ಸಾವು ಜೀವ ಉಳಿಸುವ ಮಾರ್ಗ ಪ್ರೇರೇಪಿಸಿದ ಒಂದು ಸತ್ಯ ಕಥೆ

ಅಂಬ್ಯುಲೆನ್ಸ್‌ ಚಾಲಕರಿಗೆ ವಿಶೇಷ ತರಬೇತಿ ಯೋಜನೆ

Team Udayavani, Jul 10, 2019, 11:37 AM IST

uk-tdy-001

ಇಸಿಜಿ ಯಂತ್ರ

ಹೊನ್ನಾವರ: ಆಸ್ಪತ್ರೆಗೆ ತಲುಪಲು ವಿಳಂಬವಾಗಿ ಪುಟ್ಟ ಮಕ್ಕಳ ಎದುರೇ ತಾಯಿ ಹೃದಯ ನಿಂತು ಹೋದಾಗ ಮಕ್ಕಳ ದುಃಖಕ್ಕೆ ಪಾರ ಇರುವುದಿಲ್ಲ. ಇಂತಹ ಇನ್ನೊಂದು ಘಟನೆ ಹೃದಯಾಘಾತವಾದವರು ಮಾರ್ಗ ಮಧ್ಯೆ ಸಾಯುವುದನ್ನು ತಪ್ಪಿಸುವ ಮಾರ್ಗ ಹುಡುಕಲು ಹೃದಯವಂತ ವೈದ್ಯರಿಗೆ ಪ್ರೇರಣೆ ನೀಡುತ್ತದೆ. ಒಂದು ಸತ್ಯ ಕಥೆ ನಿಮ್ಮ ಮುಂದಿದೆ.

ಮೂಡಿಗೆರೆ ತಾಲೂಕಿನ ಬಾಳೆಹೊನ್ನೂರಿನ 45 ವಯಸ್ಸಿನ ಮಹಿಳೆಗೆ ತಡೆಯಲಾರದ ಎದೆನೋವು ಬಂದು ಅಲ್ಲಿಯ ಆಸ್ಪತ್ರೆಗೆ ಹೋದಾಗ ಚಿಕಿತ್ಸೆಯ ಸೌಲಭ್ಯವಿರಲಿಲ್ಲ. ಮಂಗಳೂರಿಗೆ ಹೋಗಲು ಸಲಹೆ ನೀಡಿದರು. ಅಂಬ್ಯುಲೆನ್ಸ್‌ ಹುಡುಕಾಡಿ ಮಂಗಳೂರು ಹೃದಯತಜ್ಞರ ಸಲಹೆ ಪಡೆದು ಹೊರಟರು. ಹಾದಿ ಮಧ್ಯೆ ಕುದುರೆಮುಖ ರಸ್ತೆಗೆ ಅಡ್ಡ ದೊಡ್ಡ ಮರ ಬಿದ್ದ ಕಾರಣ ಎರಡು ತಾಸಿನ ನಂತರ ಮರ ತೆಗೆದ ಮೇಲೆ ಮಂಗಳೂರು ತಲುಪಲು ವಿಳಂಬವಾಗಿ ಪ್ರಾಣಪಕ್ಷಿ ಮಕ್ಕಳೆದುರು ಹಾರಿ ಹೋಯಿತು. ಇದರಿಂದ ತೀವ್ರ ನೊಂದುಕೊಂಡ ಮಂಗಳೂರು ಕೆಎಂಸಿಯ ಹೃದಯ ವಿಭಾಗದ ಮುಖ್ಯಸ್ಥ ಡಾ| ಪದ್ಮನಾಭ ಕಾಮತ್‌ ಹಳ್ಳಿಯಿಂದ ದೊಡ್ಡ ಆಸ್ಪತ್ರೆಗೆ ಬರುವವರೆಗೆ ಕ್ಷಣಕ್ಷಣಕ್ಕೆ ಹೃದಯ ಬಡಿತದ ಮಾಹಿತಿ ಪಡೆದು, ಸೂಕ್ತ ಕ್ರಮಕೈಗೊಳ್ಳಲು ಆಗುವಂತೆ ಮಾಡಲು ಹೊಸ ಯೋಜನೆ ರೂಪಿಸಿದ್ದಾರೆ.

