ಕಲಂ 370 ರದ್ದು- ನಮ್ಮ ಓದುಗರು ಏನು ಹೇಳುತ್ತಾರೆ

ಉದಯವಾಣಿ ಫೇಸ್‌ ಬುಕ್‌ ಪೋಸ್ಟ್‌ ಗೆ ಹರಿದುಬಂತು ಜನರ ಅಭಿಪ್ರಾಯ

Team Udayavani, Aug 5, 2019, 5:21 PM IST

fb commenyts

ಮಣಿಪಾಲ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿ, 35ಎ ವಿಧಿಯನ್ನು ರದ್ದು ಮಾಡಿದ ಕೇಂದ್ರ ಸರಕಾರದ ಐತಿಹಾಸಿಕ ನಿರ್ಣಯಕ್ಕೆ ಅಭೂತಪೂರ್ವ ಜನ ಬೆಂಬಲ ದೊರೆತಿದೆ. “ಉದಯವಾಣಿ”  ಫೇಸ್‌ ಬುಕ್‌ ಖಾತೆಯಲ್ಲಿ ಈ ಬಗ್ಗೆ ಜನರಿಂದ ಅಭಿಪ್ರಾಯ ಕೇಳಿ ಪೋಸ್ಟ್‌ ಹಾಕಿದ್ದು , ನಮ್ಮ ಓದುಗರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆಯ್ದ ಕೆಲವು ಅಭಿಪ್ರಾಯಗಳು ಇಲ್ಲಿವೆ.

ನಾನು 11 ವರ್ಷ ಕಾಶ್ಮೀರದಲ್ಲಿ ಕರ್ತವ್ಯ ಮಾಡಿದ್ದೆ. ಅದರ ಅನುಭವದಲ್ಲಿ ಈ ನಿರ್ಣಯ ಸ್ವಾಗತಾರ್ಹ. ಇದರಿಂದಾಗಿ ಕಾಶ್ಮೀರಿ ಯುವಕರಿಗೆ ಉದ್ಯೋಗ ಸೃಷ್ಠಿಯಾಗಬಹುದು. ಶಾಂತಿಯುತ ವಾತಾವರಣಕ್ಕಾಗಿ ಕಾಶ್ಮೀರದ ಮತ್ತು ದೇಶದ ಜನತೆ ಸರಕಾರದ ಜೊತೆ ನಿಲ್ಲಬೇಕಿದೆ.

*ರಾಜೇಶ್‌ ಎಸ್‌ ಗೌಡ ತೀರ್ಥಹಳ್ಳಿ 

ನಾನು ಅತ್ಯಂತ ದ್ವೇಷಿಸುವ ಬಿಜೆಪಿ ಪಕ್ಷವನ್ನು ಈ ವಿಚಾರದಲ್ಲಿ ಇಷ್ಟಪಡುತ್ತೇನೆ. ಭಾರತದ ಅಖಂಡತೆಗೆ ಯಾರೇ ಶ್ರಮಿಸಿದರೂ ಈ ದೇಶ ಅವರಿಗೆ ಋಣಿಯಾಗಿರುತ್ತದೆ.

*ಕೊಟ್ರೇಶ್‌ ಕೃಷ್ಣಪ್ರಿಯ 

ಜಮ್ಮು ಮತ್ತು ಕಾಶ್ಮೀರದ ಹೆಸರನ್ನು ಬದಲಾಯಿಸಿ ಪುರಾತನ ಹೆಸರನ್ನು ಇಡಬೇಕು.  ಪಂಡಿತರನ್ನು ಕಾಶ್ಮೀರಕ್ಕೆ ಕರೆತಂದು ಅವರ ಆಸ್ತಿಯನ್ನು ವಾಪಸ್ಸು ಕೊಡಿಸಿ. ನೆಮ್ಮದಿಯ ಜೀವನಕ್ಕೆ ಅವಕಾಶ ಕಲ್ಪಿಸಿಕೊಡಿ.

*ವಿಶ್ವೇಶ್ವರಯ್ಯ ಹೊಯ್ಸಳ

ಭಾರತದಲ್ಲೀಗ ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದೇ ಕಾನೂನು. ಇದುವರೆಗೆ ಜಮ್ಮು ಕಾಶ್ಮೀರದಲ್ಲಿ ಮಾಹಿತಿ ಹಕ್ಕು ಕಾಯಿದೆಯೂ ಅನ್ವಯವಾಗುತ್ತಿರಲಿಲ್ಲ. ಅಂದರೆ ಅಲ್ಲಿನ ವ್ಯವಸ್ಥೆ ಪ್ರಶ್ನಾತೀತವಾಗಿತ್ತು. ಈಗ ವಿಶೇಷ ಸ್ಥಾನ ತೆಗೆದುಹಾಕಿರುವ ಕಾರಣ ಭಾರತದ ಎಲ್ಲ ರಾಜ್ಯಗಳು ಸರ್ವ ಸಮಾನರು ಎಂಬಂತಾಗಿದೆ.

