ನಭಕ್ಕೆ ನೆಗೆದ ಬಾಹುಬಲಿ


Team Udayavani, Jul 23, 2019, 5:59 AM IST

chandra

ಶತಕೋಟಿ ಕನಸುಗಳನ್ನು ಚಂದ್ರನಲ್ಲಿಗೆ ತೆಗೆದುಕೊಂಡು ಹೋಗುವ ಇಸ್ರೋದ ಕನಸು ನನಸಾಗಿದೆ.ಸರಿಯಾಗಿ 11 ವರ್ಷಗಳ ಹಿಂದೆ ಚಂದ್ರಯಾನ-1ರಲ್ಲಿ ಕಂಡಿದ್ದ ಯಶಸ್ಸನ್ನು ಇಸ್ರೋ ಪುನರಾವರ್ತಿಸಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ಶಕ್ತಿ ಸಾಮರ್ಥ್ಯವನ್ನು ಅನಾವರಣ ಮಾಡಿರುವ ಇಸ್ರೋ, ಚಂದ್ರಯಾನ-2 ಹೊತ್ತೂಯ್ದ ಜಿಎಸ್‌ಎಲ್‌ ವಿ ಮಾರ್ಕ್‌ 3 ರಾಕೆಟ್‌ (ಬಾಹುಬಲಿ) ಅನ್ನು 16
ನಿಮಿಷ 14 ಸೆಕೆಂಡ್‌ಗಳಲ್ಲೇ ಕಕ್ಷೆಗೆ ಸೇರಿಸಿದೆ.

ದೃಢಪಡಿಸಿದ್ದು ಬೆಂಗಳೂರಿನ ಕೇಂದ್ರ
ಅತ್ತ ಚಂದ್ರಯಾನ-2 ಪರಿಕರ ಹೊತ್ತೂಯ್ದಿದ್ದ ಜಿಎಸ್‌ಎಲ್‌ವಿ ಮಾರ್ಕ್‌ 3 ರಾಕೆಟ್‌ ಕಕ್ಷೆಗೆ ತಲುಪು ತ್ತಿದ್ದ ವಿಷಯವನ್ನು ದೃಢಪಡಿಸಿದ್ದು ಬೆಂಗಳೂರಿನ ನಿಯಂತ್ರಣ ಕೇಂದ್ರ. ಈ ಬಗ್ಗೆ ಅನಂತರ ಹೇಳಿಕೆ ಹೊರಡಿಸಿದ ಇಸ್ರೋ, 16.14 ನಿಮಿಷಗಳಲ್ಲೇ ಚಂದ್ರಯಾನ-2 ಕಕ್ಷೆಗೆ ಮುಟ್ಟಿದೆ ಎಂದು ತಿಳಿಸಿತು.

ಸಾಫ್ಟ್ ಲ್ಯಾಂಡಿಂಗ್‌ ಗುರಿ
ಈಗಾಗಲೇ ಬೆಂಗಳೂರಿನಲ್ಲಿರುವ ನಿಯಂತ್ರಣ ಕೇಂದ್ರ ಚಂದ್ರಯಾನ- 2 ಅನ್ನು ತನ್ನ ಪರಿಧಿಗೆ ತೆಗೆದು ಕೊಂಡಿದೆ. ಸೆ.7ರಂದು ಚಂದ್ರನಲ್ಲಿಗೆ ರೋವರ್‌ ಅನ್ನು ಇಳಿಸುವ ಅಷ್ಟೂ ಜವಾಬ್ದಾರಿ ಇದರದ್ದೇ ಆಗಿದೆ. ಅಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಬೇಕಾಗಿದ್ದು, ಕಡೆಯ 15 ನಿಮಿಷ ಅತ್ಯಂತ ಮಹತ್ವದ್ದಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್‌ ಹೇಳಿದ್ದಾರೆ.

