ಸಿರಿಬಾಗಿಲು: ರೈಲು ಮಾರ್ಗದಿಂದ ಮಣ್ಣು , ಮರ ತೆರವು
ಬೆಂಗಳೂರು - ಮಂಗಳೂರು ರೈಲು ಸಂಚಾರ ಪುನರಾರಂಭ
Team Udayavani, Jul 11, 2019, 5:37 AM IST
ಸುಬ್ರಹ್ಮಣ್ಯ ಸಕಲೇಶಪುರ- ಸುಬ್ರಹ್ಮಣ್ಯ ರೈಲು ಹಳಿಯ ಮೇಲೆ ಮಂಗಳವಾರ ಜರಿದು ಬಿದ್ದಿದ್ದ ಮಣ್ಣಿನ ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ಬುಧವಾರ ರಾತ್ರಿಯ ಎರಡು ರೈಲುಗಳೂ ಸಂಚರಿಸಿವೆ.
ಘಾಟಿ ಪ್ರದೇಶದಲ್ಲಾಗುತ್ತಿರುವ ವರ್ಷ ಧಾರೆಗೆ ಸಕಲೇಶಪುರ-ಸುಬ್ರಹ್ಮಣ್ಯ ರೈಲು ಹಳಿಯ ಮೇಲೆ ಶಿರಿಬಾಗಿಲಿನಲ್ಲಿ ಜು. 4ರಂದು ಮಣ್ಣು ಜರಿದು ರೈಲು ಸಂಚಾರ ಎರಡು ತಾಸು ವಿಳಂಬವಾಗಿತ್ತು. ಮಂಗಳವಾರ ಮತ್ತೆ ಎರಡು ಕಡೆ ಮಣ್ಣು ಜರಿದ ಪರಿಣಾಮ ರೈಲುಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿತ್ತು.
ಎಡಕುಮೇರಿ-ಸಿರಿಬಾಗಿಲು ಮಧ್ಯದ 80 ಕಿ.ಮೀ. ಮೈಲು ವ್ಯಾಪ್ತಿಯಲ್ಲಿ ಕಲ್ಲು ಮತ್ತು ಮರ ಹಳಿಯ ಮೇಲೆ ಮಂಗಳವಾರ ಬಿದ್ದಿತ್ತು. ಇದೇ ಮಾರ್ಗದ 86 ಕಿ.ಮೀ. ಮೈಲು ಪಕ್ಕದಲ್ಲೂ ಹಳಿ ಮೇಲೆ ಮಣ್ಣು ಕುಸಿದಿತ್ತು. ಬೆಂಗಳೂರಿಗೆ ತೆರಳುವ ರಾತ್ರಿ ರೈಲನ್ನು ನೆಟ್ಟಣ ರೈಲು ನಿಲ್ದಾಣದಲ್ಲಿ ತಡೆದು ನಿಲ್ಲಿಸಿ ಅದರಲ್ಲಿದ್ದ ಪ್ರಯಾಣಿಕರನ್ನು 2 ಬಸ್ಗಳಲ್ಲಿ ಹಾಸನಕ್ಕೆ ಮತ್ತು 3 ಬಸ್ಗಳಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿತ್ತು.
ಬುಧವಾರ ಸಂಜೆ ತನಕ ಈ ಮಾರ್ಗದಲ್ಲಿ ಯಾವುದೇ ಗುಡ್ಡ ಕುಸಿತ ಘಟನೆಗಳು ನಡೆದಿಲ್ಲ. ಹಗಲಿನ ರೈಲುಗಳು ನಿರಾತಂಕವಾಗಿ ಸಂಚರಿಸಿವೆ. ರಾತ್ರಿ 9 ಗಂಟೆಗೆ ಸಂಚರಿಸುವ ಕಾರವಾರ-ಕಣ್ಣೂರು ಎಕ್ಸ್ಪ್ರೆಸ್ ಹಾಗೂ ರಾತ್ರಿ 11 ಗಂಟೆಗೆ ಸಂಚರಿಸುವ ಮಂಗಳೂರು ಸೆಂಟ್ರಲ್-ಯಶವಂತಪುರ ರೈಲು ಸಂಚಾರದಲ್ಲೂ ಯಾವುದೇ ವ್ಯತ್ಯಯ ಆಗಲಾರದು ಎನ್ನುವ ವಿಶ್ವಾಸ ಇಲಾಖೆ ಅಧಿಕಾರಿಗಳದ್ದು.
ಘಾಟಿ ಪ್ರದೇಶದಲ್ಲಿ ಭಾರೀ ಮಳೆ ಯಾಗುತ್ತಿದ್ದು ರೈಲು ಮಾರ್ಗದ ಮೇಲೆ ನಿಗಾ ಇಡಲಾಗಿದೆ.
ತಡರಾತ್ರಿ ಕಾರ್ಯಾಚರಣೆ
ಹಳಿ ಮೇಲೆ ಬಿದ್ದ ಮಣ್ಣು ತೆರವು ಕಾರ್ಯಾಚರಣೆ ಬುಧವಾರ ಸಂಜೆಯಿಂದ ಮುಂಜಾವ 3 ಗಂಟೆ ತನಕವೂ ನಡೆದಿತ್ತು. ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೈಲ್ವೇ ಕಾರ್ಮಿಕರನ್ನು ಕುಸಿತ ಸಂಭವಿಸಿದ ಸ್ಥಳಕ್ಕೆ ಕರೆದೊಯ್ದು ಮಣ್ಣು ತೆರವುಗೊಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