ಪೋನ್ ಕದ್ದಾಲಿಕೆ ತನಿಖೆ ಚುರುಕು
Team Udayavani, Sep 7, 2019, 3:00 AM IST
ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಪ್ರಮುಖ ರಾಜಕಾರಣಿಗಳು ಸೇರಿದಂತೆ ಹಲವು ಮಂದಿಯ ಫೋನ್ ಕದ್ದಾಲಿಕೆ ಆರೋಪ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಬಿಐ, ಡೇಟಾ ಸಂಗ್ರಹ ಕಾರ್ಯ ಮುಂದುವರಿಸಿದೆ.
ಪೋನ್ ಕದ್ದಾಲಿಕೆ ನಡೆದಿರುವ ಆಡುಗೋಡಿಯಲ್ಲಿರುವ ಸಿಸಿಬಿ ತಾಂತ್ರಿಕ ವಿಭಾಗದಿಂದ ಜಪ್ತಿ ಪಡಿಸಿಕೊಂಡಿದ್ದ ಕದ್ದಾಲಿಕೆ ಸಾಧನದಿಂದ ಡೇಟಾ ಸಂಗ್ರಹಿಸುತ್ತಿದ್ದು, ಕದ್ದಾಲಿಕೆ ನಡೆದಿರುವವರ ಮಾಹಿತಿಯನ್ನು ಕ್ರೋಢಿಕರಣ ಮಾಡುತ್ತಿದೆ. ತನಿಖೆಗೆ ನಿಗದಿಗೊಂಡಿರುವ 2018ರ ಅಕ್ಟೋಬರ್ 1ರಿಂದ 2019ರ ಆಗಸ್ಟ್ 9ರವರೆಗೆ ನಡೆದಿರುವ ಕದ್ದಾಲಿಕೆಯ ಮಾಹಿತಿಯ ಸಂಪೂರ್ಣ ಸಂಗ್ರಹ ಪೂರ್ಣಗೊಳಿಸುವ ಹಂತದಲ್ಲಿದೆ.
ಮಾಹಿತಿ ಕ್ರೋಢಿಕರಣದ ಬಳಿಕ ಕದ್ದಾಲಿಕೆಗೆ ಸೂಚಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಕದ್ದಾಲಿಕೆ ನಡೆಸಿದ ಅಧಿಕಾರಿಗಳು ಹಾಗೂ ಕದ್ದಾಲಿಕೆಯ ಧ್ವನಿಮುದ್ರಿಕೆಯನ್ನು ಬಹಿರಂಗಗೊಳಿಸಿದ ಎಲ್ಲ ಆರೋಪಿತರಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