ಸೂರ್ಯನಲ್ಲಿಗೆ ಮಿಷನ್‌ ಆದಿತ್ಯ
ಚಂದ್ರನಾಯಿತು,
ಸೂರ್ಯನ ಮೇಲೇಕೆ ಅಧ್ಯಯನ ಮಾಡಬಾರದು ಎಂಬ ನಿಟ್ಟಿನಲ್ಲಿ ಇಸ್ರೋ, ಮುಂದಿನ ವರ್ಷದ ಮಧ್ಯಭಾಗದಲ್ಲಿ ಆದಿತ್ಯ-ಎಲ್‌1 ಅನ್ನು ಉಡಾವಣೆ ಮಾಡಲು ಎಲ್ಲ ಸಿದ್ಧತೆ ನಡೆಸಿದೆ. ಸೂರ್ಯನ ಹೊರಭಾಗದ ಪದರಗಳಾದ ಕೋರೋನಾವನ್ನು ಅಧ್ಯಯನ ಮಾಡುವುದು ಈ
ಯೋಜನೆಯ ಗುರಿ.

ಅಭಿನಂದಿಸಿದ ನಾಸಾ
ಇಸ್ರೋದ ಚಂದ್ರಯಾನ 2 ಅನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮುಕ್ತ ಕಂಠದಿಂದ ಶ್ಲಾ ಸಿದೆ. ಟ್ವೀಟ್‌ ಮೂಲಕ ಅಭಿನಂದಿಸಿದ ನಾಸಾ ನಿಮನ್ನು ಈ ಮಹಾಕಾರ್ಯಕ್ಕೆ ಬೆಂಬಲಿಸಲು ನಮಗೆ ಹೆಮ್ಮೆಯಾಗುತ್ತಿದೆ ಎಂದಿದೆ. ನಿಮ್ಮ ಕಾರ್ಯದ ಗುರಿಯಾದ ಚಂದ್ರನ ದಕ್ಷಿಣ ಮೇಲ್ಮೆ„ಯ ಅಧ್ಯಯನವನ್ನು ತಿಳಿದುಕೊಳ್ಳುವ ಕುತೂಹಲ ನಮ್ಮಲ್ಲಿ ಇಮ್ಮಡಿ ಯಾಗಿದೆ, ಮುಂಬರುವ ವರ್ಷ ಗಳಲ್ಲಿ ಅಮೆರಿಕ ಮಾನವಸಹಿತ ಚಂದ್ರಯಾನ ನಡೆಸಲಿದೆ ಎಂದು ಹೇಳಿದೆ.

ಮುಖ್ಯಾಂಶಗಳು
– ಉಡಾವಣೆಗೊಂಡ 16.14 ನಿಮಿಷಗಳ ಬಳಿಕ 6 ಸಾವಿರ ಕಿ.ಮೀ. ಕಕ್ಷೆಯಲ್ಲಿ ಪರಿಕರಗಳ ಸೇರ್ಪಡೆ

– ಇನ್ನು 23 ದಿನಗಳ ಕಾಲ ಈ ಪರಿಕರಗಳು ಈ ಕಕ್ಷೆಯಲ್ಲಿದ್ದು, ಅನಂತರ ಅದನ್ನು ಮೇಲಿನ ಕಕ್ಷೆಗೆ ಎತ್ತರಿಸಲಾಗುವುದು.

– 48 ದಿನಗಳ ಬಳಿಕ ಸೆ.7ರಂದು ಚಂದ್ರನ ಮೇಲೆ ರೋವರ್‌ ಇಳಿಯುವ ನಿರೀಕ್ಷೆ.

– ಕಚೇರಿಯಲ್ಲಿ ಕುಳಿತು ಚಂದ್ರಯಾನ ವೀಕ್ಷಿಸಿದ ಪ್ರಧಾನಿ ಮೋದಿ.

ಜು. 14ರ ಮಧ್ಯರಾತ್ರಿ ನಡೆಯಬೇಕಿದ್ದ ಉಡಾವಣೆ ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿತ್ತು. ಆಗ ಕಾಣಿಸಿಕೊಂಡಿದ್ದ ತಾಂತ್ರಿಕ ದೋಷವನ್ನು ಇಸ್ರೋ ವಿಜ್ಞಾನಿಗಳು ಹಗಲಿರುಳೂ ಶ್ರಮಿಸಿ ಸರಿ ಪಡಿಸಿದ್ದಾರೆ. ಹಿಂದಿನ ಹಿನ್ನಡೆಯನ್ನು ಸಮರ್ಥವಾಗಿ ಮೆಟ್ಟಿ ನಾವಿಂದು ಪುಟಿದೆದ್ದು ಬಂದಿದ್ದೇವೆ.

