ಕೋಟೆ: ಜಲಮರುಪೂರಣ ಅಳವಡಿಸಿದ ಗಣೇಶ್‌ ಸಾಲ್ಯಾನ್‌

ಮನೆ ಮನೆಗೆ ಮಳೆಕೊಯ್ಲು ಉದಯವಾಣಿ ಅಭಿಯಾನ

Team Udayavani, Aug 5, 2019, 5:54 AM IST

3107KPT1E-1

ಮನೆಯಲ್ಲಿ ಅಳವಡಿಸಲಾದ ಘಟಕದೊಂದಿಗೆ ಮನೆ ಮಂದಿ

ಕಟಪಾಡಿ: ಮಳೆ ಕೊಯ್ಲು ಜಲಸಾಕ್ಷರತೆಯ ಬಗ್ಗೆ ಉದಯವಾಣಿಯು ಹೆಚ್ಚಿನ ಮಾಹಿತಿ ನೀಡಿದ್ದರಿಂದ ನಾನೂ ಕೂಡಾ ಜಲಸಾಕ್ಷರನಾಗಲು ಬಯಸಿ ಸ್ವತಃ ನನ್ನ ಮನೆಯಲ್ಲಿ ಮಳೆಕೊಯ್ಲು ಅಳವಡಿಸುವಂತಾಗಿದೆ ಎಂದು ಕೋಟೆ ಗ್ರಾಮದ ಸೆಲೂನ್‌ ಮಾಲಕ ಗಣೇಶ್‌ ಸಾಲ್ಯಾನ್‌ ಕುಚ್ಚಿಕಾಡು ಕಟಪಾಡಿ ಮಳೆಕೊಯ್ಲು ಘಟಕ ಅಳವಡಿಸಿದ ಬಗ್ಗೆ ತಿಳಿಸಿದರು.

ಉದಯವಾಣಿ ನೀರಿನ ಸುರಕ್ಷತೆಯ ಬಗ್ಗೆ ನಿರಂತರ ಪಾಠವನ್ನು ನೀಡಿದ್ದರಿಂದ ಪ್ರೇರೇಪಿತನಾಗಿ ಈಗ ಥಾರಸಿಯ ಮೇಲೆ ಬೀಳುವ ಮಳೆಯ ನೀರು ಹರಿದು ಪೋಲಾಗದಂತೆ ಎಲ್ಲ ನೀರು ಹರಿದು ಶುದ್ಧಗೊಂಡು ಬಾವಿಗೆ ಜಲ ಮರುಪೂರಣವನ್ನು ಮಾಡಲಾಗುತ್ತಿದೆ.

ಪ್ಲಂಬಿಂಗ್‌ ಬಗ್ಗೆ ಅನುಭವ ಇತ್ತು. ಉದಯ ವಾಣಿಯ ಸವಿವರವಾದ ಮಾಹಿತಿ ಆಧಾರದ ಮೇಲೆ ಸ್ವತಃ ಪೈಪುಗಳನ್ನು ಸುಲಭವಾಗಿ ಅಳವಡಿಸಿದ್ದೇನೆ. ಪ್ಲಾಸ್ಟಿಕ್‌ ಡ್ರಮ್‌ ಮಾದರಿಯೂ ಅಗ್ಗವಾಗಿದೆ. ಸುಮಾರು 1,300 ರೂ. ಗಳ ವೆಚ್ಚದಲ್ಲಿ ಘಟಕ ಸಿದ್ಧಪಡಿಸಿರುತ್ತೇನೆ.ಇದನ್ನು ಕಂಡ ಸಹೋದರಿ ಗೀತಾ ಡಿ.ಸುವರ್ಣ ಕುಚ್ಚಿಕಾಡು ಕಟಪಾಡಿ ಕೂಡಾ ಈಗ ಜಲದ ವಿಷಯದಲ್ಲಿ ಸಾಕ್ಷರಳಾಗಿದ್ದಾಳೆ. ಕಡಿಮೆ ವೆಚ್ಚದಲ್ಲಿ ಅಲ್ಲಿಯೂ ಅಳವಡಿಸಿದೆನು ಎಂದು ಮಳೆನೀರನ್ನು ಉಳಿಸಿದ ಹೆಮ್ಮೆ ವ್ಯಕ್ತಪಡಿಸುತ್ತಾರೆ ಗಣೇಶ್‌ ಸಾಲ್ಯಾನ್‌ ಅವರು.

