ದೇವನಗರಿ ಸುಂದರ-ಶುಚಿತ್ವಕ್ಕೆ ಯೋಜನೆ

•ಉದ್ಯಮಿಗಳ ನೆರವಿನಿಂದ ವಾರದಲ್ಲಿ ಕಾರ್ಯಾರಂಭ: ಜಿಲ್ಲಾಧಿಕಾರಿ •ಉದ್ಯಮಗಳಿಂದ ಲಾಭದ ಶೇ. 2 ವೆಚ್ಚ

Team Udayavani, Jul 23, 2019, 9:30 AM IST

dg-tdy-1

ದಾವಣಗೆರೆ: ಡಿಸಿ ಜಿ.ಎನ್‌.ಶಿವಮೂರ್ತಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಲಿನ್ಯಮುಕ್ತ ದಾವಣಗೆರೆ ಕಾರ್ಯಯೋಜನೆ ಮಾಹಿತಿ ನೀಡಿದರು.

ದಾವಣಗೆರೆ: ಪರಿಸರ ಸ್ನೇಹಿ ಹಾಗೂ ಮಾಲಿನ್ಯಮುಕ್ತ ದಾವಣಗೆರೆ ನಗರವನ್ನಾಗಿಸಲು ಉದ್ಯಮಿಗಳ ಸಹಯೋಗದಲ್ಲಿ ಕಾರ್ಯಯೋಜನೆ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ.

ನಗರವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಾರ್ಯಕ್ರಮ ರೂಪಿಸಲಾಗಿದೆ. ಅದರ ಜತೆಗೆ ನಗರವನ್ನು ಮತ್ತಷ್ಟು ಸುಂದರೀಕರಣ ಹಾಗೂ ಶುಚಿತ್ವ ಕಾಪಾಡುವ ಹಿನ್ನೆಲೆಯಲ್ಲಿ ಆಯ್ದ ಉದ್ಯಮಿಗಳ ನೆರವಿನೊಂದಿಗೆ ಯೋಜನೆ ಕಾರ್ಯಗತಗೊಳಿಸಲಾಗುವುದು. ಈ ಸಂಬಂಧ ಅವರೊಂದಿಗೆ ಸೋಮವಾರ ಬೆಳಿಗ್ಗೆ ಸಭೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕುಂದುವಾಡ ಕೆರೆ, ಜಿಲ್ಲಾ ಆಸ್ಪತ್ರೆ ಉದ್ಯಾನವನ, ನಗರದ ಪ್ರಮುಖ ವೃತ್ತಗಳನ್ನು ಅಭಿವೃದ್ಧಿ ಪಡಿಸಿ, ಅವುಗಳ ನಿರ್ವಹಣೆ ಹೊಣೆಯನ್ನು ಉದ್ಯಮಿಗಳು ನಿಭಾಯಿಸಲಿದ್ದಾರೆ. ಉದ್ಯಮಿಗಳು ತಮ್ಮ ಲಾಭಾಂಶ ಶೇ.2 ರಷ್ಟು ಮೊತ್ತವನ್ನು ಈ ಕಾರ್ಯಕ್ಕೆ ವಿನಿಯೋಗಿಸಲಿದ್ದಾರೆ. ನಗರದ ಸೌಂದರಿಕರಣ ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಆಂದೋಲನದ ರೀತಿ ಕಾರ್ಯಗತವಾಗಲಿರುವ ಯೋಜನೆಯ ರೂಪುರೇಷೆ ವಾರದೊಳಗೆ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಕುಂದುವಾಡ ಕೆರೆ ಕಾರಂಜಿ ಉತ್ಕೃಷ್ಟವಾದದ್ದು. ನೀರಿನ ಸಮಸ್ಯೆಯಿಂದಾಗಿ ಅದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ ಕುಂದುವಾಡ ಕೆರೆ ಅಭಿವೃದ್ಧಿ ಜತೆಗೆ ಅದನ್ನು ಮತ್ತಷ್ಟು ಸುಂದರಗೊಳಿಸಲಾಗುವುದು. ಅಲ್ಲಿ ವಾಯುವಿಹಾರಕ್ಕಾಗಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಮಂದಿ ತೆರಳುತ್ತಾರೆ. ವಾಕರ್ ಪಾಥ್‌, ಕೆರೆ ಸಂರಕ್ಷಣೆ, ಆಕರ್ಷಕ ಹೂವಿನ ಗಿಡ ಬೆಳೆಸುವುದು ಸೇರಿದಂತೆ ಹಲವು ಅಭಿವೃದ್ಧಿ ಕ್ರಮ ಕೈಗೊಳ್ಳಲಾಗುವುದು. ಇದೇ ರೀತಿ ನಗರದ ಪ್ರಮುಖ ವೃತ್ತಗಳಲ್ಲಿ ಸ್ವಚ್ಛತೆ ಕಾಪಾಡುವ ಜತೆಗೆ ಅವುಗಳನ್ನು ಸುಂದರಗೊಳಿಸಲಾಗುವುದು. ಆ ವೃತ್ತಗಳಲ್ಲಿ ಕಸದ ಬುಟ್ಟಿ ಇರಿಸಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಖಾಲಿ ಜಾಗದಲ್ಲಿ ಅರಣ್ಯ ಇಲಾಖೆ ಸಹಕಾರದೊಂದಿಗೆ ಗಿಡ ಬೆಳೆಸಲಾಗುವುದು. ಮುಂದಿನ ದಿನಗಳಲ್ಲಿ ಮನೆ ಮನೆಗೂ ಎರಡು ಡಸ್ಟ್‌ ಬಿನ್‌ ವ್ಯವಸ್ಥೆ ಮಾಡಲಾಗುವುದು. ಇದು ಮಾಲಿನ್ಯ ನಿಯಂತ್ರಿಸಲು ಸಹಕಾರಿಯಾಗಲಿದೆ. ಮುಖ್ಯವಾಗಿ ರೋಗ ರುಜಿನ ತಡೆಗೂ ಅನುಕೂಲವಾಗಲಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿಯೂ ಹಲವಾರು ಕಾರ್ಯಕ್ರಮ ಅನುಷ್ಠಾಗೊಳ್ಳುವುದರಿಂದ ದಾವಣಗೆರೆ ನಗರ ಸುಂದರವಾಗಲಿದೆ ಎಂದು ತಿಳಿಸಿದರು. ನಗರದ ಶುಚಿತ್ವ ಹಾಗೂ ಸುಂದರೀಕರಣದ ಕಾರ್ಯದಲ್ಲಿ ಉದ್ಯಮಿಗಳ ಜತೆಗೆ ನಗರದ ಸಂಘ ಸಂಸ್ಥೆಗಳು, ಕಂಪನಿಗಳು ಮುಂದೆ ಬಂದು ಈ ಆಂದೋಲನಕ್ಕೆ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಕೆ.ವಿ. ಕೊಟ್ರೇಶ್‌ ಈ ಸಂದರ್ಭದಲ್ಲಿದ್ದರು.