-ಕೆ. ಶಿವನ್‌, ಇಸ್ರೋ ಅಧ್ಯಕ್ಷ

ಯೋಜನೆಯಲ್ಲಿ ಕಾಣಿಸಿಕೊಂಡಿದ್ದ ಲೋಪಗಳನ್ನು ವಿಜ್ಞಾನಿಗಳು ಅವಿರತ ಶ್ರಮದಿಂದ ಪತ್ತೆ ಹಚ್ಚಿದ್ದಾರೆ. ದೈತ್ಯ ಪ್ರತಿಭೆಗಳು, ದೈತ್ಯ ಸಾಮರ್ಥ್ಯಗಳು ಹಾಗೂ ದೈತ್ಯ ಆತ್ಮವಿಶ್ವಾಸಗಳು ಒಂದೆಡೆ ಸೇರಿದರೆ ಎಂಥ ಮಹತ್ಕಾರ್ಯಗಳಾಗುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ.
-ನರೇಂದ್ರ ಮೋದಿ, ಪ್ರಧಾನಿ

ಟಾಪ್ ನ್ಯೂಸ್

1-ewewewqewe

Karkare ಯನ್ನು ಕೊಂದಿದ್ದು ಕಸಬ್‌ ಅಲ್ಲ,RSS ನಂಟಿದ್ದ ಪೊಲೀಸ್‌: ಕಾಂಗ್ರೆಸ್‌ ನಾಯಕ

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

1-KL-S

Amethi;ನಾನು ಗಾಂಧಿ ಕುಟುಂಬದ ಸೇವಕನಲ್ಲ: ಕಾಂಗ್ರೆಸ್‌ ಅಭ್ಯರ್ಥಿ

1-qweqeq

Bihar;10 ವರ್ಷ ಜೈಲು ಶಿಕ್ಷೆ: ಪರೋಲ್‌ ಮೇಲೆ ಬಂದು ಚುನಾವಣ ಪ್ರಚಾರ!

Revanna 2

SIT ಅಧಿಕಾರಿಗಳಿಗೆ ತಲೆನೋವಾದ ಎಚ್‌.ಡಿ.ರೇವಣ್ಣ

Belthangady ವೇಣೂರಿನ ಬಾಹುಬಲಿಗೆ ಮಸ್ತಕಾಭಿಷೇಕ; ವಿರಾಟ್‌ ವಿರಾಗಿಗೆ ಮಜ್ಜನ ಸಮಾಪನ

Belthangady ವೇಣೂರಿನ ಬಾಹುಬಲಿಗೆ ಮಸ್ತಕಾಭಿಷೇಕ; ವಿರಾಟ್‌ ವಿರಾಗಿಗೆ ಮಜ್ಜನ ಸಮಾಪನ

voter

Odisha; ಒಂದೇ ವಿಧಾನಸಭಾ ಕ್ಷೇತ್ರಕ್ಕೆ 3 ಪಕ್ಷಗಳಿಂದ ಒಂದೇ ಕುಟುಂಬದ ಅಭ್ಯರ್ಥಿಗಳು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

voter

Odisha; ಒಂದೇ ವಿಧಾನಸಭಾ ಕ್ಷೇತ್ರಕ್ಕೆ 3 ಪಕ್ಷಗಳಿಂದ ಒಂದೇ ಕುಟುಂಬದ ಅಭ್ಯರ್ಥಿಗಳು!

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

1-ewewewqewe

Karkare ಯನ್ನು ಕೊಂದಿದ್ದು ಕಸಬ್‌ ಅಲ್ಲ,RSS ನಂಟಿದ್ದ ಪೊಲೀಸ್‌: ಕಾಂಗ್ರೆಸ್‌ ನಾಯಕ

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

1-KL-S

Amethi;ನಾನು ಗಾಂಧಿ ಕುಟುಂಬದ ಸೇವಕನಲ್ಲ: ಕಾಂಗ್ರೆಸ್‌ ಅಭ್ಯರ್ಥಿ

1-qweqeq

Bihar;10 ವರ್ಷ ಜೈಲು ಶಿಕ್ಷೆ: ಪರೋಲ್‌ ಮೇಲೆ ಬಂದು ಚುನಾವಣ ಪ್ರಚಾರ!

Revanna 2

SIT ಅಧಿಕಾರಿಗಳಿಗೆ ತಲೆನೋವಾದ ಎಚ್‌.ಡಿ.ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.