ಕೊರವಡಿ ಕ್ರಾಸ್; ಡಿವೈಡರ್ ಏರಿ ನಿಂತ ಕೆಎಸ್ಆರ್ಟಿಸಿ ಬಸ್
Team Udayavani, Aug 12, 2019, 10:16 PM IST
ತೆಕ್ಕಟ್ಟೆ : ಇಲ್ಲಿನ ಕುಂಭಾಸಿ ಕೊರವಡಿ ಕ್ರಾಸ್ ರಾ.ಹೆ.66ರಲ್ಲಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನ ಚಕ್ರ ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಗುಂಡಿಗೆ ಬಿದ್ದು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಏರಿ ನಿಂತ ಘಟನೆ ಸೋಮವಾರ ರಾತ್ರಿ ಗಂಟೆ 8.30ರ ಸುಮಾರಿಗೆ ಸಂಭವಿಸಿದೆ.
ಕುಂದಾಪುರದಿಂದ ಮೈಸೂರು ಕಡೆಗೆ ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನ ಚಕ್ರ ರಾ.ಹೆ.66ರಲ್ಲಿರುವ ಗುಂಡಿಗೆ ಬಿದ್ದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ಡಿವೈಡರ್ ಏರಿ ನಿಂತಿದೆ.
ಪರಿಣಾಮವಾಗಿ ಕೋಟ ಹಾಗೂ ಕುಂದಾಪುರ ಪೊಲೀಸ್ಠಾಣಾ ವ್ಯಾಪ್ತಿಯ ಗಡಿಭಾಗದಲ್ಲಿ ಅಳವಡಿಸಲಾದ ನಾಮಫಲಕ ಧರೆಶಾಯಿಯಾಗಿದೆ.
ಹೆದ್ದಾರಿ ಗುತ್ತಿಗೆ ಕಂಪೆನಿ ವಿರುದ್ಧ ಪ್ರತಿಭಟನೆ
ಈ ಸಂದರ್ಭ ರಾ.ಹೆ.66ರ ಗುತ್ತಿಗೆ ಕಂಪೆನಿಯ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಘಟನೆಗೆ ಕಾರಣವಾದ ಸುಮಾರು 2 ಅಡಿ ಆಳದ ಅಪಾಯಕಾರಿ ಗುಂಡಿಯಲ್ಲಿ ತಮ್ಮ ದ್ವಿಚಕ್ರವಾಹನವನ್ನು ಇರಿಸಿ ಅಣುಕು ಪ್ರದರ್ಶನಗೈದು ತೀವ್ರವಾಗಿ ಪ್ರತಿಭಟಿಸಿದ ಘಟನೆ ಕೂಡಾ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