ಪರಿಸರ ಗಣಪ ತಿಲಕರ ಬೇಡಿಕೆಯಿಂದ ಬಹುಮುಖೀ ಬೇಡಿಕೆ ವರೆಗೆ…


Team Udayavani, Sep 2, 2019, 5:00 AM IST

Ganesh-kumar

ಉಡುಪಿ: ಬಾಲಗಂಗಾಧರ ತಿಲಕರು 1893ರಲ್ಲಿ ಪುಣೆಯ ಮೂರು ಕಡೆ ಮತ್ತು ಮುಂಬಯಿಗಿರ್‌ ಗಾಂವ್‌ನ ಕೇಶವ್‌ಜಿ ನಾಯಕ್‌ ಚೌಕ್‌ನಲ್ಲಿ ಗಣೇಶೋತ್ಸವ ಆರಂಭಿಸಿದರು. ಮಹಾರಾಷ್ಟ್ರದಲ್ಲಿ ಜನಪ್ರಿಯಗೊಂಡು ಆಗ ಮುಂಬಯಿ ಕರ್ನಾಟಕ, ಹೈದರಾಬಾದ್‌ ಕರ್ನಾಟಕದಲ್ಲಿ ತಳ ವೂರಿ ಮಂಗಳೂರಿನ ಮೂಲಕ ಕರ್ನಾಟಕ ಕರಾ ವಳಿ ನಾಡಿಗೆ ಬಂದದ್ದು 1948ರಲ್ಲಿ.

ಮಹಾತ್ಮಾ ಗಾಂಧೀಜಿಯವರೂ ಗುರುವೆಂದು ಒಪ್ಪಿಕೊಂಡ ಸ್ವಾತಂತ್ರ್ಯ ಹೋರಾಟಗಾರರಾದ ಬಾಲಗಂಗಾಧರ ತಿಲಕರು ಗಣೇಶ ಚತುರ್ಥಿ ಹಬ್ಬವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಬಳಸಿಕೊಳ್ಳಲು ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದರು. ಎಲ್ಲೆಲ್ಲ ಗಣೇಶನ ಆರಾಧನೆಗಳಿವೆಯೋ ಅಲ್ಲೆಲ್ಲ ಈಗ ಪೂಜೆಯು ಸಾರ್ವಜನಿಕ ಸ್ವರೂಪ ತಾಳಿದೆ. ಆಗ ತಿಲಕರು ಉತ್ಸ ವದ ಕೊನೆಯಲ್ಲಿ “ಭಾರತ್‌ ಮಾತಾ ಕಿ ಜೈ’ ಎಂಬ ಮೂಲಕ ನೆರೆದ ಜನರಲ್ಲಿ ಸ್ವಾತಂತ್ರ್ಯದ ಕಿಡಿ ಹಚ್ಚಲು ಪ್ರಯತ್ನಿಸಿದ್ದರು. ಆಗ ತಿಲಕರಿಗೆ ಸ್ವಾತಂತ್ರ್ಯ ಹೋರಾಟದ ಗುರಿ ಇತ್ತು, ಅಗತ್ಯವೂ ಆಗಿತ್ತು. ಕರ್ನಾಟಕದ ಕರಾವಳಿಗೆ ಬರು ವಾಗ ಸ್ವತಂತ್ರ ಭಾರತ ಒಂದು ವರ್ಷದ ಹಸುಗೂಸು, ಈಗ 73 ವರ್ಷಗಳ ಹಿರಿಯ ಸ್ವತಂತ್ರ ಭಾರತ. ಆಗಿನ ಬೇಡಿಕೆ ಈಗಿಲ್ಲ. ಕಾಲಕಾಲಕ್ಕೆ ಸಮಾಜದ ಅಗತ್ಯ ಬದಲಾಗುತ್ತ ಹೋಗುತ್ತವೆ.

