ಮುಂಬಯಿ ಪ್ರಯಾಣಿಕರಿಗೆ ಡಬಲ್ ಖುಷಿ: BEST ಪ್ರಯಾಣ ದರ ಇಳಿಕೆ, ಆಟೋ ಮುಷ್ಕರ ಹಿಂದಕ್ಕೆ
Team Udayavani, Jul 9, 2019, 11:06 AM IST
ಮುಂಬಯಿ : ಮುಂಬಯಿ ಮಹಾನಗರಿಯ ನಿತ್ಯ ಪ್ರಯಾಣಿಕರಿಗೆ ಇಂದು ಮಂಗಳವಾರ ದುಪ್ಪಟ್ಟು ಸಂತಸ ಉಂಟಾಗಿದೆ.
ಮೊದಲನೇಯದಾಗಿ ಆಟೋ ಚಾಲಕರು ಇಂದಿನಿಂದ ಆರಂಭಿಸಲಿದ್ದ ತಮ್ಮ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂದೆಗೆದುಕೊಂಡಿದ್ದಾರೆ.
ಎರಡನೇಯದಾಗಿ ಮುಂಬಯಿ ಮಹಾ ನಗರಿಯ ಬೆಸ್ಟ್ ಸಾರಿಗೆ ಬಸ್ಸಿನ ಪ್ರಯಾಣ ದರವನ್ನು ಇಂದಿನಿಂದ ಜಾರಿಗೆ ಬರುವಂತೆ ಇಳಿಸಲಾಗಿದೆ.
ಬೆಸ್ಟ್ ಪ್ರಕಟಿಸಿರುವಂತೆ ಇಂದಿನಿಂದ ಬಸ್ಸು ಪ್ರಯಾಣ ದರ ನಾಲ್ಕು ಸ್ಲಾಬ್ಗಳನ್ನು ಮಾತ್ರವೇ ಹೊಂದಿರುತ್ತದೆ : 0.5 ಕಿ.ಮೀ, 5-10 ಕಿ.ಮೀ., 10-15 ಕಿ.ಮೀ ಮತ್ತು 15 ಕಿ.ಮೀ. ಮೀರುವ ಪ್ರಯಾಣ.
ಬೆಸ್ಟ್ ನಾನ್-ಎಸಿ ಕನಿಷ್ಠ ಪ್ರಯಾಣ ದರವನ್ನು ಮೊದಲ 5 ಕಿ.ಮೀ.ಗೆ 8 ರೂ.ಗಳಿಂದ 5ರೂ.ಗೆ ಇಳಿಸಲಾಗಿದೆ. ಗರಿಷ್ಠ ದರವನ್ನು 20 ರೂ.ಗೆ ನಿಗದಿಸಲಾಗಿದೆ.
ಎಸಿ ಬಸ್ ಕನಿಷ್ಠ ಪ್ರಯಾಣ ದರವನ್ನು 20 ರೂ.ಗಳಿಂದ 6 ರೂ.ಗೆ ಇಳಿಸಲಾಗಿದೆ. ಗರಿಷ್ಠ ದರವನ್ನು 25 ರೂ.ಗೆ ನಿಗದಿಸಲಾಗಿದೆ.
ಇಂದು ಮಂಗಳವಾರದಿಂದ ನಾನ್-ಎಸಿ (ರೆಗ್ಯುಲರ್) ಬಸ್ ಪ್ರಯಾಣ ದರವು 5 ರೂ., 10, ರೂ., 15 ರೂ. ಮತ್ತು 20 ರೂ. ಅಗಿರುತ್ತದೆ. ಏರ್ ಕಂಡೀಶನ್ ಬಸ್ ದರಗಳು 6, 13, 19 ಮತ್ತು 25 ರೂ.ಗಳಾಗಿರುತ್ತವೆ.
ಇದೇ ವೇಳೆ ಮುಂಬಯಿ ಆಟೋ ಚಾಲಕರ ಸಂಘದ ಪ್ರತಿನಿಧಿಗಳು ಇಂದು ತಮ್ಮ ಬೇಡಿಕೆಗಳನ್ನು ಚರ್ಚಿಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅರನ್ನು ಭೇಟಿಯಾಗಲಿದ್ದಾರೆ. ಅಂತೆಯೇ ಅವರು ಇಂದಿನಿಂದ ಆರಂಭಿಸಲಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂಪಡೆದಿದ್ದಾರೆ.
ಆಟೋ ಪ್ರಯಾಣದ ಕನಿಷ್ಠ ದರಗಳನ್ನು ಏರಿಸಬೇಕು, ಹೊಸ ಪರ್ಮಿಟ್ಗಳನ್ನು ನೀಡಬಾರದು, ಓಲಾ, ಉಬರ್ ಸೇವೆಗಳನ್ನು ನಿಷೇಧಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಟೋ ಚಾಲಕರ ಸಂಘ ಸರಕಾರವನ್ನು ಆಗ್ರಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ
Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ
Bhadohi; ಯು.ಪಿ ವ್ಯಕ್ತಿಯ ಖಾತೆಗೆ ಬರೋಬ್ಬರಿ 9,900 ಕೋಟಿ ರೂ ಜಮೆ! ಆಗಿದ್ದೇನು?
Jammu and Kashmir ಉಗ್ರ ದಾಳಿ; ಮಾಜಿ ಸರಪಂಚ್ ಸಾವು, ಇಬ್ಬರು ಪ್ರವಾಸಿಗರಿಗೆ ಗಾಯ
TG; ತೆಲಂಗಾಣದ ಸಂಕ್ಷಿಪ್ತ ರೂಪ ಇನ್ನು ಮುಂದೆ ‘ಟಿಎಸ್’ ಅಲ್ಲ!
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Pregnant: ಗರ್ಭಾವಸ್ಥೆ – ಬಾಣಂತನದ ಅವಧಿಯ ಮಾನಸಿಕ ಆರೋಗ್ಯ
Borderline Personality Disorder: ಬಾರ್ಡರ್ಲೈನ್ ಪರ್ಸನಾಲಿಟಿ ಡಿಸಾರ್ಡರ್
Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲೋಕಾರ್ಪಣೆಗೊಂಡಿದೆ ನೂತನ ಡಾ|ರಾಮದಾಸ್ ಎಂ.ಪೈ ಬ್ಲಾಕ್
Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