ವಿದ್ಯಾರ್ಥಿಗಳ ಪಾಠಕ್ಕೂ ನೆರೆ ಅಡ್ಡಿ

ಪ್ರವಾಹಕ್ಕೆ ಕೊಚ್ಚಿ ಹೋಗಿವೆ ಪಠ್ಯಪುಸ್ತಕ•50 ಸಾವಿರ ಪುಸ್ತಕಕ್ಕೆ ಬೇಡಿಕೆ ಸಲ್ಲಿಕೆ

Team Udayavani, Aug 29, 2019, 1:26 PM IST

29-Agust-27

ಗದಗ: ಹೊಳೆಹಡಗಲಿ ನವ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರಿಡಾರ್‌ನಲ್ಲೇ ಕುಳಿತು ಪಾಠ ಆಲಿಸುತ್ತಿರುವ ಮಕ್ಕಳು ಮತ್ತು ನೆರೆಯಿಂದ ಹಾನಿಗೊಳಗಾದ ವಸ್ತುಗಳನ್ನು ಹೊರಗೆ ಹಾಕಲಾಗಿದೆ.

ವೀರೇಂದ್ರ ನಾಗಲದಿನ್ನಿ
ಗದಗ:
ಮಲಪ್ರಭೆ ಹಾಗೂ ಬೆಣ್ಣಿಹಳ್ಳ ಸೃಷ್ಟಿಸಿದ್ದ ಪ್ರವಾಹ ನರಗುಂದ ಮತ್ತು ರೋಣ ತಾಲೂಕಿನ ವಿವಿಧ ಗ್ರಾಮಗಳ ಜನರ ಜೀವನದ ಮೇಲಷ್ಟೇ ಪರಿಣಾಮ ಬೀರಿಲ್ಲ. ಜೊತೆಗೆ ಈ ಭಾಗದ ಶಾಲಾ ಮಕ್ಕಳ ಶೈಕ್ಷಣಿಕ ಹಕ್ಕನ್ನೇ ಕಸಿದುಕೊಂಡಿದೆ. ವಿವಿಧೆಡೆ ಪ್ರವಾಹದಲ್ಲಿ ಮುಳುಗಡೆಯಾಗಿದ್ದ ಶಾಲೆಗಳು ಇಂದೋ-ನಾಳೆಯೋ ಬೀಳುವ ಹಂತಕ್ಕೆ ತಲುಪಿದ್ದು, ಸಾವಿರಾರು ವಿದ್ಯಾರ್ಥಿಗಳನ್ನು ಬೀದಿಗೆ ತಂದು ನಿಲ್ಲಿಸಿದೆ.

ಜಿಲ್ಲೆಯ ನರಗುಂದ ತಾಲೂಕಿನ 8 ಮತ್ತು ರೋಣ ತಾಲೂಕಿನ 16 ಗ್ರಾಮಗಳಲ್ಲಿ ಮಲಪ್ರಭಾ ನದಿ ಹಾಗೂ ಬೆಣ್ಣಿಹಳ್ಳದಿಂದ ಉಂಟಾಗಿದ್ದ ನೆರೆಯಿಂದ ಆದ ಹಾನಿ ಅಷ್ಟಿಷ್ಟಲ್ಲ. ಜಿಲ್ಲೆಯ 23 ಗ್ರಾಮಗಳ ನೂರಾರು ಮನೆಗಳೊಂದಿಗೆ ಆಯಾ ಗ್ರಾಮ ಶಾಲಾ ಕೊಠಡಿಗಳು ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಪ್ರವಾಹ ಪರಿಸ್ಥಿತಿಯಿಂದಾಗಿ ಜನರನ್ನು ನವ ಗ್ರಾಮಗಳಿಗೆ ಸ್ಥಳಾಂತರಿಸಲಾಗಿದೆ. ಗ್ರಾಮಸ್ಥರೊಂದಿಗೆ ಶಾಲೆಗಳೂ ಸ್ಥಳಾಂತರವಾಗಿದ್ದರೂ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಟ್ಟಡಗಳಿಲ್ಲ. ಹೀಗಾಗಿ ಒಂದೇ ತರಗತಿ ಕೊಠಡಿಯಲ್ಲಿ ಎರೆಡು-ಮೂರು ತರಗತಿಗಳು ನಡೆದರೆ, ಇನ್ನಿತರೆ ಶಾಲೆಗಳಲ್ಲಿ ಮಕ್ಕಳು ಕಾರಿಡಾರ್‌ನಲ್ಲೇ ಕುಳಿತು ಪಾಠ ಕೇಳುವ ಅನಿವಾರ್ಯತೆ ಸೃಷ್ಟಿಸಿದೆ.

ವಿದ್ಯಾರ್ಥಿಗಳಿಗೆ ಕೊಠಡಿಗಳ ಕೊರತೆ: ಆ ಪೈಕಿ ರೋಣ ತಾಲೂಕಿನ ಕುರುವಿನಕೊಪ್ಪ ನವ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿ ವರೆಗೆ ಒಟ್ಟು 27 ವಿದ್ಯಾರ್ಥಿಗಳಿಗೆ ಒಂದೇ ಕೊಠಡಿ. ಅದರಂತೆ ನಿ.ಎಸ್‌. ಬೇಲೇರಿ ಪ್ರೌಢಶಾಲೆಯ 8ರಿಂದ 10ನೇ ತರಗತಿ ವರೆಗೆ 56 ವಿದ್ಯಾರ್ಥಿಗಳಿದ್ದು, ಪ್ರಾಥಮಿಕ ಶಾಲೆಯ 104, ಹೊಳೆಹಡಗಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 89 ವಿದ್ಯಾರ್ಥಿಗಳು ತಲಾ ಎರಡು ಕೊಠಡಿಗಳಲ್ಲಿ ಕಲಿಯುವಂತಾಗಿದೆ.

