ನಗರಸಭೆಯಿಂದ ವೇತನ ಕೊಡಿ
•ಹೊರ ಗುತ್ತಿಗೆ ಪೌರ ಕಾರ್ಮಿಕರನ್ನೂ ನಗರಸಭೆ ಪೌರ ಕಾರ್ಮಿಕರಂತೆ ಪರಿಗಣಿಸಲು ಆಗ್ರಹ
Team Udayavani, Jul 7, 2019, 3:50 PM IST
ರಾಣಿಬೆನ್ನೂರ: ಪೌರಾಡಳಿತ ಸಚಿವ ಆರ್. ಶಂಕರ್ ಮತ್ತು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ನಗರಸಭೆ ಪೌರ ಕಾರ್ಮಿಕರ ಅಹವಾಲು ಆಲಿಸಿದರು.
ರಾಣಿಬೆನ್ನೂರ: ನಗರಸಭೆ ಪೌರ ಕಾರ್ಮಿಕರಂತೆ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೂ ನಗರಸಭೆಯಿಂದ ನೇರ ವೇತನ ಪಾವತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪೌರಾಡಳಿತ ಸಚಿವ ಆರ್. ಶಂಕರ್ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದರು.
ಶನಿವಾರ ಇಲ್ಲಿನ ತಾಪಂ ಆವರಣದಲ್ಲಿ ನಗರಸಭೆ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ನೀಡಿದ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಗಳೊಂದಿಗೆ ಮಾತನಾಡಿದರು. ಈ ಹಿಂದೆ ನಗರಸಭೆಗೆ ನೇಮಕವಾದ 15 ಪೌರ ಕಾರ್ಮಿಕರ ಬಗ್ಗೆ ಇತರರು ನೀಡಿದ ದೂರಿನ ಅನ್ವಯ ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ಜರುಗಿಸಲು ಸೂಚಿಸಿದರು.
ಪೌರ ಕಾರ್ಮಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಬೇಡಿಕೆ ಈಡೇರಿಸಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ನಿಮ್ಮ ಸಮ್ಮುಖದಲ್ಲಿಯೇ ಸೂಚನೆ ನೀಡಿರುವೆ. ಚನ್ನಪ್ಪ ನಡುವಿನಕೇರಿ ಹಾಗೂ ಶೇಖಪ್ಪ ಉಜ್ಜೇರ ನಿಧನದ ನಂತರ ಉಂಟಾಗಿರುವ ಸಮಸ್ಯೆಗೆ ಅವರ ಕುಟುಂಬ ವರ್ಗದವನ್ನು ನೇಮಕ ಮಾಡಿಕೊಳ್ಳಲು ಸೂಚಿಸಿದರು. ಜೊತೆಗೆ ಸರಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿರುವೆ ಎಂದರು.
ಸಂಘದ ಅಧ್ಯಕ್ಷ ಕರಬಸಪ್ಪ ದಾಸಪ್ಪನವರ ಮಾತನಾಡಿ, ನಗರಸಭೆಯಲ್ಲಿ 135 ಗುತ್ತಿಗೆ ಪೌರ ಕಾರ್ಮಿಕರಿದ್ದು, ಇದರಲ್ಲಿ 10ರಿಂದ 15 ವರ್ಷ ಸೇವೆ ಸಲ್ಲಿಸಿದವರೂ ಸಹ ಇದ್ದಾರೆ. ಇಂತಹ ಸಂದರ್ಭದಲ್ಲಿ ಕೇವಲ 2-3ವರ್ಷ ಸೇವೆ ಸಲ್ಲಿಸಿದ 15ಕ್ಕೂ ಅಧಿಕ ಪೌರಕಾರ್ಮಿಕರನ್ನು ನೇಮಕ ಮಾಡಿರುವುದರಲ್ಲಿ ಉಂಟಾಗಿರುವ ತಾರತಮ್ಮ ಸರಿಪಡಿಸಬೇಕು. ಇಲ್ಲವಾದರೆ ಸಾಮೂಹಿಕವಾಗಿ ವಿಷ ಸೇವಿಸುವುದಾಗಿ ಎಚ್ಚರಿಸಿದರು.
ಆಯ್ಕೆಯಲ್ಲಿ ಉಂಟಾದ ತಾರತಮ್ಯ ಸರಿಪಡಿಸಬೇಕು, ಆಯ್ಕೆಯಲ್ಲಿ ಅನೇಕ ಖೊಟ್ಟಿ ಪ್ರಮಾಣಪತ್ರ ನೀಡಿ ನೇಮಕವಾಗಿದ್ದನ್ನು ರದ್ದುಪಡಿಸಬೇಕು, ಅನ್ಯ ಜಾತಿಯವರೂ ನೇಮಕಾತಿಯಲ್ಲಿ ಆಯ್ಕೆಯಾಗಿರುವುದನ್ನು ಕೈ ಬಿಡಬೇಕು ಎಂದು ಪೌರ ಕಾರ್ಮಿಕರು ಒತ್ತಾಯಿಸಿದಾಗ, ಇದಕ್ಕೆ ಪ್ರತಿಕ್ರಯಿಸಿದ ಸಚಿವರು, ಎಲ್ಲ 130 ಪೌರ ಕಾರ್ಮಿಕರನ್ನು ಸಮಾನರೆಂದು ಅರಿತು ಅವರೆಲ್ಲರಿಗೂ ನೇರ ವೇತನ ಪಾವತಿಗೆ ಸೂಚನೆ ನೀಡಿರುವಾಗ ಮತ್ತೇಕೆ ಈ ತಾರತಮ್ಮ ಎಂದು ಪ್ರಶ್ನಿಸಿದರು.
ಈ ಬಗ್ಗೆ ಸುಮಾರು 20ನಿಮಿಷ ನಿಂತುಕೊಂಡೇ ಪೌರ ಕಾರ್ಮಿಕರ ಅಹವಾಲು ಆಲಿಸಿದ ಸಚಿವರಿಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಪೌರಾಯುಕ್ತ ಡಾ| ಎನ್ ಮಹಾಂತೇಶ ಸೇರಿದಂತೆ ಹಿರಿಯ ಕಿರಿಯ ಅಧಿಕಾರಿಗಳು ಜೊತೆಗಿದ್ದು, ಸಚಿವರ ಸಲಹೆ-ಸೂಚನೆ ಪಾಲಿಸುವುದಾಗಿ ಭರವಸೆ ನೀಡಿದರು. ಸಂಘದ ಕಾರ್ಯದರ್ಶಿ ಮೈಲಪ್ಪ ದಾಸಪ್ಪನವರ, ಹನುಮಂತಪ್ಪ ಕಬ್ಟಾರ, ಹನುಮಂತಪ್ಪ ನಡುವಿನಕೇರಿ, ಮಂಜುನಾಥ ಆರಿಕಟ್ಟಿ, ಗುರುರಾಜ ಬುಳ್ಳಪ್ಪನವರ, ರವಿ ಮೆಣಸಿನಹಾಳ, ಅರುಣ ಆಡೂರು, ಎಚ್. ಕಿರಣಕುಮಾರ, ಕುಮಾರ ಗೊಲ್ಲರ, ರಾಜು ಕಡತಿ, ಶಿವಪ್ಪ ಕೊಪ್ಪದ, ಗುತ್ತೆವ್ವ, ಪರಿಮಳ, ಹೊನ್ನವ್ವ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
ಹಾವೇರಿ: ಕಾಂಗ್ರೆಸ್ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ
ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