ಅಜೆಕಾರು: ಕುಸಿದು ವರ್ಷ ಕಳೆದರೂ ದುರಸ್ತಿಯಾಗದ ಮಾಂಜಾ ಸೇತುವೆ
Team Udayavani, Jul 4, 2019, 5:19 AM IST
ಅಜೆಕಾರು: ಮಳೆಗೆ ಕುಸಿದ ಮಾಂಜಾ ಸೇತುವೆ ವರ್ಷ ಕಳೆದರೂ ದುರಸ್ತಿಯಾಗದೆ ಸಂಪೂರ್ಣ ಕೊಚ್ಚಿಹೋಗುವ ಹಂತದಲ್ಲಿದೆ. ಮರ್ಣೆ ಗ್ರಾಮ ಪಂಚಾಯತ್ ಹಾಗೂ ಕಡ್ತಲ ಗ್ರಾಮ ಪಂಚಾಯತ್ ನಡುವೆ ಸಂಪರ್ಕ ಕಲ್ಪಿಸುವ ಈ ಸೇತುವೆಯ ತಡೆಗೋಡೆ ಹಾಗೂ ಆಧಾರ ಸ್ತಂಭ 2018ರ ಜೂನ್ 15ರಂದು ಭಾರೀ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು.
ಅಜೆಕಾರು ಕೈಕಂಬದಿಂದ ಕುಕ್ಕುಜೆಯ ಮೂಡ ಬೆಟ್ಟು ದೊಂಡೇರಂಗಡಿ ಸಂಪರ್ಕಿಸಲು ಅತೀ ಹತ್ತಿರದ ಮಾರ್ಗ ಇದಾಗಿದ್ದು ಸೇತುವೆ ಕುಸಿತದಿಂದ ನಾಗರಿಕರು ಸಂಚಾರ ಕಡಿತದ ಭೀತಿಯಲ್ಲಿದ್ದಾರೆ.
ಈ ಸೇತುವೆಯು ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಸೇತುವೆ ಅಭಿವೃದ್ಧಿಪಡಿಸಲು ಹಾಗೂ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆಯ ಅನುಮತಿ ಅಗತ್ಯವಿದೆ. ಅರಣ್ಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುವುದರಿಂದ ಸಮಸ್ಯೆ ಉಂಟಾಗಿದೆ. ದಶಕಗಳ ಹಿಂದಷ್ಟೇ ನಿರ್ಮಾಣವಾದ ಈ ಸೇತುವೆಯ ನಡುವಿನ ಆಧಾರಸ್ತಂಭವು ಬಿರುಕುಬಿಟ್ಟಿದ್ದು ಅನಂತರದ ದಿನಗಳಲ್ಲಿ ತೇಪೆ ಕಾರ್ಯ ನಡೆಸಲಾಗಿತ್ತು ಎಂದು ಸ್ಥಳೀಯರು ದೂರಿದ್ದಾರೆ.
ಹೊಸ ಸೇತುವೆಗೆ ಚಿಂತನೆ
ಸಹಕಾರ ಅಗತ್ಯ