ಕಾರ್ಕಳ: ಧಾರಾಕಾರ ಮಳೆ
Team Udayavani, Jul 11, 2019, 5:41 AM IST
ಕಾರ್ಕಳ: ಬುಧವಾರವೂ ಕಾರ್ಕಳ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದ್ದು, ಯಾವುದೇ ಹಾನಿಯಾದ ಕುರಿತು ವರದಿಯಾಗಿಲ್ಲ. ಕಾರ್ಕಳ, ಕೆರ್ವಾಶೆ, ಬೇಳಿಂಜೆ ಪ್ರದೇಶಗಳಲ್ಲಿ ಅತಿಯಾಗಿ ಮಳೆಯಾಗಿತ್ತು. ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯಲ್ಲೇ ನೀರು ಹರಿಯುತ್ತಿತ್ತು.
ಕಾರ್ಕಳ ನಗರದ ಮುಖ್ಯರಸ್ತೆಗಳು ಹೊಂಡಗಳಿಂದ ಕೂಡಿದ್ದು, ನಿರಂತರ ಮಳೆ ಸುರಿಯುತ್ತಿದ್ದ ಕಾರಣ ರಸ್ತೆ ನೀರಿನಿಂದ ಆವೃತ್ತವಾಗಿತ್ತು. ವಾಹನ ಚಾಲಕರಿಗೆ ಅದರಲ್ಲೂ ವಿಶೇಷವಾಗಿ ದ್ವಿಚಕ್ರ ಸವಾರರು ಹೊಂಡಗಳನ್ನು ಗುರುತಿಸಲಾಗದೇ ಚಾಲನೆಗೆ ವೇಳೆ ಪರಿತಪಿಸುವಂತಾಯಿತು. ರಸ್ತೆಯಲ್ಲೇ ನೀರು ಹರಿಯುವ ಕಾರಣ ವಾಹನಗಳ ಓಡಾಟದ ವೇಳೆ ಕಾರಂಜಿಯಂತೆ ನೀರು ಚಿಮ್ಮುವ ದೃಶ್ಯ ಸಾಮಾನ್ಯವಾಗಿತ್ತು.
ಕಾರ್ಕಳದ ನದಿ, ಹೊಳೆಗಳು ಮೈದುಂಬಿ ಹರಿಯುತ್ತಿವೆ. ಮುನಿಯಾಲು, ಕೆರ್ವಾಶೆ, ಮಾಳ, ಶಿರ್ಲಾಲು, ದುರ್ಗಾ, ಬೇಳಿಂಜೆ ಹೊಳೆಗಳು ಧುಮ್ಮಕ್ಕಿ ಹರಿಯುತ್ತಿದ್ದು, ಸುವರ್ಣ ನದಿ, ಎಣ್ಣೆ ಹೊಳೆಯಲ್ಲೂ ನೀರು ಅತ್ಯಧಿಕ ಪ್ರಮಾಣದಲ್ಲಿ ಹರಿಯುತ್ತಿದೆ.
ಜಲಪಾತಗಳ ಸೊಬಗು
ನಿಟ್ಟೆ, ದುರ್ಗಾ, ಮಾಳ, ಜೊಂಬ್ಲು, ಕೂಡ್ಲು ಜಲಪಾತಗಳಲ್ಲಿ ನೀರಿನ ಹರಿವು ಜಾಸ್ತಿಯಾಗಿರುವುದರಿಂದಾಗಿ ಜಲಪಾತಗಳು ತನ್ನ ಸೊಬಗನ್ನು ಹೆಚ್ಚಿಸಿವೆ. ನೋಡುಗರ ಕಣ್ಮನ ಸೆಳೆಯುಂತಿದೆ ಇಲ್ಲಿನ ಜಲಪಾತಗಳು. ಬಹುತೇಕ ಜಲಪಾತಗಳು ಸುರಕ್ಷಿತವಾಗಿಲ್ಲದ ಕಾರಣ ಪ್ರವಾಸಿಗರು ಜಾಗರೂಕತೆಯಿಂದ ಇರಬೇಕೆಂದು ಸ್ಥಳೀಯರು ಎಚ್ಚರಿಸುತ್ತಿದ್ದಾರೆ. ಕೂಡ್ಲು ಜಲಪಾತಕ್ಕೆ ಪ್ರವಾಸಿಗರ ನಿಷೇಧವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್