ಅಲುಗಾಡುತ್ತಿದೆ ಅರ್ಧ ಶತಮಾನ ಕಂಡ ಸೇತುವೆ
•ಸೇತುವೆ ಎರಡು ಭಾಗಗಳಲ್ಲಿ ಪೊಲೀಸ್ ಬ್ಯಾರಿಕೇಡ್•ಕೃಷ್ಣಾ ನದಿಯಲ್ಲಿ 4.72 ಲಕ್ಷ ಕ್ಯೂಸೆಕ್ ನೀರು
Team Udayavani, Aug 17, 2019, 12:59 PM IST
ಲಿಂಗಸುಗೂರು: ಕೃಷ್ಣಾ ನದಿ ನೀರಿನನಲ್ಲಿ ಮುಳಗಡೆಯಾಗಿದ್ದ ಜಲದುರ್ಗ ಸೇತುವೆ ಕಂಡಿದ್ದು ಹೀಗೆ.
ಲಿಂಗಸುಗೂರು: ಅರ್ಧ ಶತಮಾನ ಕಂಡ ಜಲದುರ್ಗ ಸೇತುವೆ ಪ್ರವಾಹದ ಹೊಡೆತಕ್ಕೆ ಸಿಲುಕಿ ಅಲುಗಾಡುತ್ತಿದೆ.
ಜುಲೈ 28ರಿಂದ ತಾಲೂಕಿನಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹ ಎದುರಾಗಿಯಿತು. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 6.30 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದ್ದರದಿಂದ ಆಗಸ್ಟ್ 10ರಂದು ತಾಲೂಕಿನ ಜಲದುರ್ಗ ಸೇತುವೆ ಮುಳುಗಡೆಯಾಗಿತ್ತು. ನದಿಯಲ್ಲಿ ನೀರಿನ ಮಟ್ಟ ಇಳಿಮುಖವಾಗಿದ್ದರಿಂದ ಆಗಸ್ಟ್ 15ರಂದು ಸಂಜೆ ಸಂಚಾರಕ್ಕೆ ಮುಕ್ತವಾಗಿತ್ತು. ಆದರೆ ಪ್ರವಾಹದ ಹೊಡೆತಕ್ಕೆ ಸೇತುವೆ ಶಿಥಿಲಗೊಂಡು ಅಲುಗಾಡುತ್ತಿದೆ.
ಹಿಂದೆದೂ ಕಾಣದಂತಹ ಪ್ರವಾಹ ಈ ಭಾರಿ ಕಾಣುವಂತಾಗಿದೆ. 1970ರಲ್ಲಿ ನಿರ್ಮಿಸಲಾದ ತಾಲೂಕಿನ ಜಲದುರ್ಗ ಸೇತುವೆ ಇದೇ ಮೊದಲ ಭಾರಿಗೆ ಮುಳುಗಡೆಯಾಗಿತ್ತು. ಆದರೆ ಈ ಸಲದ ಪ್ರವಾಹದ ಹೊಡತಕ್ಕೆ ಸೇತುವೆ ಎರಡು ಕಡೆ ನಿರ್ಮಿಸಲಾಗಿದ್ದ ತಡೆಗೋಡೆಗಳು ಕೊಚ್ಚಿ ಹೋಗಿವೆ. ನೀರಿನ ರಭಸಕ್ಕೆ ಸೇತುವೆ ಮಧ್ಯಭಾಗ ಅಲುಗಾಡುತ್ತಿದೆ. ಮತ್ತೂಂದು ಭಾಗ ಕೆಳಗಡೆ ಕುಸಿದು ಒಂದು ಅಡಿವರೆಗೆ ಮುಂದೆ ಸರಿದಿದೆ. ಸ್ಲ್ಯಾಬ್ನಲ್ಲಿದ್ದ ರಾಡುಗಳು ತೇಲಿವೆ. ಶುಕ್ರವಾರ ಕೃಷ್ಣಾ ನದಿಯಲ್ಲಿ 4.72 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದೆ. ಇನ್ನೂ ನೀರಿನ ರಭಸ ಇದ್ದೇ ಇದೆ. ಅಭದ್ರ ಸ್ಥಿತಿಯಲ್ಲಿರುವ ಸೇತುವೆಗೆ ಯಾವ ಕ್ಷಣದಲ್ಲಿಯಾದರೂ ಅನಾಹುತ ಸಂಭವಿಸುವ ಲಕ್ಷಣಗಳು ಎದುರಾಗಿದೆ. ಜಲದುರ್ಗ, ಹಂಚಿನಾಳ, ಯಳಗುಂದಿ, ಯರಗೋಡಿ, ಕಡದರಗಡ್ಡಿ ಗ್ರಾಮಗಳ ಸಂಪರ್ಕ ಕಲ್ಪಿಸುವ ಸೇತುವೆ ಅಭದ್ರತೆ ಸ್ಥಿತಿಯಲ್ಲಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಬಹುದು ಎನ್ನಲಾಗಿದೆ. ಜಲದುರ್ಗ ಸೇತುವೆ ಅಲುಗಾಡುತ್ತಿದ್ದರಿಂದ ಮುಂಜಾಗೃತವಾಗಿ ಪಾದಾಚಾರಿಗಳನ್ನು ಹೊರತು ಪಡಿಸಿ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಸೇತುವೆ ಎರಡು ಭಾಗಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸ್ ಕಾವಲು ಹಾಕಲಾಗಿದೆ. ಗುರುವಾರ ಸಂಜೆಯಷ್ಟೇ ಸಂಚಾರಕ್ಕೆ ಮುಕ್ತಾವಾಗಿದ್ದ ಜಲದುರ್ಗ ಸೇತುವೆ ಅಲುಗಾಡುತ್ತಿದ್ದರಿಂದ ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಡಿವೈಎಸ್ಪಿ ಜಿ.ಹರೀಶ, ಪಿಡಬ್ಲೂಡಿ ಎಇಇ ಸಿ.ಎಸ್.ಪಾಟೀಲ, ಸಿಪಿಐ ಯಶವಂತ ಬಿಸನಳ್ಳಿ, ಜೆಇ ಬಸವರಾಜ ಬಸ್ತಾನಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಕಳೆದ ಐದು ದಿನಗಳಿಂದ ಸೇತುವೆ ಮುಳುಗಡೆಯಾಗಿದ್ದರಿಂದ ಬಸ್ ಸಂಚಾರ ಸ್ಥಗಿತವಾಗಿತ್ತು. ಶುಕ್ರವಾರ ಬೆಳಗ್ಗೆಯಿಂದ ಬಸ್ ಸಂಚಾರ ಪುನಾರಂಭವಾಗಿದೆ. ಆದರೆ ಸೇತುವೆ ಅಭದ್ರತೆಯಲ್ಲಿರುವುದರಿಂದ ಸೇತುವೆ ದಡವರಿಗೆ ಬಸ್ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ ಹಾಗೂ ಕರೆದ್ಯೊಯ ಲಾಗುತ್ತಿದೆ. ಆಗಸ್ಟ್ 10ರಂದು ಪ್ರವಾಹ ಪೀಡಿತ ಗ್ರಾಮಗಳಲ್ಲಿ ವಾಹನಗಳ ಸಮೇತ ಎಂಟು ಜನ ಸಿಲುಕಿ ಹಾಕಿಕೊಂಡಿದ್ದರು. ಏರ್ಬೋಟ್ ಮೂಲಕ ಅಧಿಕಾರಿಗಳು ವಾಪಸ್ಸಾಗಿದ್ದರಿಂದ ಅವರ ವಾಹನಗಳನ್ನು ಗ್ರಾಮಗಳಲ್ಲಿ ಬಿಟ್ಟು ಬಂದಿದ್ದರು. ಗುರುವಾರ ಸಂಜೆ ನೀರಿನ ಮಟ್ಟ ಇಳಿಮುಖವಾದ ಬಳಿಕ ಸೇತುವೆ ಸಂಚಾರಕ್ಕೆ ಮುಕ್ತವಾಗಿದ್ದರಿಂದ ಅಧಿಕಾರಿಗಳು ಗುರುವಾರ ರಾತ್ರಿ ತಮ್ಮ ವಾಹನಗಳನ್ನು ತಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರದ ರಾಜ್ಯಗಳಲ್ಲಿ ಎಸ್ಸಿಪಿ, ಟಿಎಸ್ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’
H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ
CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ
Malpe ಬೀಚ್: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ
MUST WATCH
ಹೊಸ ಸೇರ್ಪಡೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
BJP ಅಧಿಕಾರದ ರಾಜ್ಯಗಳಲ್ಲಿ ಎಸ್ಸಿಪಿ, ಟಿಎಸ್ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!