ಗಾಳಿ-ಮಳೆ: ಮರ ಬಿದ್ದು ಮನೆಗೆ ಭಾಗಶಃ ಹಾನಿ
Team Udayavani, Jul 15, 2019, 5:28 AM IST
ಬೆಳ್ತಂಗಡಿ : ಕುವೆಟ್ಟು ಗ್ರಾ.ಪಂ.ನ ಪಣೆಜಾಲು ಸಮೀಪದ ರತ್ನಗಿರಿ ಎಂಬಲ್ಲಿ ಜೋಹಾರ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.
ಜು. 12ರಂದು ಸಂಜೆ ಸುರಿದ ಗಾಳಿ ಮಳೆಗೆ ಮನೆ ಹಿಂಬದಿ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಮನೆಯಲ್ಲಿ ಮಹಿಳೆ ಮತ್ತು ಮೂವರು ಮಕ್ಕಳು ವಾಸವಾಗಿದ್ದು,ಮಹಿಳೆ ಗ್ರಾ.ಪಂ. ಅಧ್ಯಕ್ಷರನ್ನು ಸಂಪರ್ಕಿಸಿ ತಹಶೀಲ್ದಾರ್ ಗಮನಕ್ಕೆ ತಂದಿದ್ದಾರೆ. ತಹಶೀಲ್ದಾರ್ ಗಣಪತಿ ಶಾಸ್ತ್ರಿ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಟರ್ಪಾಲು ವ್ಯವಸ್ಥೆ ಮಾಡಿ ಸ್ಥಳದಲ್ಲೇ 46,700 ರೂ. ಪರಿಹಾರ ನೀಡಿದ್ದಾರೆ.ಬಳಿಕ ಮರ ತೆರವುಗೊಳಿಸಲಾಗಿದೆ.
ಕಂದಾಯ ನಿರೀಕ್ಷಕ ರವಿ ಕುಮಾರ್,ತಾ.ಪಂ.ಸಿಬಂದಿ ಉಷಾ, ಅಮೀನ್ ಲಾಡಾRನ್, ಅಂಕಿತ್ ಜೈನ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದರು.