ತಹಶೀಲ್ದಾರ್ ಕಚೇರಿಯೇ ಡಸ್ಟ್ ಬಿನ್!
ಮೂಲೆಗಳೆಲ್ಲ ಉಗುಳಿನ ಕೆಂಬಣ್ಣ•ಎಲ್ಲೆಂದರಲ್ಲಿ ಬಿದ್ದಿವೆ ದಾಖಲೆಗಳು
Team Udayavani, Jul 10, 2019, 10:03 AM IST
ತಹಶೀಲ್ದಾರ್ ಕಚೇರಿ ಮೂಲೆಯಲ್ಲಿ ಉಗುಳಿದ್ದರಿಂದ ಮೂಲೆ ತುಂಬಾ ಕೆಂಬಣ್ಣವಾಗಿದೆ.
•ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ: ಯಾವುದೇ ಸರ್ಕಾರಿ ಇಲಾಖೆ, ಕಚೇರಿಗೆ ನೀತಿ, ನಿಯಮ ಇರುತ್ತದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಆದರೆ ಎಲ್ಲೆಂದರಲ್ಲಿ ಕಸ, ಉಗುಳು, ಬೇಕಾಬಿಟ್ಟಿ ದಾಖಲೆಗಳನ್ನಿಟ್ಟು ಜನಸಾಮಾನ್ಯರನ್ನು ಸತಾಯಿಸುವಂತಹ ಡಸ್ಟಬಿನ್ ತರಹದ ಕಚೇರಿ ಯಾವುದಾದರೂ ಇದ್ದರೇ ಅದೇ ಅಫಜಲಪುರ ತಹಶೀಲ್ದಾರ್ ಕಚೇರಿ.
ಪಟ್ಟಣದ ವಿಜಯಪುರ ಹೆದ್ದಾರಿಗೆ ಹೊಂದಿಕೊಂಡಿರುವ ತಹಶೀಲ್ದಾರ್ ಕಚೇರಿ ಹೊರಗಿನಿಂದ ದೊಡ್ಡ ಬಂಗಲೆಯಂತೆ ಕಾಣುತ್ತದೆ. ಒಳಗೆ ಹೋದರೆ ಮಾತ್ರ ಅಕ್ಷರಶಃ ಕೊಳಕಿನ ದರ್ಶನ ಆಗುತ್ತದೆ. ಎಲ್ಲಿ ನೋಡಿದರೂ ಕೊಳಕು ಕಾಣುತ್ತದೆ.
ಎಲ್ಲೆಂದರಲ್ಲಿ ದಾಖಲೆಗಳು: ತಹಶೀಲ್ದಾರ್ ಕಚೇರಿಯಲ್ಲಿ ಎಲ್ಲೆಂದರಲ್ಲಿ ಉಗುಳಿದರೂ ಕೇಳವವರಿಲ್ಲ. ಅದರಲ್ಲೂ ಇಲಾಖೆ ಗೋಡೆಗಳ ಮೂಲೆಗಳು ಉಗುಳಲಿಕ್ಕೆ ಮಾಡಿದಂತೆ ಆಗಿವೆ. ಇಲ್ಲಿಗೆ ಬರುವ ಜನರಿಗೆ ಕುಳಿತುಕೊಳ್ಳಲು ಆಸನಗಳೇ ಇಲ್ಲ. ಹೀಗಾಗಿ ಎಲ್ಲೆಂದರಲ್ಲಿ ಕುಳಿತು ಕೊಳ್ಳುವಂತಾಗಿದೆ. ಕಚೇರಿ ದಾಖಲೆಗಳನ್ನು ಎಲ್ಲಿ ಬೇಕೋ ಅಲ್ಲಿ ಇಡಲಾಗಿದೆ. ಹೀಗಾಗಿ ದಾಖಲೆಗಳನ್ನು ದಿನವಿಡಿ ಹುಡುಕುವುದೇ ಕೆಲಸ ವಾಗಿದೆ. ಅಲ್ಲದೇ ತಾಲೂಕಿನ ಹಳ್ಳಿಗಳಿಂದ ಬರುವ ಜನರಿಗೆ ಕುಡಿಯುವ ನೀರಿನ ಸೌಕರ್ಯವಿಲ್ಲ. ಕುಳಿತುಕೊಳ್ಳಲು ಆಸನಗಳಿಲ್ಲ. ಸಿಕ್ಕಸಿಕ್ಕಲ್ಲಿ ಕುಳಿತು ಕೆಲಸ ಮಾಡಿಕೊಂಡು ಹೋಗುವ ಪರಿಸ್ಥಿತಿ ಇಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