ಬಿಳಸನೂರಲ್ಲಿ ಕುರಿಗಳು ನಾಪತ್ತೆ; ಚಿರತೆ ದಾಳಿ ಶಂಕೆ!

ಯಾವುದೇ ಕುರುಹುಗಳು ಪತ್ತೆಯಾಗಿಲ್ಲ; ಅರಣ್ಯಾಧಿಕಾರಿ ಸ್ಪಷ್ಟನೆ

Team Udayavani, Jul 14, 2019, 2:53 PM IST

14-JULY-35

ಹರಿಹರ: ಬಿಳಸನೂರು ಸಮೀಪದ ಜಮೀನಿನಲ್ಲಿ ಬಿಡಾರ ಹೂಡಿರುವ ಕುರಿ ದೊಡ್ಡಿ.

ಹರಿಹರ: ತಾಲೂಕಿನ ಬಿಳಸನೂರು ಗ್ರಾಮದ ಜಮೀನೊಂದರಲ್ಲಿ ಬಿಡಾರ ಹೂಡಿದ್ದ ಕುರಿ ದೊಡ್ಡಿಯಲ್ಲಿ ಹಲವು ಕುರಿಗಳು ಕಾಣೆಯಾಗಿದ್ದು, ಚಿರತೆಗಳು ದಾಳಿ ಮಾಡಿ ಕೊಂಡೊಯ್ದಿರಬಹುದೆಂದು ಶಂಕಿಸಲಾಗಿದೆ.

ಗ್ರಾಮದ ಬಂಡೆಪ್ಪನವರ ಜಮೀನಿನಲ್ಲಿ ಕಳೆದ ನಾಲ್ಕು ದಿನಗಳಿಂದ ರಾಣಿಬೆನ್ನೂರು ತಾಲೂಕು ಬೀರಪ್ಪ ಮಲ್ಲಪ್ಪ ಬಾತಿ ಎಂಬುವರು 250 ಕುರಿಗಳ ಮಂದೆಯ ಬಿಡಾರ ಹೂಡಿದ್ದರು. ಶನಿವಾರ ಬೆಳಗ್ಗೆ ಎದ್ದು ನೋಡಿದಾಗ ಕುರಿಗಳು ದೊಡ್ಡಿಯಿಂದ ಹೊರ ಬಂದಿದ್ದವು. ಅನುಮಾನ ಬಂದು ಕುರಿಗಳನ್ನು ಎಣಿಕೆ ಮಾಡಿದಾಗ 8 ಕುರಿ ಮತ್ತು ಒಂದು ಹೋತು (ಗಂಡು ಆಡು) ಇಲ್ಲದಿರುವುದು ತಿಳಿದಿದೆ.

ರಾತ್ರಿ ವೇಳೆ ಒಂದಲ್ಲ, ಎರಡು ಚಿರತೆಗಳು ದಾಳಿ ಮಾಡಿ ತನ್ನ ಕುರಿಗಳನ್ನು ಕೊಂಡೊಯ್ದಿವೆ ಎಂದು ಶಂಕಿಸಿರುವ ಕುರಿಗಾಹಿ ಬೀರಪ್ಪನ ಮನವಿಯಂತೆ ಸ್ಥಳಕ್ಕೆ ಅರಣ್ಯ ಇಲಾಖೆ, ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆದರೆ ಚಿರತೆ ದಾಳಿ ಮಾಡಿರುವ ಯಾವುದೇ ಕುರುಹು ಕಂಡು ಬಂದಿಲ್ಲ.

ಯಾವುದೇ ಕುರುಹುಗಳಿಲ್ಲ: ‘ಉದಯವಾಣಿ’ಯೊಂದಿಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಉಷಾರಾಣಿ, ಸ್ಥಳ ಪರಿಶೀಲಿಸಿದಾಗ ಚಿರತೆ ಹೆಜ್ಜೆ ಗುರುತುಗಳಾಗಲಿ, ರಕ್ತ ಸೇರಿದಂತೆ ಕುರಿಗಳ ಕಿಂಚಿತ್ತೂ ಅವಶೇಷಗಳಾಗಲಿ ಕಂಡುಬಂದಿಲ್ಲ ಎಂದರು.

ಯಾರೊಬ್ಬರೂ ಚಿರತೆಗಳನ್ನು ನೋಡಿಲ್ಲ, ಇದು ಸುಳ್ಳು ಸುದ್ದಿ ಇರಬಹುದು. ಆದರೂ ಸುತ್ತಮುತ್ತಲ ಗ್ರಾಮದ ಜನರು ಒಬ್ಬೊಬ್ಬರೆ ಓಡಾಡಬಾರದು, ಜಾಗೃತರಾಗಿರಬೇಕು ಎಂದು ಕೋರಿದ್ದಾರೆ.

ಕುರಿಗಾಹಿ ಬೀರಪ್ಪನೊಂದಿಗೆ ಮಂಜಪ್ಪ, ಕಾಂತೇಶಿ, ಪ್ರವೀಣ, ದಿಳ್ಯೆಪ್ಪಜ್ಜ ಎಂಬ ನಾಲ್ವರು ದೊಡ್ಡಿ ಸಮೀಪದಲ್ಲೆ ಮಲಗಿದ್ದು, ಚಿರತೆ ದಾಳಿಯಾದರೆ ಗೊತ್ತಾಗದಿರಲು ಸಾಧ್ಯವೇ?. ತಮ್ಮೊಂದಿಗಿರುವ ನಾಯಿಗಳಾದರೂ ಬೊಗಳಬೇಕಿತ್ತಲ್ಲವೆ. ಎರಡು ಚಿರತೆಗಳು ಬಂದು 8 ಕುರಿ, 1 ಹೋತವನ್ನು ಹೊತ್ತುಕೊಂಡು ಹೋಗುವುದು ಹೇಗೆ ಎಂಬ ಪ್ರಶ್ನೆಗಳು ಮೂಡಿವೆ.

ಜನರಲ್ಲಿ ಆತಂಕ: ಇತ್ತೀಚೆಗಷ್ಟೆ ಸಮೀಪದ ಹೊಳೆ ಸಿರಿಗೆರೆ ಗ್ರಾಮದಲ್ಲಿ ಚಿರತೆಯೊಂದು ಮೂವರಿಗೆ ಗಾಯಗೊಳಿಸಿ ನಾಪತ್ತೆಯಾಗಿದ್ದು, ಹಸಿರಾಗಿರುವಾಗಲೇ ನಡೆದಿರುವ ಈ ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಹೊಳೆಸಿರಿಗೆರೆಯಿಂದ ಧೂಳೆ ಹೊಳೆ ಕಡೆಗೆ ಸಾಗಿದ್ದ ಚಿರತೆ ನಂತರ ನದಿ ದಾಟಿರಬಹುದೆಂದು ಶಂಕಿಸಲಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಮರುದಿನವೇ ನದಿಯಾಚೆಗಿನ ಮುದೇನೂರು ಗ್ರಾಮದ ಕುರಿ ದೊಡ್ಡಿ ಮೇಲೆ ಚಿರತೆ ದಾಳಿಯಾಗಿತ್ತು. ಆದ್ದರಿಂದ ಹೊಳೆಸಿರಿಗೆರೆಯಲ್ಲಿ ಕಂಡ ಚಿರತೆ ಈಗಾಗಲೇ ತಾಲೂಕಿನಿಂದ ದೂರ ಹೋಗಿರುವ ಸಾಧ್ಯತೆಯಿದ್ದು, ಜನರು ಭಯಪಡಬೇಕಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.