ಈಗ ಭ್ರಷ್ಟಾಚಾರ, ಮಾಲಿನ್ಯ, ಅಪ್ರಾಮಾಣಿಕತೆ, ನಿರುದ್ಯೋಗ, ಉಳ್ಳ ವರು-ಇಲ್ಲದವರ ನಡುವಿನ ಕಂದಕ, ಮೋಸ, ಕಪಟ, ಕೃಷಿ-ಗುಡಿಕೈಗಾರಿಕೆಗಳ ಅವನತಿ, ಬೃಹತ್‌ ಕೈಗಾರಿಕೆಗಳ ಉನ್ನತಿ, ಆಹಾರ-ಗಾಳಿ- ನೀರಿನಿಂದ ಹಿಡಿದು ಕೋಳಿ, ಹಂದಿ, ದನದಂತಹ ಪ್ರಾಣಿಗಳವರೆಗೆ ಎಲ್ಲವೂ ಅನೈಸರ್ಗಿಕ ಬೆಳವಣಿ ಗೆಯ ಬೇಗುದಿ ಇತ್ಯಾದಿ ಸಮಸ್ಯೆ ಬೃಹದಾ ಕಾರವಾಗಿ ಬೆಳೆದುನಿಂತಿದ್ದು ಇವುಗಳ ನಿಯಂತ್ರಣ ಇಂದಿನ ಬೇಡಿಕೆಯಾಗಿದೆ. ಇವೆಲ್ಲವೂ ವ್ಯಕ್ತಿಗಳನ್ನು ಸ್ವತಂತ್ರವಾಗಿರಿಸುವ ಬದಲು ಪರೋಕ್ಷವಾಗಿ ಪರತಂತ್ರ, ಪರಾವಲಂಬಿಯನ್ನಾಗಿಸಿದೆ.

ಪ್ರತಿಯೊಂದು ಊರಿನಲ್ಲಿರುವ ಜನರಿಗೆ ಮೇಲಿನ ಎಲ್ಲ ಬಗೆಯ ಸಮಸ್ಯೆ ಒಂದಲ್ಲ ಒಂದು ಬಗೆಯಲ್ಲಿ ತಟ್ಟದೆ ಇಲ್ಲ. ಈಗ ಸ್ವಾತಂತ್ರ್ಯದ ಅಗತ್ಯವಿಲ್ಲವೆಂದು ತಿಲಕರನ್ನು ಮರೆಯುವಂತಿಲ್ಲ. ಪ್ರತಿ ಗಣೇಶೋತ್ಸವಗಳು ತಿಲಕರ ಭಾವಚಿತ್ರಇರಿಸುವ ಮೂಲಕ ಈಗಿನ ಸಮಸ್ಯೆ ಹೋಗಲಾಡಿಸಲು ಪಣ ತೊಟ್ಟು ಕೊನೆಯಲ್ಲಿ “ಭಾರತ್‌ ಮಾತಾ ಕೀ ಜೈ’ ಎಂದೋ, “ಜೈ ಹಿಂದ್‌’, “ಜೈ ಕರ್ನಾಟಕ’ ಎಂದೋ ನೆರೆದ ಜನರಲ್ಲಿ ಜಾಗೃತಿ ರೂಪಿಸಬೇಕಿದೆ.

ಗಣೇಶೋತ್ಸವ ಸಮಿತಿ ಹಲವು ಬಗೆಯ ಸಾರ್ವಜನಿಕ ಉಪಯೋಗಿ ಕೆಲಸ ಮಾಡುತ್ತಿರು ವುದು ಸ್ವಾಗತಾರ್ಹ. ಉದಾಹರಣೆಗೆ ಮಲ್ಪೆ ಸಮಿತಿಯವರು ಏಳೆಂಟು ವರ್ಷ
ಬೇಸಗೆಯಲ್ಲಿ ಕುಡಿಯುವ ನೀರು ಪೂರೈಸುತ್ತಿದ್ದಾರೆ. ಕಡಿಯಾಳಿ ಗಣೇಶೋತ್ಸವದವರು ತಂದೆ ತಾಯಿ ಇಲ್ಲದ 25 ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದತ್ತು ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಇಂದ್ರಾಣಿ ಮಂಜುಶ್ರೀನಗರದ ಸುಮತಿ ಎಂಬ ಕೊರಗ ಸಮುದಾಯದ ಮಹಿಳೆಯ ಮನೆ ಮಳೆಗೆ ಬಿದ್ದು ಹೋದಾಗ ಸಮಿತಿ ಕಾರ್ಯಕರ್ತರು ಕರಸೇವೆಯಿಂದ ಪುನರ್ನಿಮಿಸಿ ಕೊಡುತ್ತಿದ್ದಾರೆ.

