲಕೃಷ್ಣ ಅಚ್ಚಾಯಿ

ಟಾಪ್ ನ್ಯೂಸ್

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.