ಅದರಲ್ಲೂ ಕೆಲ ಶಾಲೆಗಳ ಒಂದು ಕೊಠಡಿಯಲ್ಲೇ ಬಿಸಿಯೂಟದ ಸಾಮಗ್ರಿ, ಸಿಲಿಂಡರ್‌ಗಳನ್ನು ದಾಸ್ತಾನು ಮಾಡಲಾಗಿದೆ. ಮಕ್ಕಳಿಗೆ ನೈಸರ್ಗಿಕ ಕೆರೆಗೆ ಬಯಲೇ ಗತಿ. ಇನ್ನು, ಹೊಳೆಮಣ್ಣೂರು, ಹೊಳೆಆಲೂರು, ಬಸರಕೊಡ ನವ ಗ್ರಾಮಗಳ ಸರಕಾರಿ ಶಾಲೆಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

6 ಸಾವಿರ ಮಕ್ಕಳಿಗಿಲ್ಲ ಪಠ್ಯ ಪುಸ್ತಕ: ಜಿಲ್ಲೆಯ ನರಗುಂದ ಮತ್ತು ರೋಣ ತಾಲೂಕಿನಲ್ಲಿ ಉಂಟಾಗಿದ್ದ ಪ್ರವಾಹ ಆ ಭಾಗದ ಹೊಲ-ಮನೆ ಸೇರಿದಂತೆ ಸಾವಿರಾರು ಮುದ್ದು ಕಂದಮ್ಮಗಳ ಪಠ್ಯ ಪುಸ್ತಕಗಳೂ ಕೊಚ್ಚಿ ಹೋಗಿವೆ. ಮನೆ ಅಂಗಳದಲ್ಲೇ ನಿಂತಿದ್ದ ಯಮಸ್ವರೂಪಿ ನೆರೆ ನೀರಿನಿಂದ ರಕ್ಷಿಸಿಕೊಂಡರೆ ಸಾಕು ಎಂದು ಮನೆ ಮಂದಿಯೆಲ್ಲ ಇದ್ದ ಸ್ಥಿತಿಯಲ್ಲೇ ಸುರಕ್ಷಿತ ಸ್ಥಾನಕ್ಕೆ ಬಂದಿದ್ದರು. ಹೀಗಾಗಿ ಮನೆಯಲ್ಲಿದ್ದ ದಿನಬಳಕೆ ವಸ್ತುಗಳೊಂದು ಮಕ್ಕಳ ಶಾಲಾ ಪುಸ್ತಕಗಳೂ ಹರಿದು ಹೋಗಿವೆ.

ಆ ಪೈಕಿ ನರಗುಂದ ತಾಲೂಕಿನ 8 ಗ್ರಾಮಗಳ 21 ಸರಕಾರಿ ಪ್ರಾಥಮಿಕ, 3 ಅನುದಾನಿ ಹಾಗೂ 3 ಅನುದಾನ ರಹಿತ ಮತ್ತು ಪ್ರೌಢ ಶಾಲೆಗಳಲ್ಲಿ 3 ಸರಕಾರಿ, 4 ಅನುದಾನಿತ ಶಾಲೆಗಳು ಸೇರಿದಂತೆ 3,997 ಮಕ್ಕಳ ಪುಸ್ತಕಗಳು ಹಾನಿಯಾಗಿವೆ. ರೋಣ ತಾಲೂಕಿನ 16 ಗ್ರಾಮಗಳ 23 ಸರಕಾರಿ ಶಾಲೆಗಳ ಸುಮಾರು 2 ಸಾವಿರ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳು ನೆರೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಕೆಲವರು ಪ್ರವಾಹ ಇಳಿದ ಬಳಿಕ ಮನೆಯಲ್ಲಿ ಅಳಿದುಳಿದ ಪುಸ್ತಕಗಳನ್ನು ತಂದು, ಬಿಸಿಲಿಗಿ ಒಣಗಿಸಿಕೊಂಡಿದ್ದಾರೆ. ಹೀಗಾಗಿ ಶಾಲೆಯ ಬೆರಳೆಣಿಕೆಯಷ್ಟು ಮಕ್ಕಳಲ್ಲಿ ಒಂದೆರಡು ಪಠ್ಯ ಪುಸ್ತಕಗಳಿದ್ದರೆ ಅದೇ ಹೆಚ್ಚು. ಪಠ್ಯ ಪುಸ್ತಕಗಳಿಲ್ಲದ ಮಕ್ಕಳು ಸಹಪಾಠಿಗಳಿಂದ ಪುಸ್ತಕಗಳನ್ನು ಪಡೆದು ಅಧ್ಯಯನ ನಡೆಸುವಂತಾಗಿದೆ. ಪುಸ್ತಕಗಳ ಕೊರತೆಯಿಂದ ತಾವು ಮಾಡುವ ಬೋಧನೆಯೂ ಪರಿಣಾಮಕಾರಿಯಾಗುತ್ತಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಶಿಕ್ಷಕರು.

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.