ಯಾರ್ಯಾರಿಗೆ ಯಾವ್ಯಾವ ಅಭಿವೃದ್ಧಿಯ ಜವಾಬ್ದಾರಿ, ನಿರ್ವಹಣೆ ಉಸ್ತುವಾರಿ

ಆರಾಧ್ಯ ಸ್ಟೀಲ್ ಅ್ಯಂಡ್‌ ವೈರ್‌ ರೋಪ್‌ ಇಂಡಸ್ಟ್ರೀಸ್‌- ಕುಂದುವಾಡ ಕೆರೆ ಕಾರಂಜಿ.
ಕಾರ್ಗಿಲ್ ಇಂಡಿಯಾ ಲಿ.ಬೆಳ್ಳೂಡಿ-ಕುಂದುವಾಡ ಕೆರೆ ಫುಟ್ಪಾತ್‌, ಗಾರ್ಡನಿಂಗ್‌.
ಮಹಾರಾಜ ಸೋಪ್ಸ್‌ ಆ್ಯಂಡ್‌ ಡಿಟರ್‌ಜೆಂಟ್ಸ್‌-ಚಿಗಟೇರಿ ಜಿಲ್ಲಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಉದ್ಯಾನವನಅಭಿವೃದ್ಧಿ ಜತೆಗೆ ನೀರಿನ ವ್ಯವಸ್ಥೆ ಮತ್ತು ಗುಂಡಿ ಮಹಾದೇವಪ್ಪ ವೃತ್ತ ನವೀಕರಣ.
ರಿಲಯನ್ಸ್‌ ಮಾರ್ಟ್‌ ಪಿಬಿ ರಸ್ತೆ-ವಿದ್ಯಾನಗರ ವೃತ್ತ ಹಾಗೂ ವಿದ್ಯಾನಗರ 2ನೇ ಬಸ್‌ ನಿಲ್ದಾಣ ಉದ್ಯಾನವನ.
ಗ್ರಾಸಿಂ ಇಂಡಸ್ಟ್ರೀಸ್‌ ಕುಮಾರಪಟ್ಟಣಂ-ಡಿಸಿ ವೃತ್ತ (ಕ್ಲಾಕ್‌ ಟವರ್‌ 100 ಅಡಿ ರಸ್ತೆ) ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಡಿಸಿ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತ್ತದವರೆಗಿನ ರಸ್ತೆ ವಿಭಜಕ ಅಭಿವೃದ್ಧಿ.
ಹ್ಯಾಟ್ಸನ್‌ ಆಗ್ರೋ ಪ್ರಾಡಕ್ಟ್ , ಕುಂದೂರು- ಎಂಸಿಸಿ ಎ ಬ್ಲಾಕ್‌.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ-ದೇವರಾಜ ಅರಸು ವೃತ್ತ.
ಮಹಾನಗರ ಪಾಲಿಕೆ-ಜಯದೇವ ವೃತ್ತ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ-ಟ್ರೀ ಗಾರ್ಡ್‌ ಸರಬರಾಜು.
ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ:

ಹಂದಿ ಸ್ಥಳಾಂತರದ ಬಗ್ಗೆ ತಾಂತ್ರಿಕ ಅಡಚಣೆ ಇದೆ. ಅವುಗಳ ಮಾಲೀಕರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಆ ಕಾರ್ಯ ಸ್ಥಗಿತವಾಗಿದೆ. ನ್ಯಾಯಾಲಯದ ಆದೇಶದಿಂದಾಗಿ ದಾವಣಗೆರೆ ನಗರವಷ್ಟೇ ಅಲ್ಲ, ಇಡೀ ರಾಜ್ಯದಲ್ಲೇ ಈ ಆದೇಶ ಅನ್ವಯವಾಗಿದೆ. ಹಾಗಾಗಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಜಿಲ್ಲಾಧಿಕಾರಿ ಉತ್ತರಿಸಿದರು. ರಸ್ತೆ ಬದಿ ಲಾರಿ ಹಾಗೂ ಟ್ಯಾಕ್ಸಿಗಳ ನಿಲುಗಡೆಯಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದರಿಂದ ಅವುಗಳ ನಿಲ್ದಾಣಕ್ಕಾಗಿ ಪರ್ಯಾಯ ಜಾಗ ಹುಡುಕಲಾಗುತ್ತಿದೆ. ನಗರ ಬೆಳೆಯುತ್ತಿರುವುದರಿಂದ ಜಾಗ ದೊರೆಯುತ್ತಿಲ್ಲ. ಆದರೂ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಟಾಪ್ ನ್ಯೂಸ್

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.