ಹೆಝಲ್ ಅಂತ್ಯಕ್ರಿಯೆಯೊಂದಿಗೆ ನ್ಯಾಯವೂ ಮಣ್ಣಾಯಿತೇ?

ಶಿರ್ವದ ನರ್ಸ್‌ ಸೌದಿ ಅರೇಬಿಯಾದಲ್ಲಿ ಮೃತಪಟ್ಟು 1 ವರ್ಷ

Team Udayavani, Jul 19, 2019, 5:00 AM IST

t-54

ಶಿರ್ವ: ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯದ ಅಲ್-ಮಿಕ್ವಾ ಜನರಲ್ ಆಸ್ಪತ್ರೆಯಲ್ಲಿ ನರ್ಸ್‌ ಆಗಿದ್ದ ಶಿರ್ವ ಸಮೀಪ ಕುತ್ಯಾರಿನ ಹೆಝಲ್ ಜೋತ್ಸಾ ್ನ ಕ್ವಾಡ್ರಸ್‌ ಸೌದಿ ಪ್ರಜೆಯ ಕಿರುಕುಳದಿಂದ ಸಾವನ್ನಪ್ಪಿ ಒಂದು ವರುಷ ಸಂದಿದೆ. ಅವರ ಅಂತ್ಯಸಂಸ್ಕಾರದೊಂದಿಗೆ ಅಪರಾಧಿಗೆ ಶಿಕ್ಷೆಯಾಗದೆ, ಪರಿಹಾರವೂ ದೊರೆಯದೆ ನ್ಯಾಯ ಮಣ್ಣಾಯಿತೇ ಎಂಬುದು ಆಕೆಯ ಪತಿ, ಹೆತ್ತವರ ಅಳಲು.

ಕುತ್ಯಾರು ಬಗ್ಗ ತೋಟ ರಸ್ತೆ ದಡ್ಡು ನಿವಾಸಿ ಅಶ್ವಿ‌ನ್‌ ಮಥಾಯಸ್‌ ಅವರ ಪತ್ನಿ, ಕುತ್ಯಾರು ಅಗರ್‌ದಂಡೆ ನಿವಾಸಿ ರಾಬರ್ಟ್‌ ಕ್ವಾಡ್ರಸ್‌ ಮತ್ತು ಹೆಲೆನ್‌ ಕ್ವಾಡ್ರಸ್‌ ದಂಪತಿಯ ಪುತ್ರಿ ಹೆಝಲ್ ಸೌದಿಯ ಆಸ್ಪತ್ರೆಯಲ್ಲಿ ನರ್ಸ್‌ ಆಗಿ 6 ವರ್ಷಗಳಿಂದ ದುಡಿಯುತ್ತಿದ್ದರು.

ಆರೋಪಿ ತಪ್ಪೊಪ್ಪಿಗೆ
ಸೌದಿ ಪ್ರಜೆಯ ಕಿರುಕುಳ ತಾಳಲಾರದೆ ವಸತಿಗೃಹದಲ್ಲಿ ನೇಣು ಬಿಗಿದು 2018ರ ಜು. 19ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಕೊಂಕಣಿ, ಇಂಗ್ಲಿಷ್‌ನಲ್ಲಿ ಡೆತ್‌ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಕಿರುಕುಳದ ಬಗ್ಗೆ ಪ್ರಸ್ತಾವಿಸಿದ್ದರು. ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನಾದರೂ ಕಾನೂನು ಪ್ರಕ್ರಿಯೆಗಳ ಬಗ್ಗೆ ಸೌದಿ ಆಡಳಿತ ಕುಟುಂಬಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಕೋರ್ಟ್‌ ಆತನಿಗೆ ಜಾಮೀನು ನೀಡಿದೆ.

ದಾಖಲೆಗಳೂ ಇಲ್ಲ; ಪರಿಹಾರವೂ ಇಲ್ಲ
ಸೌದಿ ಕಾನೂನಿನ ಪ್ರಕಾರ ಸಂತ್ರಸ್ತೆಗೆ ಸೂಕ್ತ ಪರಿಹಾರ ದೊರಕಬೇಕು. ಆದರೆ ತನಿಖೆಯ ಸ್ಥಿತಿಗತಿ ಬಗ್ಗೆ ರಾಯಭಾರ ಕಚೇರಿಯವರು ಕುಟುಂಬಕ್ಕೆ ತಿಳಿಸಿಲ್ಲ. ಕೆಲಸ ಮಾಡಿಕೊಂಡಿದ್ದ ಆಸ್ಪತ್ರೆಯ ಆಡಳಿತ ಮಂಡಳಿ ಕೂಡ ತನಿಖೆ ನಡೆಯುತ್ತಿದೆ ಎಂಬ ನೆಪವೊಡ್ಡಿ ಆಕೆಯ ಸೊತ್ತುಗಳನ್ನಾಗಲೀ ಪರಿಹಾರವನ್ನಾಗಲೀ ನೀಡಿಲ್ಲ. ಈ ಬಗ್ಗೆ ಹೆಚ್ಚಿನ ವ್ಯವಹಾರ ನಡೆಸಲು ಹೆಝಲ್ ಅವರ ಪವರ್‌ ಆಫ್ ಅಟಾರ್ನಿ ಆಗಿರುವ ಡೆನ್ನಿಸ್‌ ನೊರೊನ್ಹಾ ಅವರೂ ಅಸಹಾಯಕರಾಗಿದ್ದಾರೆ.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರ ಶಿಫಾರಸಿನ ಮೇರೆಗೆ ಅನಿವಾಸಿ ಭಾರತೀಯ ಸಮಿತಿ-ಕರ್ನಾಟಕದ ವತಿಯಿಂದ ಮೃತಳ ಕುಟುಂಬದ ಸದಸ್ಯರಿಗೆ 1 ಲ. ರೂ. ನೆರವು ಬಿಟ್ಟರೆ ಬೇರಾವುದೇ ಪರಿಹಾರ ಲಭಿಸಿಲ್ಲ.

ಸೌದಿ ಸರಕಾರದ ವಿಳಂಬ ಧೋರಣೆ
ಸೌದಿ ಸರಕಾರದ ವಿಳಂಬ ಧೋರಣೆಯಿಂದ ಹೆಝಲ್ ಮೃತದೇಹ 71 ದಿನಗಳ ಬಳಿಕ ತವರಿಗೆ ಬಂದಿತ್ತು. ಸೆ. 28ರಂದು ಶಿರ್ವ ಚರ್ಚ್‌ ನಲ್ಲಿ ಅಂತಿಮ ಸಂಸ್ಕಾರ ನೆರವೇರಿತ್ತು. ಅಲ್ಲಿವರೆಗೆ ಮನೆಯವರು ಸೂತಕದಲ್ಲೇ ಕಳೆವಂತಾಗಿತ್ತು.

ಸೌದಿ ಅರೇಬಿಯಾದಲ್ಲಿ ಈ ರೀತಿಯ ಪ್ರಕರಣಗಳು ನಡೆದಾಗ ಮೂರನೇ ವ್ಯಕ್ತಿಗೆ ಅಲ್ಲಿನ ಆಡಳಿತದೊಂದಿಗೆ ವ್ಯವಹರಿಸಲು ಸಾಧ್ಯವಿಲ್ಲ. ಹೆಝಲ್ ವಿವಾಹ ಪೂರ್ವದಲ್ಲಿ ಅಲ್ಲಿಗೆ ತೆರಳಿದ್ದರಿಂದ ಆಕೆಯ ತಂದೆ ಸೌದಿಯಲ್ಲಿರುವ ಡೆನ್ನಿಸ್‌ ನೊರೊನ್ಹಾಗೆ ಪವರ್‌ ಆಫ್ ಆಟಾರ್ನಿ ನೀಡಿದ್ದರು.

ಮೃತದೇಹವನ್ನು ತರುವ ಪ್ರಕ್ರಿಯೆಯಲ್ಲಿ ಡಾ| ರವೀಂದ್ರನಾಥ ಶ್ಯಾನುಭಾಗ್‌ ನೇತೃತ್ವದ ಮಾನವ ಹಕ್ಕು ಪ್ರತಿಷ್ಠಾನದ ಕಾರ್ಯಕರ್ತರು ಅವರಿಗೆ ನೆರವು ನೀಡಿದ್ದರು. ಸರಕಾರದ ನೆಲೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಕೂಡ ಶ್ರಮಿಸಿದ್ದರು.

ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂಬುದನ್ನು ನಂಬಲು ಅಸಾಧ್ಯ. ಪರಿಹಾರದ ಬಗ್ಗೆ ನಿರೀಕ್ಷೆ ಇಲ್ಲದಿದ್ದರೂ ಅಲ್ಲಿನ ಸರಕಾರ/ಆಸ್ಪತ್ರೆಯ ಆಡಳಿತ ಮಂಡಳಿ ಸೌಜನ್ಯಕ್ಕಾದರೂ ಪತ್ರ ವ್ಯವಹಾರ ನಡೆಸದಿರುವುದು ಬೇಸರ ತಂದಿದೆ.
– ಹೆಲೆನ್‌ ಕ್ವಾಡ್ರಸ್‌,ಮೃತಳ ತಾಯಿ

– ಸತೀಶ್ಚಂದ್ರ ಶೆಟ್ಟಿ , ಶಿರ್ವ

ಟಾಪ್ ನ್ಯೂಸ್

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.