ಫ್ಯಾನ್ಸ್‌ ತಲೆಕೆಡಿಸಿದ ದರ್ಶನ್‌ ಓಪನ್‌ ಚಾಲೆಂಜ್‌

ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ನೋಡಿ- ದರ್ಶನ್‌

Team Udayavani, Jul 3, 2019, 3:00 AM IST

darshan

ಮಂಗಳವಾರ ಬೆಳ್ಳಗೆ ಎದ್ದು ಫೇಸ್‌ಬುಕ್‌, ಟ್ವಿಟ್ಟರ್‌ ಅಂಥ ಸೋಶಿಯಲ್‌ ಮೀಡಿಯಾಕ್ಕೆ ಎಂಟ್ರಿ ಕೊಟ್ಟ ಸಿನಿಪ್ರಿಯರಿಗೆ ಸರ್‌ಪ್ರೈಸ್‌ ಒಂದು ಕಾದಿತ್ತು. ಸರ್‌ಪ್ರೈಸ್‌ ಕೊಟ್ಟವರು ಬೇರ್ಯಾರು ಅಲ್ಲ, ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌. “ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್‌ ಚಾಲೆಂಜ್‌, ಮಧ್ಯಾಹ್ನ ಫೇಸ್‌ಬುಕ್‌ ಲೈವ್‌ ಬರ್ತೀನಿ ಬಂದಾಗ ಎಲ್ಲಾನು ತಿಳಿಸುತ್ತೇನೆ’ ಎಂದು ದರ್ಶನ್‌ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಬರೆದುಕೊಂಡಿದ್ದರು.

ಸೋಶಿಯಲ್‌ ಮೀಡಿಯಾಗಳಲ್ಲಿ ಅಪರೂಪಕ್ಕೆ ಪೋಸ್ಟ್‌ ಹಾಕುವ ಚಾಲೆಂಜಿಂಗ್‌ ಸ್ಟಾರ್‌, ಇದ್ದಕ್ಕಿದ್ದಂತೆ ಸೋಶಿಯಲ್‌ ಮೀಡಿಯಾದಲ್ಲಿ ಇಂಥದ್ದೊಂದು “ಓಪನ್‌ ಚಾಲೆಂಜ್‌’ ಹಾಕಿದ್ದು, ಸಹಜವಾಗಿಯೇ ದರ್ಶನ್‌ ಅಭಿಮಾನಿಗಳ ತಲೆಗೆ ಹುಳ ಬಿಡುವಂತೆ ಮಾಡಿತ್ತು. ಅನೇಕರು ಇಂಥದ್ದೊಂದು ಟ್ವೀಟ್‌ ಕಂಡು ಅಚ್ಚರಿಗೊಂಡಿದ್ದರು.

ಹಾಗಾದ್ರೆ ದರ್ಶನ್‌ ಯಾವುದರ ಬಗ್ಗೆ ಟ್ವೀಟ್‌ ಮಾಡಿರಬಹುದು? ಟ್ವೀಟ್‌ ಮಾಡಲು ಕಾರಣ ಏನಿರಬಹುದು? ಚಾಲೆಂಜಿಂಗ್‌ ಸ್ಟಾರ್‌ “ಓಪನ್‌ ಚಾಲೆಂಜ್‌’ ಯಾರಿಗೆ ಮಾಡಿರಬಹುದು? “ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್‌ ಚಾಲೆಂಜ್‌’ ಅಂತ ಅಂದಿರುವುದರಿಂದ, ಆ ಮತ್ತೂಬ್ಬ ಸೆಲೆಬ್ರಿಟಿ ಯಾರು? ಮತ್ತೇನಾದರೂ ಸ್ಟಾರ್‌ವಾರ್‌ ಶುರುವಾಗುತ್ತಾ? ಎಂದು ದರ್ಶನ್‌ ಅಭಿಮಾನಿಗಳು ಗಹನವಾದ ಲೆಕ್ಕಾಚಾರಕ್ಕೆ ಇಳಿದಿದ್ದರು.

