ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಧರಣಿ ಸತ್ಯಾಗ್ರಹ
Team Udayavani, Jul 3, 2019, 10:05 AM IST
ಮುಂಡರಗಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮುಂಡರಗಿ: ತಾಲೂಕಿನ ಕಟ್ಟಡ ಕಾರ್ಮಿಕರು, ಬಾರ ಬೈಂಡಿಂಗ್ ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಮನವಿ ಸಲ್ಲಿಸಿದರು.
ಕಾರ್ಮಿಕ ಇಲಾಖೆ ಕಾರ್ಯಾಲಯಕ್ಕೆ ಕಾರ್ಮಿಕರು ತೆರಳಿ ಸಮಸ್ಯೆಗಳನ್ನು ಹೇಳಿದರೆ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಶೈಕ್ಷಣಿಕ ಧನ ಸಹಾಯ, ವೈದ್ಯಕೀಯ ಧನ ಸಹಾಯ, ಮರಣ ಧನ ಸಹಾಯ, ಮದುವೆ ಸಹಾಯ ಧನ, ಅನಿಲ ಭಾಗ್ಯ ಸೇರಿದಂತೆ ಯಾವುದೇ ಸೌಲಭ್ಯಗಳು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಲಾಯಿತು.
ತಹಶೀಲ್ದಾರ್ ಡಾ| ವೆಂಕಟೇಶ ನಾಯಕರಿಗೆ ಮನವಿ ಸಲ್ಲಿಸಲಾಯಿತು.
ಗ್ಯಾನಪ್ಪ ಶೀರಿ, ಮುದಿಯಪ್ಪ ಕುಂಬಾರ, ಬಾಷು ನಾಯ್ಕರ, ನಾಗರಾಜ ವಡ್ಡರ್, ರಾಜಾಭಕ್ಷಿ ಬೆಟಗೇರಿ, ಸುಭಾಸ ಕುಂಬಾರ, ನಾಗರಾಜ ಕೋರ್ಲಹಳ್ಳಿ, ಅಡಿವೆಪ್ಪ ಛಲವಾದಿ, ರಾಮಣ್ಣ ಬಂಡಿವಡ್ಡರ್, ಸುರೇಶ ಕರಮುಡಿ, ಮದಲಗಟ್ಟಿ ಕಲ್ಲಕುಟಿರ್, ರಾಮಣ್ಣ ಕಲ್ಲಜುಟಿಗರ, ವೆಂಕಟೇಶ ಕರಡಿಕೊಳ್ಳ ಫೀರೋಜ್ಖಾನ್ ಘೋರಿ, ಸಲೀಂ ಅಹ್ಮದ್ ತಳಗಡೆ, ಖಾಜಾಸಾಬ್ ಶಿರಹಟ್ಟಿ, ನೌಷಾದಸಾಬ್ ಶಿರಹಟ್ಟಿ, ಕಾಶಿಮಸಾಬ್ ಹಮ್ಮಸಾಗರ ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