ಇಂದು ವಿವಿಧೆಡೆ ಅನಂತಪದ್ಮನಾಭ ವ್ರತ


Team Udayavani, Sep 12, 2019, 5:45 AM IST

anantha-vratha

ಕುಂದಾಪುರ: ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ದಶಿಯಂದು ಬರುವ ಶ್ರೇಷ್ಠ ವ್ರತವೇ ಅನಂತವ್ರತ. ಈ ವ್ರತಾಚರಣೆಗೆ ಪೌರಾಣಿಕ ಹಿನ್ನೆಲೆ ಇದೆ. ಸತತ ಹದಿನಾಲ್ಕು ವರುಷ ಈ ಅನಂತವ್ರತ ಆಚರಿಸಿ ಶ್ರೀ ಅನಂತಪದ್ಮನಾಭ ಉದ್ಯಾಪನೆ ಮಾಡಿಸಿದರೆ ಇಹದಲ್ಲಿ ಸುಖ ಪರದಲ್ಲಿ ಮುಕ್ತಿ ಲಭಿಸುತ್ತದೆ.

ಪೌರಾಣಿಕ ಹಿನ್ನೆಲೆ
ಭಾಗೀರಥಿ ನದಿ ತೀರದಲ್ಲಿ ಧರ್ಮರಾಯನು ಜರಾಸಂಧನ ವಧೆಗಾಗಿ ರಾಜಸೂಯ ಯಾಗ ಆರಂಭಿಸಿದ್ದು, ಶ್ರೀ ಕೃಷ್ಣ, ಭೀಮಾರ್ಜುನ, ನಕುಲ, ಸಹದೇವ, ದ್ರೌಪದಿಯಿಂದೊಡಗೂಡಿ ಯಜ್ಞಕ್ಕೆ ಸಕಲ ರಾಜರನ್ನು ಕರೆಯಿಸಿದ್ದು ವಿಶೇಷವಾಗಿತ್ತು. ಯಾಗ ಮಂಟಪ ಮುತ್ತು ರತ್ನಗಳಿಂದ ಅಲಂಕೃತಗೊಂಡು ಸಾಕ್ಷಾತ್‌ ದೇವಲೋಕವನ್ನೇ ಹೋಲುವಂತಿತ್ತು.

ಇಂತಹ ಅಭೂತಪೂರ್ವ ಯಾಗಶಾಲೆ ನೋಡಲು ದುರ್ಯೋಧನ ತನ್ನ ಮಾವ ಶಕುನಿಯೊಂದಿಗೆ ಬಂದಿದ್ದ. ಯಾಗದ ಹೊಳಪು ನೋಡಿ ಬೆರಗಾದ ಕೌರವ ದೊರೆ ಇದು ನೀರಿನಂತೆ ಇದ್ದದ್ದು ನೋಡಿ ತನ್ನ ವಸ್ತ್ರಗಳನ್ನು ಮೇಲೆತ್ತಿ ಮೆಲ್ಲ ಮೆಲ್ಲಗೆ ನಡೆಯುತ್ತಿದ್ದ ಈ ದೃಶ್ಯ ನೋಡಿದ ದ್ರೌಪದಿ ಹಾಗೂ ಅವಳ ಸಖೀಯರು ತಮಾಷೆ ಮಾಡಿ ನಗುತ್ತಾರೆ.ಇದರಿಂದ ಕ್ರೋಧಗೊಂಡ ದುರ್ಯೋಧನ ಮುಂದೆ ಮುಂದೆ ಸಾಗುತ್ತಾ ನಿಜವಾದ ನೀರು ಇರುವ ಜಾಗದಲ್ಲಿ ಕಾಲು ಜಾರಿ ಬಿದ್ದ ಇದನ್ನು ನೋಡಿದ ದ್ರೌಪತಿ ಸಹಿತ ಎಲ್ಲರೂ ಗೊಳ್ಳೆಂದು ನಕ್ಕರು. ಅವಮಾನಿತನಾದ ಕೌರವೇಶ್ವರನನ್ನು ಮಾವ ಶಕುನಿ ಸಮಾಧಾನಪಡಿಸಿ ಯಾಗ ಶಾಲೆಗೆ ಹೋಗಿ ವೈಭವದ ಯಾಗ ನೋಡುತ್ತಾರೆ. ಇಂತಹ ಅದ್ದೂರಿಯಾದ ಸಂಭ್ರಮದ ರಾಜಸೂಯ ಯಾಗ ನೋಡಿ ಬೆರಗಾದ ಕೌರವ ದೊರೆ ಮನದಲ್ಲಿ ತನ್ನ ಅವಮಾನ ಸೇಡು ತೀರಿಸಿ ಕೊಳ್ಳುವ ಇಂಗಿತ ಶಕುನಿಯಲ್ಲಿ ತಿಳಿಸಿದಾಗ, ಶಕುನಿ ಪಾಂಡವರ ಮೇಲೆ ಹೇಗೆ ಸೇಡು ತೀರಿಸುವ ಚಿಂತನೆ ಮಾಡಿ ಪಾಂಡವರನ್ನು ಪಗಡೆ ಆಟಕ್ಕೆ ಕರೆದು ಮೋಸದಿಂದ ಸೋಲಿಸುವ ಯೋಜನೆ ಹಾಕಿಕೊಂಡರು. ಅನಂತರ ಪಾಂಡವರೊಂದಿಗೆ ಪಗಡೆ ಆಡಿ ಮೋಸಮಾಡಿ ಅವರನ್ನು ಸೋಲಿಸಿ ಕಾಡಿಗೆ ಅಟ್ಟಿದರು.

