ನೆರೆ ಬಂದು ಹೋದ ಮೇಲೆ


Team Udayavani, Aug 13, 2019, 12:20 PM IST

gadaga-tdy-1

ರೋಣ: ಹೊಳೆಆಲೂರ ಗ್ರಾಮದೊಳಗೆ ಪೂರ್ಣ ಪ್ರಮಾಣದಲ್ಲಿ ಇಳಿಯದ ಮಲಪ್ರಭಾ ನದಿ ನೀರು.

ರೋಣ: ಮಲಪ್ರಭಾ ನದಿ ಪ್ರವಾಹಕ್ಕೆ ಸಿಕ್ಕಿ ಅಕ್ಷರಸಃ ನಲುಗಿ ಹೋಗಿರುವ ನೆರೆ ಸಂತ್ರಸ್ತರು ಮರಳಿ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಇನ್ನೂ ಹೆಚ್ಚು ನೀರು ಬರುವ ಸಂಭಂವವಿದೆ, ಯಾರೂ ಹಳೆಯ ಗ್ರಾಮಗಳಿಗೆ ತೆರಳಬೇಡಿ, ಇಲ್ಲಿಯೇ ವಾಸಿಸಿ ಎನ್ನುತ್ತಿದ್ದಾರೆ. ವಿಪರ್ಯಾಸವೆಂದರೆ ಸ್ಥಳಾಂತರಗೊಂಡ ‘ಆಸರೆ ಗ್ರಾಮ’ದಲ್ಲಿ ಈಗಿರುವ ಕುಟುಂಬಕ್ಕೆ ಅನುಗುಣವಾಗಿ ಮನೆಗಳಿಲ್ಲ.

2007-08ರ ಪ್ರವಾಹಕ್ಕೆ ಸಿಲುಕಿ ಮನೆಗಳನ್ನು ಕಳೆದುಕೊಂಡವರಿಗೆ ಅಂದು ಸರ್ಕಾರ ‘ಆಸರೆ ಗ್ರಾಮ’ವೆಂಬ ನಾಮಕರಣದೊಂದಿಗೆ ಹೊಸ ಗ್ರಾಮ ನಿರ್ಮಿಸಿಕೊಟ್ಟಿತು. ಅಮರಗೋಳ ಗ್ರಾಮದವರಿಗೆ 415 ಮನೆ, ಬಸರಕೋಡ-234, ಬಿ.ಎಸ್‌. ಬೇಲೆರಿ-389, ಹೊಳೆಆಲೂರ-473, ಹೊಳೆ ಮಣ್ಣೂರ-554, ಮಾಳವಾಡ-605, ಮೆಣಸಗಿ-1102, ಗಾಡ ಗೋಳಿ-504, ಯಾ.ಸ. ಹಡಗಲಿ-593, ಹೊಳೆಹಡಗಲಿ- 305, ಕುರವಿನಕೊಪ್ಪ-121 ಸೇರಿ ಒಟ್ಟು 5295 ಮನೆಗಳನ್ನು ಸರ್ಕಾರ ನಿರ್ಮಿಸಿಕೊಟ್ಟಿದೆ. ಆದರೆ ಹೊಳೆಆಲೂರಿನಲ್ಲಿ 2300 ಕುಟುಂಬ, ಬಸರಕೋಡ-300, ಬಿ.ಎಸ್‌. ಬೇಲೆರಿ-400, ಅಮರಗೋಳ- 450, ಬಸರಕೋಡ-350, ಮೇಣಸಗಿ-1250, ಹೊಳೆಹಡಗಲಿ- 385, ಕುರವಿನಕೊಪ್ಪ-150, ಗಾಡಗೋಳಿ-350, ಯಾ.ಸ.ಹಡಗಲಿ-650, ಹೊಳೆಮಣ್ಣೂರ- 664, ಮಾಳವಾಡ-710 ಕುಟುಂಬಗಳಿವೆ. ಗ್ರಾಮಗಳಲ್ಲಿ ಇರುವ ಕುಟುಂಬಗಳ ಸಂಖ್ಯೆ ಹತ್ತು ವರ್ಷದಲ್ಲಿ ಅಧಿಕವಾಗಿದ್ದು, ಸರ್ಕಾರ ನೀಡಿರುವ ಮನೆಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಸಂತ್ರಸ್ತರಿಗೆ ಇಲ್ಲಿ ಇರಲು ಜಾಗವಿಲ್ಲ. ಅಲ್ಲಿ ಇರಲು ಪ್ರವಾಹ ಮತ್ತು ಅಧಿಕಾರಿಗಳು ಬಿಡುತ್ತಿಲ್ಲ. ಇದರಿಂದ ಎಲ್ಲಿರಬೇಕು ಎಂಬ ಚಿಂತೆಯಲ್ಲಿ ನೆರೆ ಸಂತ್ರಸ್ತರಿದ್ದಾರೆ. ಇದರಿಂದ ನಿರಾಶ್ರೀತರಿಗೆ ಹೊಸ ಗ್ರಾಮದಲ್ಲಿದ್ದರು ನೋವೆ, ಹಳೆ ಗ್ರಾಮಕ್ಕೆ ಹೋದರು ನೋವೆ. ಇದರಿಂದಾಗಿ ಸಂತ್ರಸ್ತರ ಬದುಕು ನುಂಗಲಾದರ ಬಿಸಿ ತುಪ್ಪವಾಗಿದೆ.