*ಲಕ್ಷ್ಮೀಕಾಂತ್ರಾಜ್ ಎಂ ಜಿ 

ಕೇಂದ್ರ ಸರಕಾರದ ನಿರ್ಣಯಕ್ಕೆ ವಿರೋಧ , ನೋಟು ಅಪನಗದೀಕರಣ ಮಾಡಿದ ಸಮಯದಲ್ಲಿ ಕೂಡಾ ಮೊದಲಿಗೆ ಉತ್ತಮ ಎಂದೇ ಹೇಳಲಾಗಿತ್ತು. ಆದರೆ ಕೊನೆಗಾಗಿದ್ದು ಅದರ ವೈಫಲ್ಯ. ಈ ವಿಚಾರದಲ್ಲೂ ಅದೇ ಮರುಕಳಿಸುತ್ತದೆ.

*ಸುನೀಲ್ ಶೆಟ್ಟಿ

ಜಮ್ಮು-ಕಾಶ್ಮೀರದ ಸ್ಥಳೀಯ ಜನರ ಸಹಕಾರದೊಂದಿಗೆ ಆರ್ಟಿಕಲ್ 370, 35 A ರದ್ದಾದರೆ ಕಾಶ್ಮೀರ ಸಮಸ್ಯೆ ಹಿಂಸಾತ್ಮಕ ರೂಪ ಪಡೆಯದೆ ಖಂಡಿತ ಪರಿಹಾರವಾಗುತ್ತದೆ .

*ರಾಜಶೇಖರ್‌ ಮೈಲಸಂದ್ರ 

ಪಕ್ಷಾತೀತವಾಗಿ ನಾವು ಇದನ್ನು ಗೌರವಿಸುತ್ತೇವೆ. ಒಳ್ಳೆಯ ಹೆಜ್ಜೆ, ಕಾನೂನು ಅತಿರೇಕಕ್ಕೆ ಹೋಗಿ ಮಾನವ ಹಕ್ಕು ಉಲ್ಲಂಘನೆಯಾಗದಿರಲಿ. ನಮ್ಮದು ಅಖಂಡ ಭಾರತ. ಆದರೆ ನಮ್ಮನ್ನಾಳಿದ ಹಳೆಯ ನಾಯಕರನ್ನು ದೂರುವುದು ಬೇಡ. ಎಲ್ಲ ನಾಯಕರ ಕೊಡುಗೆ ಈ ದೇಶಕ್ಕೆ ಇದೆ. ಆದರೆ ನಿರ್ಧಾರದ ಸಮಯ ಸನ್ನಿವೇಶ ಬೇರೆ ಇತ್ತು ಅಷ್ಟೆ .

*ರೇಣುಕಾ ಪ್ರಸಾದ್‌ 

ಭಯೋತ್ಪಾದನೆ ಕೃತ್ಯಗಳನ್ನು ಮಾಡುವವರದ್ದು ಧಾರ್ಮಿಕ ಮನೋಭಾವ ಅಲ್ಲ.ಅದೊಂದು ವಿಕೃತ ಮನೋಭಾವ. 370ನೇ ವಿಧಿಯನ್ನು ರದ್ದುಪಡಿಸಿದ ಕಾರಣ ಜಮ್ಮು-ಕಾಶ್ಮೀರದಲ್ಲಿ ಈ  ಘಟನೆಗಳು ಕೊನೆಗೊಳ್ಳುವುದಾದರೆ ಈ ವಿಧಿ ಸ್ವಾಗತಾರ್ಹ. ಆದರೆ ಇದರಲ್ಲಿ ರಾಜಕೀಯ ದ್ವೇಷ ಖಂಡಿತ ಇರಬಾರದು. ದೇಶದ ಜನರ ಬದುಕಿನೊಂದಿಗೆ ಚೆಲ್ಲಾಟ ಸಲ್ಲದು.

