ಕುಂದಾಪುರ – ಬೈಂದೂರು, ಬಸ್ರೂರು, ಕೋಟೇಶ್ವರದಲ್ಲಿ ತೆರೆಯದ ಶಾಲೆಗಳು
Team Udayavani, Jul 10, 2019, 5:10 AM IST
ಕುಂದಾಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಮಂಗಳವಾರ ಪ್ರತಿಭಟನೆಗೆ ಕರೆ ನೀಡಿದ್ದರಿಂದ ಕುಂದಾಪುರ ಹಾಗೂ ಬೈಂದೂರು ವಲಯದ ಬಹುತೇಕ ಎಲ್ಲ ಶಾಲೆಗಳು ರಜೆ ಸಾರಿದ್ದು, ಯಾವುದೇ ತರಗತಿಗಳು ನಡೆಯಲಿಲ್ಲ.
ಕುಂದಾಪುರ ವಲಯದ 130 ಶಾಲೆಗಳ ಸುಮಾರು 470 ಶಿಕ್ಷಕರು ಹಾಗೂ ಬೈಂದೂರು ವಲಯದ 200 ಶಾಲೆಗಳ 700 ಮಂದಿ ಶಿಕ್ಷಕರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಮುಷ್ಕರದಲ್ಲಿ ಭಾಗವಹಿಸಿದ್ದು, ಇದಕ್ಕೆ ಕುಂದಾಪುರ ತಾಲೂಕು ಶಿಕ್ಷಕರ ಸಂಘವು ಕೂಡ ಬೆಂಬಲ ವ್ಯಕ್ತಪಡಿಸಿತ್ತು.
ಕುಂದಾಪುರ ವಲಯದಲ್ಲಿ ಸುಮಾರು 10 ಶಾಲೆಗಳಲ್ಲಿ ಇಲ್ಲಿ ಪದವೀಧರ ಶಿಕ್ಷಕರಿದ್ದರಿಂದ ಮಾತ್ರ ತೆರೆಯಲಾಗಿತ್ತು. ಆದರೆ ಇಲ್ಲಿಯೂ ಕೂಡ 1 ರಿಂದ 5 ನೇ ತರಗತಿಯವರೆಗಿನ ಮಕ್ಕಳಿಗೆ ಮಾತ್ರ ಪಾಠ ಮಾಡಿಲ್ಲ ಎಂದು ತಿಳಿದು ಬಂದಿದೆ. ಹೆಚ್ಚಿನ ಶಾಲೆಗಳಲ್ಲಿ ಶಿಕ್ಷಕರೇ ಮುನ್ನ ದಿನವೇ ಮಕ್ಕಳಿಗೆ ಶಾಲೆಗೆ ಬರಬೇಡಿ, ಪ್ರತಿಭಟನೆ ಇದೆ ಎನ್ನುವುದಾಗಿ ತಿಳಿಸಿದ್ದರಿಂದ ಯಾವುದೇ ಗೊಂದಲ ಅಥವಾ ತೊಂದರೆಗಳಾದ ಬಗ್ಗೆ ವರದಿಯಾಗಿಲ್ಲ.
ಬಸ್ರೂರು: ಶಾಲೆಗಳು ಬಂದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