ನೀರಿಗಾಗಿ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ
Team Udayavani, Jul 19, 2019, 2:44 PM IST
ತೇರದಾಳ: ಹನಗಂಡಿ ಗ್ರಾಮದ 4ನೇ ವಾರ್ಡ್ನಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಹನಗಂಡಿ ಗ್ರಾಮ ಪಂಚಾಯತ ಕಚೇರಿಗೆ ಬೀಗ ಜಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮದ 4ನೇ ವಾರ್ಡ್ನಲ್ಲಿ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕೇಬಲ್ ಕಟ್ ಮಾಡಿ ತೊಂದರೆ ಮಾಡುತ್ತಿದ್ದು, ಗ್ರಾಪಂ ಸಿಬ್ಬಂದಿ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಗಪ್ಪ ನಾರವಗೋಳ, ವಿಠuಲ ನಾರವಗೋಳ, ಭೀಮಪ್ಪ ನಾರವಗೋಳ, ಆನಂದ ಪುಟಾಣಿ, ಶಾಂತವ್ವ ಹನಮಂತ ನಾರವಗೋಳ, ದುಂಡಪ್ಪ ಗೊಂಗಡಿ, ಇಂದುಮತಿ ನಾರವಗೋಳ, ಶೈಲಾ ನಾರವಗೋಳ, ಸುನೀತಾ ನಾರಗೋಳ, ಲಕ್ಕವ್ವ ಮುಗಳಖೋಡ, ಲಕ್ಷ್ಮೀಬಾಯಿ ಗಿರಿಸಾಗರ, ಯಲ್ಲವ್ವ ಬೆಳಗಲಿ, ಸತ್ಯವ್ವ ಮಾಕಾಣಿ ಇದ್ದರು.
ಹನಗಂಡಿ ಗ್ರಾಮದ ನಾಲ್ಕನೇವಾರ್ಡ್ಗೆ ದಿನಂಪ್ರತಿ ನೀರಿನ ವ್ಯವಸ್ಥೆಯಿದೆ. ಬುಧವಾರ ರಾತ್ರಿ ಪೈಪ್ ಮತ್ತು ಕೇಬಲ್ಕಟ್ ಮಾಡಿದ್ದರಿಂದಾಗಿ ಗುರುವಾರ ನೀರಿನ ಸಮಸ್ಯೆ ಆಗಿದೆ. ಈ ತೊಂದರೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಪಿಡಿಒ ಪಿ.ಪಿ. ರಾವಳ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rabakavi-Banahatti: ತೀವ್ರ ಅನಾರೋಗ್ಯದಲ್ಲಿಯೂ ಮತದಾನ ಮಾಡಿದ ವ್ಯಕ್ತಿ
Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಬನಹಟ್ಟಿಗೆ ಬಂದ ಯುವತಿ
Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು
ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ
Mudhol; ಹೃದಯಾಘಾತದಿಂದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಸಾವು