ಭಾರೀ ಮಳೆ: ಪೇಜಾವರ ಶ್ರೀಗಳಿಗೆ ನೆರವಾದ ಮುಸ್ಲಿಂ ಟ್ಯಾಕ್ಸಿ ಚಾಲಕ
ಮುಂಬಯಿಯಲ್ಲಿ ಸಂಚಾರ ಸಾಧ್ಯವಾಗದೆ ಪರದಾಡುತ್ತಿದ್ದ ವೇಳೆ ಶ್ರೀಗಳನ್ನು ಕರೆದೊಯ್ದ ಚಾಲಕ
Team Udayavani, Jul 3, 2019, 11:39 AM IST
ಮುಂಬಯಿ: ಕುಂಭ ದ್ರೋಣ ಮಳೆಯಿಂದಾಗಿ ಹಲವು ರಸ್ತೆಗಳಲ್ಲಿ ನೆರೆ ನೀರು ಆವರಿಸಿಕೊಂಡ ಕಾರಣ ನಗರದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಈ ಸಂದರ್ಭದಲ್ಲಿ ಮುಂಬಯಿಯಲ್ಲಿರುವ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಸಂಚಾರ ಸಾಧ್ಯವಾಗದೆ ಪರದಾಡಬೇಕಾಯಿತು. ಈ ವೇಳೆ ಮುಸ್ಲಿಂ ಚಾಲಕರೊಬ್ಬರು ಶ್ರೀಗಳಿಗೆ ನೆರವಾದರು.
ಮಂಗಳವಾರ ಬರೋಡಾದಿಂದ ರೈಲಿನಲ್ಲಿ ಆಗಮಿಸಿದ ಶ್ರೀಗಳು ಡೊಂಬಿವಲಿಗೆ ತೆರಳಬೇಕಾಗಿತ್ತು,ಆದರೆ ರೈಲು ಬೊರಿವಿಲಿಯಲ್ಲೆ ನಿಂತ ಕಾರಣ ಶ್ರೀಗಳು ಬೇರೆ ವಾಹನವನ್ನ ಅವಲಂಬಿಸಬೇಕಾಯಿತು. ಯಾವ ಟ್ಯಾಕ್ಸಿ ಚಾಲಕರು ಶ್ರೀಗಳನ್ನು ಕರೆದೊಯ್ಯಲು ಮುಂದಾಗಲಿಲ್ಲ.
ಈ ವೇಳೆ ಕಲಬುರಗಿ ಮೂಲದ ಶರ್ಫುದ್ದೀನ್ ಮಲೀಕ್ ಎನ್ನುವವರು ಭಾರೀ ಮಳೆಯ ನಡೆವೆಯೂ ಶ್ರೀಗಳನ್ನು ಮಧ್ಯಾಹ್ನ 12.30 ರ ಒಳಗೆ ಡೊಂಬಿವಲಿಗೆ ತಲುಪಿಸಿದರು ಎಂದು ತಿಳಿದು ಬಂದಿದೆ.