ದರ್ಶನ್‌ ಹಾಕಿದ್ದು “ಓಪನ್‌ ಚಾಲೆಂಜ್‌’ ಫ್ಯಾನ್ಸ್‌ಗೆ ತಾನು ಹೇಳಿದಂತೆಯೇ ಮಧ್ಯಾಹ್ನದ ಹೊತ್ತಿಗೆ ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋವನ್ನು ಬಿಡುಗಡೆ ಮಾಡಿದ ದರ್ಶನ್‌, ತಾನು ಚಾಲೆಂಜ್‌ ಹಾಕಿದ್ದ ಸೆಲೆಬ್ರಿಟಿ ಮತ್ಯಾರು ಅಲ್ಲ ಅದೂ ಫ್ಯಾನ್ಸ್‌ ಅಂತ ಹೇಳಿ, ಅಭಿಮಾನಿಗಳಲ್ಲಿ ಬೆಳಿಗ್ಗೆಯಿಂದ ಮನೆ ಮಾಡಿದ್ದ ಸೆಲೆಬ್ರಿಟಿ ಯಾರು ಎನ್ನುವ ಕುತೂಹಲಕ್ಕೆ ತೆರೆ ಎಳೆದರು.

ಈ ಮೂಲಕ ತನಗೆ ಅಭಿಮಾನಿಗಳೇ ಸೆಲೆಬ್ರಿಟಿಗಳು ಅನ್ನೋದನ್ನ ಮತ್ತೂಮ್ಮೆ ಸಾಬೀತುಪಡಿಸಿದರು. ಜೊತೆಗೆ ಅಭಿಮಾನಿಗಳಲ್ಲಿ “ಕುರುಕ್ಷೇತ್ರ’ ಸಿನಿಮಾವನ್ನು ನೋಡುವಂತೆ ಚಾಲೆಂಜ್‌ ಕೂಡ ಹಾಕಿದರು. ಈ ಬಗ್ಗೆ ವೀಡಿಯೋದಲ್ಲಿ ಮಾತನಾಡಿರುವ ದರ್ಶನ್‌, “”ಕುರುಕ್ಷೇತ್ರ’ ಚಿತ್ರದಲ್ಲಿ ಅನೇಕ ಕಲಾವಿದರು ಅಭಿನಯಿಸಿದ್ದಾರೆ.

ಎಲ್ಲರನ್ನು ಸಮಾನವಾದ ದೃಷ್ಟಿಯಲ್ಲಿ ನೋಡಿ. ಪಾಸ್‌ನಲ್ಲಿ ಫೋಟೋ ಇಲ್ಲ ಎಂದು ಸಿನಿಮಾ ನೋಡದೆ ಇರುವುದು ಸರಿಯಲ್ಲ. ಅಂಬರೀಶ್‌, ಅರ್ಜುನ್‌ ಸರ್ಜಾ, ರವಿಚಂದ್ರನ್‌ ಮತ್ತು ನಿಖಲ್‌ ಸೇರಿದಂತೆ ಎಲ್ಲರು ಇದ್ದಾರೆ. ಹಾಗಾಗಿ ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ನೋಡಿ, ಸಿನಿಮಾ ನೋಡಬೇಕು ಎನ್ನುವುದು ನನ್ನ ಚಾಲೆಂಜ್‌’ ಎಂದು ಅಭಿಮಾನಿಗಳಿಗೆ ಚಾಲೆಂಜ್‌ ಹಾಕಿದ್ದಾರೆ.

ಈ ಮೂಲಕ ಸ್ಟಾರ್‌ವಾರ್‌ ಆಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದರ್ಶನ್‌ ಹೀಗೊಂದು ಪ್ರಯತ್ನ ಮಾಡಿದ್ದಾರೆ. ಒಟ್ಟಾರೆ ಬೆಳಿಗ್ಗೆಯಿಂದಲೇ ಅಭಿಮಾನಿಗಳಲ್ಲಿ ಒಂದಷ್ಟು ಕುತೂಹಲ ಮೂಡಿಸಿದ್ದ ದರ್ಶನ್‌ “ಓಪನ್‌ ಚಾಲೆಂಜ್‌’ ಟ್ವೀಟ್‌ಗೆ ಮಧ್ಯಾಹ್ನದ ವೇಳೆಗೆ ಉತ್ತರ ಸಿಕ್ಕಿದ್ದರಿಂದ ಫ್ಯಾನ್ಸ್‌ ಕೂಡ ನಿಟ್ಟುಸಿರು ಬಿಡುವಂತಾಯಿತು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.