ಇತ್ತ ಪಾಂಡವರು ಕಾಡಿನಲ್ಲಿ ಕಷ್ಟದಲ್ಲಿಯೇ ಜೀವನ ಸಾಗಿಸುತ್ತಾ ಕಾಲಕಳೆಯುತ್ತಿರುತ್ತಾರೆ. ಆಗ ಮಾತೆ ಕುಂತಿದೇವಿ ತನ್ನ ಮಕ್ಕಳೊಂದಿಗೆ ಆಪದ್ಬಾಂಧವ ಶ್ರೀಕೃಷ್ಣನನ್ನು ಪ್ರಾರ್ಥಿಸು ತ್ತಾರೆ. ಶ್ರೀಕೃಷ್ಣ ಇವರ ಕರೆಗೆ ಬಂದು ಇವರ ಕಷ್ಟಗಳನ್ನು ಕೇಳಿ ನಿಮಗೆ ಒಂದು ವಿಶಿಷ್ಟ ವ್ರತದ ಬಗ್ಗೆ ಹೇಳುತ್ತೇನೆ.ಅದನ್ನು ಮಾಡಿ ನಿಮ್ಮ ತೊಂದರೆಗಳು ದೂರವಾಗಲಿವೆ. ಅದುವೇ ಶ್ರೀ ಅನಂತವ್ರತ ಇದು ಭಾದ್ರಪದ ಶುಕ್ಲಪಕ್ಷ ಚತುರ್ದಶಿಯಂದು ಮಾಡಬೇಕು. ಅನಂತ ಎಂದರೆ ನಾನೇ ಆಗಿರುತ್ತೇನೆ ಎಂದು ಅನಂತವ್ರತದ ವಿಧಿವಿಧಾನ ತಿಳಿಸುತ್ತಾ ಪಾಂಡವರಿಗೆ ಅನುಗ್ರಹಿಸುತ್ತಾನೆ. ಪಾಂಡವರು ಪ್ರತಿವರ್ಷ ಈ ಅನಂತವ್ರತ ಆಚರಿಸಿ ತಮ್ಮ ಕಷ್ಟಗಳನ್ನು ಬಗೆಹರಿಸಿಕೊಂಡಂತಹ ಅನಂತವ್ರತ ಕ್ರಮೇಣ ಭೂಲೋಕದಲ್ಲಿ ಆಚರಣೆಗೆ ಬಂದು ಅಂದು ಇಂದು ಮುಂದು ನಡೆಯುವಂತಾಯಿತು.

ಅನಂತವ್ರತ ಆಚರಣೆಯ ವಿಧಾನ
ಈ ವ್ರತದಲ್ಲಿ ದಭೆìಯಿಂದ ಶೇಷನ ಪ್ರತಿಮೆ ತಯಾರಿಸಿ ಮಂಡಲ ಬರೆದು ಕಲಶ ಸ್ಥಾಪನೆ ಮಾಡಿ ಗಂಧ ತುಲಸೀ ಪುಷ್ಪಗಳಿಂದ ಅರ್ಚಿಸಿ ಪೂಜಿಸಿ ವಿವಿಧ ಬಗೆಯ ಭಕ್ಷ್ಯಗಳನ್ನು ನೈವೇದ್ಯ ಮಾಡಿ ಮಹಾಮಂಗಳಾರತಿ ಮಾಡುವುದು. ವ್ರತದ ವಿಶೇಷವೆಂದರೆ ಕುಂಕುಮದಿಂದ ಲೇಪಿತ ವಾದ ಹದಿನಾಲ್ಕು ಗಂಟುಗಳುಳ್ಳ ದಾರಗಳಿಂದ ಗಂಧ ಪುಷ್ಪಗಳಿಂದ ಪೂಜಿತ ದಾರವನ್ನು ಗಂಡಸರು ಬಲತೋಳಿಗೆ, ಹೆಂಗಸರು ಎಡತೋಳಿಗೆ ಕಟ್ಟಿಕೊಂಡು ಈ ದಾರ ಕಟ್ಟಿಕೊಂಡು ಹದಿನಾಲ್ಕು ಬಾರಿ ನಮಸ್ಕರಿಸಬೇಕು. ಹದಿನಾಲ್ಕು ಗಂಟುಗಳಲ್ಲಿ ಮಹಾವಿಷ್ಣುವಿನ ಹದಿನಾಲ್ಕು ನಾಮಗಳ ಹೆಸರು ಹೇಳುತ್ತಾ ಹದಿನಾಲ್ಕು ಬಾರಿ ನಮಸ್ಕರಿಸುವುದೇ ಅನಂತವ್ರತದ ವಿಶೇಷಗಳಲ್ಲಿ ಒಂದು. ನೈವೇದ್ಯಕ್ಕೂ ಹದಿನಾಲ್ಕು ಬಗೆಯ ಹಣ್ಣುಗಳು ಹಾಗೂ ಹದಿನಾಲ್ಕು ಬಗೆಯ ನೈವೇದ್ಯ ಮತ್ತು ಹದಿನಾಲ್ಕು ಆರತಿ ಬೆಳಗವುದು ಕೂಡ ಅನಂತವ್ರತದ ವಿಶೇಷ.

ಟಾಪ್ ನ್ಯೂಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.