ನೋಯ್ಡಾದ ಸಂಕೇತ ಲೈಫ್‌ ಇಸಿಜಿ ಉಪಕರಣ ಮೊಬೈಲ್ನಂತಿದೆ. 5000 ರೂ. ಬೆಲೆಬಾಳುವ ಈ ಉಪಕರಣ ಬಳಸಲು ಅಂಬ್ಯುಲೆನ್ಸ್‌ ಚಾಲಕರಿಗೆ ತರಬೇತಿ ಕೊಡುವುದು. ಇದನ್ನು ಎದೆಯ ಕೆಲವು ಭಾಗಗಳಲ್ಲಿಟ್ಟರೆ ಎರಡೂವರೆ ನಿಮಿಷದಲ್ಲಿ ಇಸಿಜಿ ವರದಿ ತಜ್ಞ ವೈದ್ಯರನ್ನು ವಾಟ್ಸ್‌ಅಪ್‌ ಮುಖಾಂತರ ತಲುಪುತ್ತದೆ. ತಕ್ಷಣ ತುರ್ತು ಮಾಡಬೇಕಾದ ಚಿಕಿತ್ಸೆ ವಿವರಿಸಿ, ಮುಖ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಲು ಅನುಕೂಲವಾಗುತ್ತದೆ. ದಾನಿಗಳ ಸಹಕಾರದಿಂದ ಇಂತಹ 10 ಮಿಶನ್‌ಗಳನ್ನು ಖರೀದಿಸಿ, ಉತ್ತರಕನ್ನಡ ಸಹಿತ ವಿವಿಧ ಭಾಗದ ಅಂಬ್ಯುಲೆನ್ಸ್‌ ಚಾಲಕರಿಗೆ ತರಬೇತಿ ನೀಡಿ, ಮಾರ್ಗ ಮಧ್ಯೆ ಆಗುವ ಸಾವು ತಪ್ಪಿಸಲು ಯೋಚಿಸಲಾಗಿದೆ. ಸಣ್ಣ ರಾಜ್ಯ ತ್ರಿಪುರಾದ ಅಗರ್ತಲಾದಲ್ಲಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಂತಹ ಇಸಿಜಿ ಉಪಕರಣಗಳನ್ನು ಪೂರೈಸಲಾಗಿದೆ. ಇದು ಉಪಯುಕ್ತವಾಗಿ ಬಳಕೆಯಾಗುತ್ತಿದೆ. ದೊಡ್ಡ ಉಪಕರಣದಷ್ಟು ಸಾಮರ್ಥ್ಯ ಇಲ್ಲವಾದರೂ ರೋಗಿಯ ತುರ್ತು ಸಮಸ್ಯೆ ಅರಿಯಲು ಇದು ಸಹಕಾರಿ ಎಂದು ಡಾ| ಪದ್ಮನಾಭ ಕಾಮತ್‌ ಹೇಳಿದ್ದಾರೆ.

ಉತ್ತರಕನ್ನಡದ ಪ್ರತೀ ಆರೋಗ್ಯ ಕೇಂದ್ರಕ್ಕೂ ಇಂತಹ ಒಂದು ಉಪಕರಣ ಅತ್ಯಗತ್ಯವಾಗಿದೆ.

ಯಕ್ಷಗಾನ ಪ್ರಿಯರಾದ ಪದ್ಮನಾಭ ಕಾಮತ್‌ ಹಳ್ಳಿಗಳಲ್ಲಿ ನಡೆಯುವ ಯಕ್ಷಗಾನಕ್ಕೆ ಹೋದಾಗ ಹೃದಯಾಘಾತವಾಗಿರುವುದು ವಿಳಂಬವಾಗಿ ಗೊತ್ತಾಗಿ ಆಸ್ಪತ್ರೆ ತಲುಪುವ ಮೊದಲೇ ಸಾಯುವುದನ್ನು ಕಂಡು ಸಿಎಡಿ (ಮನೆ ಬಾಗಿಲಿಗೆ ಹೃದಯ ವೈದ್ಯರು) ಯೋಜನೆ ಮುಖಾಂತರ ದಕ್ಷಿಣ ಕನ್ನಡ, ಮಲೆನಾಡಿನ 175 ಗ್ರಾಮೀಣ ಪ್ರದೇಶಗಳಿಗೆ ಇಸಿಜಿ ಉಪಕರಣ ದಾನಿಗಳಿಂದ ಕೊಡಲ್ಪಟ್ಟಿದ್ದು, ಕಾಮತ್‌ ಮತ್ತು ಅವರ ಬಳಗದ ವೈದ್ಯರು ತುರ್ತು ಸಂದೇಶಕ್ಕೆ ತಕ್ಷಣ ಸ್ಪಂದಿಸಿದ್ದು ಯೋಜನೆ ಯಶಸ್ವಿಯಾಗಿದೆ. ಮೂಡಿಗೆರೆಯ ಘಟನೆ ಡಾ| ಕಾಮತರಿಗೆ ಇನ್ನೂ ಒಂದು ಯೋಜನೆ ರೂಪಿಸಿ, ಕಾರ್ಯರೂಪಕ್ಕೆ ತರಲು ಪ್ರೇರಣೆ ನೀಡಿದೆ.

 

•ಜೀಯು, ಹೊನ್ನಾವರ

ಟಾಪ್ ನ್ಯೂಸ್

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತರಿಗೆ ತಂತ್ರಜ್ಞಾನದ ಕೊಡುಗೆ ಕೊಟ್ಟರೆ ಪ್ರಗತಿ ಸಾಧ್ಯ: ಹಂದೆ

ರೈತರಿಗೆ ತಂತ್ರಜ್ಞಾನದ ಕೊಡುಗೆ ಕೊಟ್ಟರೆ ಪ್ರಗತಿ ಸಾಧ್ಯ: ಹಂದೆ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

1-sirsi

Modi ಬಂದಿದ್ದು ಕಾಂಗ್ರೆಸ್‌ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.