ತನ್ನ ಸೆಲೂನ್‌ಗೆ ಬರುವ ಎಲ್ಲ ಗ್ರಾಹಕರಿಗೂ ಈ ಜಲಸಾಕ್ಷರತೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನೂ ನೀಡುತ್ತಾ, ಅವರೂ ಅಳವಡಿಸುವಂತೆ ಪ್ರೇರೇಪಿಸುತ್ತಿದ್ದಾರೆ. ಪತ್ನಿ ಸಂಧ್ಯಾಗಣೇಶ್‌ ಸಾಲ್ಯಾನ್‌ ಮಣಿಪಾಲ ಕೆಎಂಸಿಯಲ್ಲಿ ಟೆಕ್ನೀಷಿಯನ್‌ ಆಗಿದ್ದು ಆಕೆ ಈ ಘಟಕ ನಿರ್ಮಿಸಲು ಹೆಚ್ಚು ಪ್ರೋತ್ಸಾಹ ನೀಡಿದ್ದಾಳೆ. ಯಾರಾದರೂ ಈ ಘಟಕವನ್ನು ಅಳವಡಿಸಲು ಬಯಸಿದಲ್ಲಿ ಲಭ್ಯ ಸಮಯಾವಕಾಶದಲ್ಲಿ ತೆರಳಿ ಸಿದ್ಧಪಡಿಸಿ ಅಳವಡಿಸುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ.

ಜಾಗೃತಿ ಮೂಡಿಸುತ್ತೇನೆ
ಪ್ರಕೃತಿಯಿಂದ ಹೇರಳವಾಗಿ ಲಭಿಸುವ ನೀರನ್ನು ನಾವೆಲ್ಲರೂ ಪೋಷಿಸಬೇಕು. ರಕ್ತದ ಹನಿಯಂತೆ ನೀರಿನ ಹನಿ ಹನಿಯೂ ಬೆಲೆಬಾಳುತ್ತದೆ. ಈ ಬಗ್ಗೆ ಜನಮನದ ಜೀವ ನಾಡಿಯಾದ ಉದಯವಾಣಿ ದಿನಪತ್ರಿಕೆ ಎಚ್ಚರಿಸುವ ರೀತಿಯಿಂದ (ಜನಜಾಗೃತಿ) ಉತ್ತೇಜಿತನಾಗಿದ್ದೇನೆ. ಬಹಳಷ್ಟು ಕಡಿಮೆ ವೆಚ್ಚದ ಘಟಕ ಅಳವಡಿಸಲು ನನ್ನ ಸಂಬಂಧಿಕರಲ್ಲಿಯೂ ಕೋರಿಕೊಂಡಿದ್ದೇನೆ. ಸ್ವತಃ ಉದಾಹರಣೆಯಾಗಿ ಗ್ರಾಹಕರಲ್ಲೂ ಜಾಗೃತಿ ಮೂಡಿಸುತ್ತೇನೆ .
-ಗಣೇಶ್‌ ಸಾಲ್ಯಾನ್‌ ಕುಚ್ಚಿಕಾಡು,
ಸೆಲೂನು ಮಾಲಕ, ಕೋಟೆ, ಕಟಪಾಡಿ

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆ ಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್‌ನಲ್ಲಿ ಕಳುಹಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529

ಟಾಪ್ ನ್ಯೂಸ್

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.