ಇನ್ನು 5 ಲಕ್ಷದಿಂದ 10 ಲಕ್ಷ ರೂ. ವರೆಗೆ ಶೇ.10 ರಷ್ಟು ತೆರಿಗೆ?
ಮಧ್ಯಮ ವರ್ಗಕ್ಕೆ ಇನ್ನಷ್ಟು ರಿಲೀಫ್ ಸಿಗುವ ಲೆಕ್ಕಾಚಾರ
Team Udayavani, Aug 28, 2019, 6:55 PM IST
– ಕೇಂದ್ರ ಸರಕಾರಕ್ಕೆ ಉನ್ನತ ಸಮಿತಿಯೊಂದರಿಂದ ಶಿಫಾರಸು ಸಾಧ್ಯತೆ
ಹೊಸದಿಲ್ಲಿ: ತೆರಿಗೆ ಹೊರೆ ಬಗ್ಗೆ ಜನರು ಮಾತನಾಡುತ್ತಿರುವಾಗಲೇ, ವೈಯಕ್ತಿಕ ತೆರಿಗೆಯನ್ನು ಇಳಿಸಲು ಉನ್ನತ ಸಮಿತಿಯೊಂದು ಸರಕಾರಕ್ಕೆ ಶಿಫಾರಸು ಮಾಡುವ ಸಿದ್ಧತೆಯಲ್ಲಿದೆ. ಈ ಮೂಲಕ ಮಧ್ಯಮ ವರ್ಗದ ಕೈಯಲ್ಲಿ ಇನ್ನಷ್ಟು ಕಾಸು ಇರುವಂತೆ ಮಾಡಿ, ವಹಿವಾಟು ಹೆಚ್ಚಳದ ಗುರಿ ಹೊಂದಲಾಗಿದೆ.
ಸಮಿತಿ ಪ್ರಕಾರ 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ವರೆಗೆ ಆದಾಯ ಹೊಂದಿದವರು ಶೇ.10ರಷ್ಟು ತೆರಿಗೆ ಪಾವತಿ ಮಾಡಬೇಕು ಮತ್ತು 10ರಿಂದ 20 ಲಕ್ಷ ರೂ.ವರೆಗೆ ಆದಾಯ ಹೊಂದಿದವರು ಶೇ.20ರಷ್ಟು ತೆರಿಗೆ ಪಾವತಿ ಮಾಡುವಂತೆ ಮಾಡಬೇಕು ಎಂದು ಅದು ಹೇಳಿದೆ.
ಸದ್ಯ 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. (2019ರ ಬಜೆಟ್ ಪ್ರಕಾರ, 5 ಲಕ್ಷ ರೂ.ವರೆಗಿನ ಆದಾಯ ಹೊಂದಿದವರಿಗೆ ಆದಾಯ ತೆರಿಗೆ ವಿನಾಯಿತಿ ಇರಲಿದೆ.) 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.20ರಷ್ಟು ತೆರಿಗೆ ವಿಧಿಸಲಾಗುತ್ತಿದೆ. 10 ಲಕ್ಷ ರೂ. ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತಿದೆ.
ಮೂಲಗಳ ಪ್ರಕಾರ, ಐದು ಹಂತದ ತೆರಿಗೆ ಸ್ಲಾéಬ್ಗಳನ್ನು ಸಮಿತಿ ಶಿಫಾರಸು ಮಾಡಿದೆ. ಇದರಲ್ಲಿ ಶೇ.5, ಶೇ.10, ಶೇ.20 ಮತ್ತು ಶೇ.30 ಮತ್ತು ಶೇ.35ರಷ್ಟು ಎಂಬುದಾಗಿ ಇರಲಿದೆ. ಅಂದರೆ, 20 ಲಕ್ಷ ರೂ.ಗಳಿಂದ 2 ಕೋಟಿ ರೂ.ವರೆಗೆ ಆದಾಯ ಹೊಂದಿವರಿಗೆ ಶೇ.30ರಷ್ಟು ತೆರಿಗೆ ಇರಲಿದ್ದು, 2 ಕೋಟಿ ರೂ. ಮೇಲ್ಪಟ್ಟ ಆದಾಯಕ್ಕೆ ಶೇ.35ರಷ್ಟು ತೆರಿಗೆ ಇರಲಿದೆ.
ಕೇಂದ್ರೀಯ ನೇರ ತೆರಿಗೆ ಮಂಡಳಿ ಸದಸ್ಯ ಅಖೀಲೇಶ್ ರಂಜನ್ ಅವರ ನೇತೃತ್ವದ ಸಮಿತಿ ಈ ಸಮಿತಿ ವರದಿ ತಯಾರು ಮಾಡಿದ್ದು, ಶಿಫಾರಸ್ಸನ್ನು ಕೇಂದ್ರ ಸರಕಾರಕ್ಕೆ ಇನ್ನಷ್ಟೇ ಸಲ್ಲಿಸಬೇಕಿದೆ ಎಂದು ನ್ಯೂಸ್ 18 ವರದಿ ಮಾಡಿದೆ.
ಯಾರಿಗೆ ಎಷ್ಟು ತೆರಿಗೆ?
0.25 ಲಕ್ಷ ರೂ. – ತೆರಿಗೆ ಇಲ್ಲ
5 ಲಕ್ಷ ರೂ.ವರೆಗೆ – ತೆರಿಗೆ ವಿನಾಯ್ತಿ
10 ಲಕ್ಷ ರೂ.ವರೆಗೆ – ಶೇ.10
10-20 ಲಕ್ಷ ರೂ.- ಶೇ.20
20 ಲಕ್ಷ – 2 ಕೋಟಿ ರೂ. – ಶೇ.30
2 ಕೋಟಿ ರೂ. ಗಳಿಗೂ ಹೆಚ್ಚು – ಶೇ.35
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?