ಸಸಿಹಿತ್ಲು: ಸಮುದ್ರಪಾಲಾಗಿದ್ದ ಓರ್ವ ಯುವಕನ ಶವ ಪತ್ತೆ
Team Udayavani, Jul 9, 2019, 9:22 AM IST
ಸಸಿಹಿತ್ಲು: ಕೆಸರುಗದ್ದೆ ಕ್ರೀಡೋತ್ಸವಕ್ಕೆ ಬಂದು ಈಜಲು ತೆರಳಿ ಸಸಿಹಿತ್ಲು ಬಳಿಯ ಅಗ್ಗಿದ ಕಳಿಯದ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಇಬ್ಬರ ಪೈಕಿ ಓರ್ವನ ಶವ ಸೋಮವಾರ ಪತ್ತೆಯಾಗಿದೆ. ಮತ್ತೋರ್ವನಿಗಾಗಿ ಶೋಧ ಮುಂದುವರಿದಿದೆ.
ಬಜಪೆಯ ಸಿದ್ಧಾರ್ಥ ನಗರದ ಸುಜಿತ್(20) ಶವವು ಸಮುದ್ರದ ಅಲೆಯೊಂದಿಗೆ ಮುಕ್ಕ ಬಳಿಯ ಕಸ್ತೂರಿ ಫಿಶ್ಮೀಲ್ನ ಬಂಡೆಗೆ ಅಪ್ಪಳಿಸಿದೆ. ಕಾವೂರಿನ ಗುರುಪ್ರಸಾದ್ (25) ಇನ್ನೂ ಪತ್ತೆಯಾಗಿಲ್ಲ.
ಇದೇ ಘಟನೆಯಲ್ಲಿ ನೀರಿಗೆ ಸಿಲುಕಿ ರಕ್ಷಿಸಲ್ಪಟ್ಟ ಬಜಪೆಯ ಸೃಜನ್ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾನೆ ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.
ಗ್ರಾಮದ ಗೌಜಿ ಉತ್ಸವದ ಕೆಸರುಗದ್ದೆ ಕ್ರೀಡೋತ್ಸವದ ಹಗ್ಗಜಗ್ಗಾಟದಲ್ಲಿ ಭಾಗಿಯಾಗಲು ಬಜ್ಪೆ ಯುವ ಟೈಗರ್ ತಂಡದ 7 ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇವರಲ್ಲಿ ನಾಲ್ವರು ಈಜುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