*ಅಬ್ದುಲ್‌ ಅಜೀಜ್‌ ಪುಣಚ 

ನಾವು ನರೇಂದ್ರ ಮೋದಿಯವರಿಗೆ ಮತ ಹಾಕಿದ್ದಕ್ಕೆ ಇಂದು ಸಾರ್ಥಕವಾಯಿತು. ಭಯೋತ್ಪಾದನೆ ಮತ್ತು 370 ವಿಧಿ ಬೇರೆ ಬೇರೆ ವಿಷಯಗಳು. ಹಿಂದೆ ನೆಹರು 370ನೇ ವಿಧಿಯಲ್ಲಿ ಮಾಡಿದ್ದ ತಪ್ಪನ್ನು ಈಗ ಕೇಂದ್ರ ಸರಕಾರ ಸರಿಪಡಿಸಿದೆಯಷ್ಟೇ.

*ಜಗದೀಶ್‌ ನಾಯಕ್‌ 

ಕಾಶ್ಮೀರಕ್ಕಾಗಿ ಬಲಿದಾನ ಮಾಡಿದ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಆತ್ಮಕ್ಕೆ ಶಾಂತಿ ದೊರೆತಂತಾಯಿತು. 370ವಿಧಿಯನ್ನು ವಿರೋಧಿಸಿದ ಅಂಬೇಡ್ಕರ್ ಆಸೆಯೂ ಈಡೇರಿಸಿದಂತಾಯಿತು. ಭಾರತದ ಸ್ವಿಟ್ಜರ್ಲೆಂಡ್‌‌ ಕಾಶ್ಮೀರ ಅಭಿವೃದ್ಧಿಗೆ ಇದು ಪೂರಕ. ಸ್ವಾಮಿ ಅರವಿಂದರ ಅಖಂಡ ಭಾರತದ ಸಂಕಲ್ಪ ಆದಷ್ಟು ಶೀಘ್ರ ಈಡೇರಲಿ.

*ಉದಯರಾಜ್‌ ಮೂಲ್ಕಿ   

ಎಷ್ಟೇ ರಾಜಕೀಯ ವಿರೋಧವಿದ್ದರೂ ಇಂಥಹ ಐತಿಹಾಸಿಕ ಕ್ಷಣಗಳಿಗೆ ಸರಕಾರದ ಜೊತೆ ನಿಲ್ಲುವುದೇ ನಿಜವಾದ ಪ್ರಜಾಪ್ರಭುತ್ವ. ಪೂರ್ಣ ಬಹುಮತದ ಸರಕಾರವನ್ನು ನೀಡಿದ ಪರಿಣಾಮ ಇಂಥಹ ದಿಟ್ಟ ನಿರ್ಧಾರಕ್ಕೆ ಸಾಧ್ಯವಾಯಿತು.

*ಸಂದೀಪ್‌ ವನಿಯಾನ್‌

ದೇಶ ಸುಭದ್ರವಾಗಿರಬೇಕು ಅಂದರೆ ದೃಢ ನಿರ್ಧಾರ ತೆಗದುಕೊಳ್ಳಬೇಕಾಗುತ್ತದೆ. ದೇಶದಲ್ಲಿ ಬದಲಾವಣೆ ಸಮಯ ಬರುತ್ತಿದೆ .

*ವಿಶ್ವನಾಥ್‌ ವಿಶ್ವ

ಕೇವಲ 3 ಜಿಲ್ಲೆಯಲ್ಲಿ ನಡೆಯುತ್ತಿದ್ದ ಪಾಕ್ ಪ್ರೇರಿತ ಕೃತ್ಯಗಳಿಗೆ ಇಡೀ ಜಮ್ಮು ಕಾಶ್ಮೀರದ ಜನರನ್ನು ಭಾರತದ ಅಖಂಡತೆಯ ವಿರೋಧಿಯಾಗಿ ಕಾಣಲಾಗುತ್ತಿತ್ತು. ಈಗ ಇದರಿಂದ ಮುಕ್ತಿ ಪಡೆಯಬಹುದು.

*ದಿನೇಶ್‌ ಮುರುವ 

ಯಾವುದೇ ಧರ್ಮ, ಪಕ್ಷಕ್ಕೇ ಸೇರಿರಲಿ ದೇಶದ ವಿಷಯದಲ್ಲಿ ರಾಜಕೀಯ ಮಾಡಬೇಡಿ. ಎಲ್ಲರೂ ಒಕ್ಕೊರಲಿನಿಂದ ಬೆಂಬಲಿಸಿ. ಬೇಕಾದರೆ ಸೂಕ್ತ ಸಲಹೆಗಳನ್ನು ಕೊಡಿ .

*ಲಕ್ಷ್ಮೀರಂಗನಾಥ ತನುಲಕ್ಷ್ಮೀರಂಗನಾಥ 

ಟಾಪ್ ನ್ಯೂಸ್

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.