ಆರ್ಚರಿ ಅಸೋಸಿಯೇಶನ್ ಅಮಾನತು
ಮಾರ್ಗದರ್ಶಿ ಸೂತ್ರ ಪಾಲಿಸದ ಹಿನ್ನೆಲೆಯಲ್ಲಿ ಈ ಕ್ರಮ
Team Udayavani, Aug 9, 2019, 9:28 AM IST
ಕೋಲ್ಕತಾ: ಎರಡು ಸಮಾನಾಂತರ ಮಂಡಳಿ ಗಳನ್ನು ಚುನಾಯಿಸುವ ಮೂಲಕ ಮಾರ್ಗದರ್ಶಿ ಸೂತ್ರವನ್ನು ಪಾಲಿಸದ ಭಾರತೀಯ ಆರ್ಚರಿ ಅಸೋಸಿಯೇಶನನ್ನು (ಎಎಐ) ಗುರುವಾರ “ವಿಶ್ವ ಆರ್ಚರಿ’ (ಡಬ್ಲ್ಯುಎ) ಅಮಾನತುಗೊಳಿಸಿದೆ; ಈ ತಿಂಗಳ ಅಂತ್ಯದೊಳಗೆ ಸಮಸ್ಯೆ ಪರಿಹರಿಸುವಂತೆ ಸೂಚಿಸಿದೆ.
ಅಮಾನತು ನಿರ್ಧಾರ ಸೋಮವಾರದಿಂದ ಜಾರಿಗೆ ಬರಲಿದೆ. ಆದರೆ ಆ. 19ರಿಂದ 25ರ ವರೆಗೆ ಮ್ಯಾಡ್ರಿಡ್ನಲ್ಲಿ ನಡೆಯಲಿರುವ ವಿಶ್ವ ಆರ್ಚರಿ ಯೂತ್ ಚಾಂಪಿಯನ್ಶಿಪ್ನಲ್ಲಿ ಭಾರತೀಯ ಬಿಲ್ಗಾರರು ಕೊನೆಯ ಸಲ ಭಾರತೀಯ ಧ್ವಜದಡಿ ಭಾಗವಹಿಸಬಹುದಾಗಿದೆ.
ಜೂನ್ನಲ್ಲೇ ನಿರ್ಧಾರ
ಎಎಐಯನ್ನು ಅಮಾನತು ಗೊಳಿಸುವ ನಿರ್ಧಾರವನ್ನು ವಿಶ್ವ ಆರ್ಚರಿ ಜೂನ್ನಲ್ಲೇ ತೆಗೆದುಕೊಂಡಿತ್ತು. ಜುಲೈ ಅಂತ್ಯದೊಳಗೆ ಸಮಸ್ಯೆ ಪರಿಹರಿಸಲು ಡಬ್ಲ್ಯುಎ ಕಾರ್ಯಕಾರಿ ಮಂಡಳಿ ಗಡು ವಿಧಿಸಿತ್ತು. ಆದರೆ ಯಾವುದೇ ಬೆಳವಣಿಗೆ ಕಾಣದ ಹಿನ್ನೆಲೆಯಲ್ಲಿ ಅಮಾನತು ಆದೇಶವನ್ನು ಜಾರಿಗೊಳಿಸಲಾಗಿದೆ ಎಂದು ಡಬ್ಲ್ಯುಎ ಪ್ರಧಾನ ಕಾರ್ಯದರ್ಶಿ ಟಾಮ್ ಡೀಲೆನ್ ತಿಳಿಸಿದ್ದಾರೆ.
ಆಗಸ್ಟ್ ತಿಂಗಳೊಳಗೆ ಯಾವುದೇ ಪರಿಹಾರ ಕಾಣದಿದ್ದರೆ ಮುಂಬರುವ ಏಶ್ಯನ್ ಚಾಂಪಿಯನ್ಶಿಪ್ ಮತ್ತು ಏಶ್ಯನ್ ಪ್ಯಾರಾ ಚಾಂಪಿಯನ್ಶಿಪ್ನಲ್ಲಿ ಭಾರತೀಯ ಬಿಲ್ಗಾರರು ಭಾಗವಹಿಸುವ ಬಗ್ಗೆ ಕಾರ್ಯಕಾರಿ ಸಮಿತಿ ನಿರ್ಧಾರ ತೆಗೆದು ಕೊಳ್ಳಲಿದೆ ಎಂದು ಡೀಲೆನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Virat Kohli; ನಿವೃತ್ತಿಯ ಬಗ್ಗೆ ಮಾತನಾಡಿದ ವಿರಾಟ್..; ಫ್ಯಾನ್ಸ್ ಗೆ ಆತಂಕತಂದ ಕೊಹ್ಲಿ ಮಾತು
Head Coach; ರಾಹುಲ್ ದ್ರಾವಿಡ್ ಬಳಿಕ ಕೋಚ್ ಹುದ್ದೆ ನಿರಾಕರಿಸಿದ ಟೀಂ ಇಂಡಿಯಾ ದಿಗ್ಗಜ
Sunil Chhetri: ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ ಸುನಿಲ್ ಚೇತ್ರಿ
Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್ ಆಟ!
Ipl 2024: ಹೈದರಾಬಾದ್ಗೆ ಗೆಲುವು ಅನಿವಾರ್ಯ, ವಿದಾಯ ಪಂದ್ಯ ಆಡಲಿರುವ ಗುಜರಾತ್ ಟೈಟಾನ್ಸ್