ವಿಚಾರಣೆ ದಿನವಹಿಯೇ: ಸುಪ್ರೀಂ
Team Udayavani, Aug 10, 2019, 5:53 AM IST
ನವದೆಹಲಿ: ಅಯೋಧ್ಯೆಯ ಜಮೀನು ಮಾಲೀಕತ್ವದ ಬಗೆಗಿನ ವಿಚಾರಣೆಯನ್ನು ದಿನ ವಹಿ ಕೈಗೊಳ್ಳಲಾಗುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ. ವಾರದ 5 ದಿನವೂ ವಿಚಾರಣೆ ನಡೆದರೆ ನನಗೆ ಸಿದ್ಧತೆ ನಡೆಸಲು ಕಷ್ಟವಾಗುತ್ತದೆ. ಹೀಗಾಗಿ ಶುಕ್ರವಾರ ವಿಚಾರಣೆ ನಡೆಸಬಾರದು ಎಂದು ಎಂ.ಸಿದ್ಧಿಕಿ ಮತ್ತು ಅಖೀಲ ಭಾರತ ಸುನ್ನಿ ವಕ್ಫ್ ಬೋರ್ಡ್ ಸಹಿತ ಹಲವು ಮುಸ್ಲಿಂ ಸಂಘಟನೆಗಳನ್ನು ಪ್ರತಿನಿಧಿಸುತ್ತಿರುವ ವಕೀಲ ರಾಜೀವ್ ಧವನ್ ಆಗ್ರಹಿಸಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ವಿಚಾರಣೆಯು ಈಗಾಗಲೇ ನಿಶ್ಚಯಿಸಿದಂತೆ ದಿನವಹಿ ನಡೆಯಲಿದೆ. ಅಗತ್ಯಬಿದ್ದರೆ ನಿಮಗೆ ವಾರದ ಮಧ್ಯೆ ವಿಚಾರಣೆಗೆ ಸಿದ್ಧತೆ ಮಾಡಿಕೊಳ್ಳಲು ಬಿಡುವು ನೀಡಲಾಗುವುದು ಎಂದು ಹೇಳಿತು. ಜತೆಗೆ ಮುಂದಿನ ವಾರದ ವಿಚಾರಣೆ ಮಂಗಳವಾರ (ಆ.13)ದಿಂದ ಶುರುವಾಗಲಿದೆ ಎಂದಿತು.
ರಾಮನ ವಂಶಜರು ವಾಸಿಸುತ್ತಿದ್ದಾರೆಯೇ?: ಅಯೋಧ್ಯೆಯಲ್ಲಿ ಶ್ರೀರಾಮನ ವಂಶಸ್ಥರಾಗಿರುವ ರಘು ವಂಶದವರು ವಾಸಿಸುತ್ತಿದ್ದಾರೆಯೇ ಎಂದು ರಾಮ ಲಲ್ಲಾ ವಿರಾಜಮಾನ್ ಪರ ವಕೀಲ ಕೆ.ಪರಾಶರನ್ರನ್ನು ಕೋರ್ಟ್ ಅಚ್ಚರಿಯಿಂದ ಪ್ರಶ್ನಿಸಿತು. ಅದಕ್ಕೆ ಪರಾಶರನ್ ‘ನನಗೆ ಮಾಹಿತಿ ಇಲ್ಲ. ಶೋಧಿಸಿ ನೋಡುವೆ’ ಎಂದು ಉತ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