ನೆರೆ ಪರಿಹಾರದಲ್ಲಿ ಕರ್ತವ್ಯ ಲೋಪ-ಅಧಿಕಾರಿ ಅಮಾನತು: ನೆರೆ ಪರಿಹಾರ ಕರ್ತವ್ಯದಲ್ಲಿ ಲೋಪವೆಸಗಿದ ರೊಣ ತಾಲೂಕಿನ ಹೊಳೆ ಮಣ್ಣೂರಿನ ಪಿಡಿಒ ಸೇರಿದಂತೆ ಇಬ್ಬರನ್ನು ಅಮಾನತುಗೊಳಿಸಲಾಗಿದೆ.

ಹೊಳೆಮಣ್ಣೂರ ಪಿಡಿಒ ಬಿ.ಎಸ್‌. ತೋಟಗಂಟಿ ಹಾಗೂ ಗ್ರೇಡ್‌-2 ಕಾರ್ಯದರ್ಶಿ ಎಂ.ಆರ್‌. ತಿಮ್ಮನಗೌಡ್ರ ಅವರನ್ನು ಅಮಾನತುಗೊಳಿಸಲಾಗಿದೆ. ಮಲಪ್ರಭಾ, ಬೆಣ್ಣಿಹಳ್ಳ ಪ್ರವಾಹ ಸಂದರ್ಭದಲ್ಲಿ ಕೇಂದ್ರ ಸ್ಥಾನದಲ್ಲಿದ್ದು, ಸೂಚಿತ ಕಾರ್ಯಕ್ಕೆ ಗೈರು ಹಾಜರಾಗಿ ಕರ್ತವ್ಯ ಲೋಪ ಎಸಗಿದ್ದರಿಂದ ಅವರನ್ನು ಅಮಾನತುಗೊಳಿಸಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಚವ್ಹಾಣ ಆದೇಶ ಹೊರಡಿಸಿದ್ದಾರೆ.

ನಮ್ಮ ಬಳಿ 2008ರಲ್ಲಿ ನೆರೆಹಾವಳಿಗೆ ಮನೆಯನ್ನು ಕಳೆದುಕೊಂಡವರ ಪಟ್ಟಿಯಿದೆ. ಆ ಪ್ರಕಾರ ಅವರಿಗೆ ಈಗಾಗಲೇ ನಿರ್ಮಿಸಿರುವ ಮನೆಗಳನ್ನು ಹಂಚಿಕೆ ಮಾಡಿ, ಆ ಮನೆಗಳಿಗೆ ಮೂಲ ಸೌಕರ್ಯ ನೀಡುತ್ತೇವೆ. ನಂತರ ಪಟ್ಟಿಯಲ್ಲಿ ಯಾರಿಗೆ ವಸತಿ ಸಿಗುವುದಿಲ್ಲ ಅಂತವರಿಗೆ ತಾತ್ಕಾಲಿಕವಾಗಿ ಶೆಡ್‌ ನಿರ್ಮಿಸಿಕೊಟ್ಟು, ನಂತರ ಅವರಿಗೂ ಮನೆ ಕಟ್ಟಿಕೊಡುವ ಕೆಲಸವನ್ನು ಜಿಲ್ಲಾಡಳಿತ ಮಾಡಲಿದೆ.•ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

 

•ಯಚ್ಚರಗೌಡ ಗೋವಿಂದಗೌಡ್ರ

ಟಾಪ್ ನ್ಯೂಸ್

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

Ra

Congress; ಅಮೇಠಿಗೆ ರಾಹುಲ್‌: ಅಂತಿಮ ನಿರ್ಧಾರ ಖರ್ಗೆ ಹೆಗಲಿಗೆ

1-eeqwew

Ban; ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ra

Congress; ಅಮೇಠಿಗೆ ರಾಹುಲ್‌: ಅಂತಿಮ ನಿರ್ಧಾರ ಖರ್ಗೆ ಹೆಗಲಿಗೆ

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

1-ww-ewqe

India-Bangladesh ಇಂದಿನಿಂದ ವನಿತಾ ಟಿ20 ಸರಣಿ

1-eeqwew

Ban; ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.