ಇ-ಲರ್ನಿಂಗ್ ಬೋಧನೆ ಅಗತ್ಯ
700ಕ್ಕೂ ಹೆಚ್ಚು ಪ್ರಾಥಮಿಕ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗಿ
Team Udayavani, Aug 11, 2019, 3:19 PM IST
ಸೊಲ್ಲಾಪುರ: ನಗರದ ಹುತಾತ್ಮಾ ಸ್ಮೃತಿ ಮಂದಿರದಲ್ಲಿ ಪ್ರಿಸಿಜನ್ ಫೌಂಡೇಶನ್ ಮತ್ತು ಸರ್ ಫೌಂಡೇಶನ್ ಸಹಯೋಗದಲ್ಲಿ ನಡೆದ ಶಿಕ್ಷಕರ ಪರಿವರ್ತನೆ ಕಾರ್ಯಾಗಾರದಲ್ಲಿ ಪ್ರಿಸಿಜನ್ ಇ-ಲರ್ನಿಂಗ್ ಪ್ರಕಲ್ಪ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಸೊಲ್ಲಾಪುರ: ಶಿಕ್ಷಣ ಕಲಿಯುವುದು ಕೇವಲ ನೋಡುವುದು ಮತ್ತು ಕೇಳುವುದು ಅಲ್ಲ. ಇಂದು ಪ್ರತ್ಯಕ್ಷವಾಗಿ ಇ-ಲರ್ನಿಂಗ್ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಬಹಳ ಮಹತ್ವದ್ದಾಗಿದೆ. ಆದ್ದರಿಂದ ಪ್ರತಿಯೊಬ್ಬ ಶಿಕ್ಷಕರು ತಮ್ಮ ಪಾರಂಪರಿಕ ಬೋಧನೆ ಕೈ ಬಿಟ್ಟು, ಆಧುನಿಕ ತಂತ್ರಜ್ಞಾನಗಳ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಬೇಕೆಂದು ಇ-ಲರ್ನಿಂಗ್ ಸಂಕಲ್ಪನೆ ಮುಖ್ಯಸ್ಥ ಸಂದೀಪ ಗುಂಡ ಹೇಳಿದರು.
ನಗರದ ಹುತಾತ್ಮ ಸ್ಮೃತಿ ಮಂದಿರದಲ್ಲಿ ಪ್ರಿಸಿಜನ್ ಫೌಂಡೇಶನ್ ಮತ್ತು ಸರ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ಪರಿವರ್ತನೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳಿಗೆ ಪ್ರತಿ ದಿನ ಹೊಸ-ಹೊಸ ಜ್ಞಾನ ಕೊಡಲು ಶಿಕ್ಷಕರು ಹೊಸ-ಹೊಸ ತಂತ್ರಜ್ಞಾನಗಳ ಉಪಯೋಗ ಮೂಲಕ ಬೋಧನೆ ಮಾಡಬೇಕಿದೆ. 21ನೇ ಶತಮಾನದಲ್ಲಿ ಶಿಕ್ಷಕರು ಹಿಂದಿನ ಕಾಲದ ಅಧ್ಯಯನ ಮಾಡುತ್ತೇವೆ ಎಂದರೇ ನಡೆಯುವದಿಲ್ಲ. ಬದಲಾಗುತ್ತರುವ ಪರಿಸ್ಥಿತಿಗನುಸಾರವಾಗಿ ಶಿಕ್ಷಕರು ಬೋಧನೆಯಲ್ಲಿ ಬದಲಾವಣೆ ಮಾಡಬೇಕಿದೆ. ಆದ್ದರಿಂದ ಇ-ಲರ್ನಿಂಗ್ ಸಾಹಿತ್ಯಗಳ ಉಪಯೋಗದಿಂದ ಬೋಧನೆ ಮಾಡಬೇಕು ಎಂದು ಹೇಳಿದರು.
ಸಿಇಒ ಪ್ರಕಾಶ ವಾಯಚಳ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಪ್ರಿಸಿಜನ್ ಫೌಂಡೇಶನ್ ಉತ್ತಮ ಕಾರ್ಯ ಮಾಡುತ್ತಿದೆ. ಸುಮಾರು 120 ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಇ-ಲರ್ನಿಂಗ್ ಸಾಹಿತ್ಯ ನೀಡಿ ಮಹಾನ್ ಕಾರ್ಯ ಮಾಡುತ್ತಿದೆ. ಸರಕಾರದ ಪ್ರತಿನಿಧಿಯಾಗಿ ಪ್ರಿಸಿಜನ್ ಫೌಂಡೇಶನ್ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು.
ಪ್ರಾಥಮಿಕ ಜಿಲ್ಲಾ ಶಿಕ್ಷಣಾಧಿಕಾರಿ ಸಂಜಯಕುಮಾರ ರಾಠೊಡ ಮಾತನಾಡಿ, ಬಹಳಷ್ಟು ಜನ ಶ್ರೀಮಂತರಿದ್ದಾರೆ. ಆದರೆ ಅವರಲ್ಲಿ ದಾನ ಮಾಡುವ ಮನಸ್ಸಿರುವುದಿಲ್ಲ. ಪ್ರಿಸಿಜನ್ ಫೌಂಡೇಶನ್ ಮುಖ್ಯಸ್ಥ ಯತಿನ್ ಶಹಾ ಅವರು ದಾನ ಮಾಡಬೇಕ್ಕೆನ್ನುವ ಮನೋಭಾವ ಹೊಂದಿದ್ದಾರೆ. ಸರಕಾರ ಮಾಡದ ಕೆಲಸವನ್ನು ಪ್ರಿಸಿಜನ್ ಫೌಂಡೇಶನ್ ಮಾಡುತ್ತಿದೆ. ಹೀಗಾಗಿ ಅವರ ಕಾರ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಲಾಗಿದೆ ಎಂದು ಹೇಳಿದರು.
ಪ್ರಿಸಿಜನ್ ಇ-ಲರ್ನಿಂಗ್ ಪ್ರಕಲ್ಪ ಪುಸ್ತಕ ಮತ್ತು ಪ್ರಿಸಿಜನ್ ಚರ್ಚಾಗೋಷ್ಠಿ ಕಾರ್ಯಕ್ರಮದಲ್ಲಿ ಗೌರವಿಸಿದ ಸಾಮಾಜಿಕ ಸಂಸ್ಥೆಗಳ ಪರಿಚಯದ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.
ಡಾ| ಸುಹಾಷಿನಿ ಶಹಾ ಪ್ರಾಸ್ತಾವಿಕ ಮಾತನಾಡಿದರು. ಮಾಧವ ದೇಶಪಾಂಡೆ ನಿರೂಪಿಸಿದರು. ಸಿದ್ರಾಮ ಮಾಶಾಳೆ ವಂದಿಸಿದರು. ಸೊಲ್ಲಾಪುರ ಜಿಲ್ಲೆಯಿಂದ ಸುಮಾರು 700ಕ್ಕೂ ಹೆಚ್ಚು ಪ್ರಾಥಮಿಕ ಶಿಕ್ಷಕ-ಶಿಕ್ಷಕಿಯರು ಇ-ಲರ್ನಿಂಗ್ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