ನಮಗೀಗ ಯೋಜನೆ ಎಂದಾಕ್ಷಣ ಕಟ್ಟಡಗಳದ್ದೇ ನೆನಪು ಬರುತ್ತದೆ. ಈಗ ಸಮುದಾಯ ಭವನಗಳ ಕೊರತೆ ಇದ್ದಂತಿಲ್ಲ, ಜತೆಗೆ ಇದ್ದ ಕಟ್ಟಡಗಳೇ ಹೆಚ್ಚಿಗೆ ಇವೆ.

ಸಾರ್ವಜನಿಕರಿಂದ ಸಂಗ್ರಹಿಸಿ ಕಟ್ಟುವ ಕಟ್ಟಡಗಳನ್ನು ಬಡವರಿಗೆ ಉಚಿತವಾಗಿ ಕೊಡೋಣವೆಂದರೆ ಸಮಿತಿಯಲ್ಲಿ ಆಕ್ಷೇಪ ಬರುವ ಸಾಧ್ಯತೆ ಇದೆ, ನಿರ್ವಹಣೆಯೂ ಕಷ್ಟಸಾಧ್ಯವಾದ ಕಾರಣ ಅನಿವಾರ್ಯ ಎನ್ನಬಹುದು. ಅಗತ್ಯವಿರುವ ವ್ಯಕ್ತಿಗಳಿಗೆ
ಸಹಕಾರ ನೀಡಿ ಅವರನ್ನು ಜೀವನ ದಲ್ಲಿ ಮೇಲೆತ್ತುವುದು ಕಟ್ಟಡ ಮೇಲೆತ್ತುವು ದಕ್ಕಿಂತ ಅಗತ್ಯವಾಗಿದೆ. ಸಮುದಾಯದಲ್ಲಿ ಅಗತ್ಯವಿರುವ ವ್ಯಕ್ತಿಗಳನ್ನು ಸಬಲೀಕರಣ ಗೊಳಿಸಿದರೆ ಮೊದಲು ವ್ಯಕ್ತಿ, ಅನಂತರ ಮನೆ, ಅದುವೇ ಊರಾಗಿ, ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಅಂತಿಮವಾಗಿ ಜಗತ್ತಿನ ಕಲ್ಯಾಣದಲ್ಲಿ ಪರ್ಯವಸಾನಗೊಳ್ಳದಿರಲು ಸಾಧ್ಯವೆ? ಇದು ಸಾಧುವಲ್ಲವೆ?

ಸ್ವಾಮಿ

ಟಾಪ್ ನ್ಯೂಸ್

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿನಾಯಕ ಗಣಗಳ ನಾಯಕ…ಗಣಪತಿಯ ಮದುವೆ ಬಗ್ಗೆ ಪುರಾಣ ಕಥೆಯಲ್ಲೇನಿದೆ…

ವಿನಾಯಕ ಗಣಗಳ ನಾಯಕ…ಗಣಪತಿಯ ಮದುವೆ ಬಗ್ಗೆ ಪುರಾಣ ಕಥೆಯಲ್ಲೇನಿದೆ…

web exclusive news ojijofkbh

ಭಾಂದವ್ಯ ಬೆಸೆಯುವ ರಾಷ್ಟ್ರೀಯ ಹಬ್ಬ ಗಣೇಶ ಚತುರ್ಥಿ

ಸಂಸ್ಕೃತಿ, ಸಂಪ್ರದಾಯ; ಹೆಣ್ಣು ಮಕ್ಕಳ ಹಬ್ಬ ಗೌರಿ ಹುಣ್ಣಿಮೆ…

ಸಂಸ್ಕೃತಿ, ಸಂಪ್ರದಾಯ; ಹೆಣ್ಣು ಮಕ್ಕಳ ಹಬ್ಬ ಗೌರಿ ಹುಣ್ಣಿಮೆ…

thumb gauri

ಗೌರಿಯ ಪ್ರಥಮ ಪೂಜೆ…ತವರಲ್ಲಿ ಮಾಡಿದ ಮೊದಲ ಹಬ್ಬ

CHAUTI GANESHA uv web exclusive thumb copy CHAUTI

ಗಣೇಶ ಚತುರ್ಥಿ: ಗಣೇಶನಿಂದ ನಾವು ಕಲಿಯೋದೇನು ? ಹೇಗಿರಬೇಕು ಸಾಂಪ್ರದಾಯಿಕ ಆಚರಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.